ಜಿಲ್ಲಾ ಫುಲೆ ಶಿಕ್ಷಕಿಯರ ಸಂಘದ ಕಾರ್ಯಕಾರಿಣಿ ಸಭೆ ಯಶಸ್ವಿ

ವಿಜಯನಗರ ಸೆ.26 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ವಿಜಯನಗರ
ಶನಿವಾರ ನಿನ್ನೆ ಮಧ್ಯಹ್ನ1-30 ನಿಮಿಷಕ್ಕೆ ಸಭೆ ಪ್ರಾರಂಭವಾಗಿ, ಕಾರ್ಯಕ್ರಮದಲ್ಲಿ
ಶ್ರೀ ಮತಿ ರೇಶ್ಮಾ. ಕೆ.ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಮತಿ ರೂಪ.ಡಿ.ಕೆ.ಜಿಲ್ಲಾ ಸಂಘಟನಾ ಕಾಯ೯ದಶಿ೯ ಎಲ್ಲರನ್ನೂ ಸ್ವಾಗತಿಸಿದರು.
ಎಲ್ಲಾ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳಿಂದ ಮಾತೆ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾಚ೯ನೆ ಮಾಡಲಾಯಿತು.
ಈ ಸಭೆಯ ಇಂದಿನ ಪ್ರಸ್ತಾವಿಕ ನುಡಿ ತಾಲೂಕು ಘಟಕ ಹೊಸಪೇಟೆಯ ಅಧ್ಯೆಕ್ಷೆಯಾದ ಶ್ರೀಮತಿ ಹನುಮಕ್ಕನವರು ನಡೆಸಿಕೊಟ್ಟರು.ವಿಜಯನಗರ ಜಿಲ್ಲೆಯ ತಾಂತ್ರಿಕ ಸಮಿತಿಯ ಪರಿಚಯ ಶ್ರೀಮತಿ ಡಾ. ಉಷರಾಣಿ ಹೊಸಪೇಟೆ ಪ್ರಧಾನಕಾಯ೯ದಶಿ೯ಯವರು ಪರಿಚಯಿಸಿದರು.ನಂತರ ಬಂದಂಥ ಎಲ್ಲಾ ಪದಾಧಿಕಾರಿಗಳ ಅನಿಸಿಕೆಗಳನ್ನು ಹಂಚಿಕೊಳ್ಳಲು ತಿಳಿಸಲಾಯಿತು.
ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಉಮಾದೇವಿ ಸಂಘದ ಚರ್ಚಾ ವಿಷಯವನ್ನು ಈ ಕೆಳಗಿನಂತೆ ತಿಳಿಸಿದರು.

  1. ಜಿಲ್ಲಾ ಘಟಕದ ಉದ್ಘಾಟನ ಕಾಯ೯ಕ್ರಮದ ಬಗ್ಗೆ.
    2.ಮಹಿಳಾ ಶಿಕ್ಷಕಿಯರ ಸದಸ್ಯತ್ವದ ರಷೀದಿ ಬಗ್ಗೆ ಮಾಹಿತಿ.
    3.ಎಲ್ಲಾ ತಾಲೂಕುಗಳಲ್ಲಿ ತಾಂತ್ರಿಕ ಸಮೀತಿ ರಚನೆಯ ಬಗ್ಗೆ ಮಾಹಿತಿ.
    4.ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯ ನಿಮಿತ್ಯ ವಿಡಿಯೋ ಮಾಡುವ ಬಗ್ಗೆ
    5.ತಾಲೂಕು ಹಂತದಲ್ಲಿ ಸಂಘದ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮಾಹಿತಿ ಕೊಡಲಾಯಿತು.
    ಚಚೆ೯ಯಲ್ಲಿ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ,ಪ್ರಧಾನಕಾಯ೯ದಶಿ೯ಗಳು , ಕೋಶಾಧ್ಯಕ್ಷರು ,ಗೌರವಾಧ್ಯಕ್ಷರು ,ಉಪಾಧ್ಯಕ್ಷರು ,ಸಂಘಟನಾಕಾಯ೯ದಶಿ೯ಗಳು ,ಸಹಕಾಯ೯ದಶಿ೯ಗಳು ಎಲ್ಲರೂ ಈ ಸಭೆಯಲ್ಲಿ ಉಪಸ್ಥಿತರಿದ್ದರು .
    ಈ ಎಲ್ಲಾ ಕಾಯ೯ಕ್ರಮದ ನಿರೂಪಣೆಯನ್ನು ವಿಜಯನಗರ ಜಿಲ್ಲೆಯ ಪ್ರಧಾನಕಾ೯ದಶಿ೯ಯಾದ ಶ್ರೀ ಮತಿ ಅರುಂಧತಿ ಇವರು ತುಂಬಾ ಚೆನ್ನಾಗಿ ನಡೆಸಿಕೊಟ್ಟರು.

ಒಮ್ಮೆ ಬಯಸಿದ ಜಿಲ್ಲೆಗಳಿಗೆ ವರ್ಗಾವಣೆ ಕೊಡಿ- ಡಾ.ಲತಾ ಮುಳ್ಳೂರ ಸರ್ಕಾರಕ್ಕೆ ಮನವಿ

ಧಾರವಾಡ ಸೆ.25 ಹತ್ತು ಹಲವಾರು ವರ್ಷಗಳಿಂದ ತಮ್ಮ ಸ್ವಂತ ಜಿಲ್ಲೆ ತೊರೆದು,ತಮ್ಮ ತಂದೆ ತಾಯಿ ಬಂದು ಬಳಗ ಅಲ್ಲದೇ ಕುಟುಂಬಗಳನ್ನೇ ದೂರ ಮಾಡಿ ನೂರಾರು ಕಿಲೋ ಮೀಟರ್ ದೂರದ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತಿರುವ ಸಾವಿರಾರು ಶಿಕ್ಷಕರಿದ್ದಾರೆ. ಅಂತಹ ಶಿಕ್ಷಕರ ಕೌಟುಂಬಿಕ ಬದುಕು ಶೋಚನೀಯ ಸ್ಥಿತಿ ತಲುಪಿದ್ದು,ಮಾನಸಿಕವಾಗಿ ಕುಗ್ಗಿಹೋಗಿರುತ್ತಾರೆ, ಗಂಡ ಹೆಂಡತಿಯರ ಸಂಬಂದ ಅನೇಕ ವಿಚ್ಚೇದನಗಳ ಕಡೆ ತಿರುಗಿ ಸಂಸಾರದಲ್ಲೂ ನೆಮ್ಮದಿ ಸಿಗದಂತಾಗಿದೆ..ಇಳಿವಯಸ್ಸಿನ ತಂದೆ ತಾಯಂದಿರನ್ನು ಸಹಾ ನೋಡಿಕೊಳ್ಳದ ಸ್ಥಿತಿ ಇದೆ.

ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ಶಿಕ್ಷಕಿಯರು ತಮ್ಮ ಹಲವಾರು ಸಮಸ್ಯೆಗಳ ನಡುವೆ ಈಗಾಗಲೇ ಒಂದೇ ಶಾಲೆಯಲ್ಲಿ 10-15 ವರ್ಷಗಳನ್ನು ಸಹಾ ಪೂರೈಸಿರುತ್ತಾರೆ‌. ನಾನಾ ಕಾರಣಗಳಿಂದಾಗಿ ಈ ವರ್ಷದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಬಹುತೇಕ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ, ಅಲ್ಲದೇ ಇತ್ತೀಚೆಗೆ ಶಿಕ್ಷಕರ ನೇಮಕಾತಿ ಕೂಡ ನಡೆಸಲು ಘನ ಸರ್ಕಾರ ತೀರ್ಮಾನಿಸಿದೆ. ಇಂತಹ ಸಂದರ್ಭದಲ್ಲಿ ಹೊಸ ನೇಮಕಾತಿ ಪ್ರಾರಂಬಿಸುವ ಮುನ್ನ ಪ್ರಥಮ ಹಂತವಾಗಿ ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಶಿಕ್ಷಕ-ಶಿಕ್ಷಕಿಯರ ಕಡೆ ಗಮನ ಹರಿಸಿ ಪ.ಬಂಗಾಳದಲ್ಲಿ ಅವಕಾಶ ಕಲ್ಪಿಸಿದ ಹಾಗೇ ಕರ್ನಾಟಕದಲ್ಲೂ ಶಿಕ್ಷಕರಿಗೆ ತಮ್ಮ ಸೇವಾವಧಿಯಲ್ಲಿ ಒಮ್ಮೆ ಬಯಸಿದ ಜಿಲ್ಲೆಗಳಿಗೆ ವಿಶೇಷ ವರ್ಗಾವಣೆ ಪ್ರಕ್ರಿಯೆ ನಡೆಸಿ ಶಿಕ್ಷಕರ ಕೌಟುಂಬಿಕ ಬದುಕನ್ನು ನೆಮ್ಮದಿಯಿಂದ ಸಾಗಿಸಲು ವಯಸ್ಸಾದ ತಂದೆ ತಾಯಿಗಳನ್ನು ಸಾಕಿ ಸಲುಹಲು ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯರಾದ ಡಾ.ಲತಾ.ಎಸ್.ಮುಳ್ಳೂರ ರವರು ಘನ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡಿದ್ದಾರೆ.

ಸಮಾಜ ಸುದಾರಣೆಗಾಗಿ ಪಾದಯಾತ್ರೆ ಕೈಗೊಂಡಿರುವ ಶ್ರೀ ವಿವೇಕಾನಂದ ಹೆಚ್ ಕೆ ರವರಿಗೆ ಫುಲೆ ಶಿಕ್ಷಕಿಯರ ಸಂಘ ಗೌರವ ಸಮರ್ಪಣೆ

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಜನರ ಜೀವನ ಮಟ್ಟ ಸುಧಾರಣೆ ಗುರಿಯೊಂದಿಗೆ ಸಾಗಿರುವ ಜ್ಞಾನಬಿಕ್ಷಾ ಪಾದಯಾತ್ರಿಗಳಾದ ಶ್ರೀ ವಿವೇಕಾನಂದ ಅವರೊಂದಿಗೆ ಸಂವಾದ ಸಭೆ ನಡೆಸಿದ ಸಾವಿತ್ರಿಬಾಯಿಪುಲೆ ಶಿಕ್ಷಕರ ಸಂಘ

ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ರಿಜಿಸ್ಟರ್ ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ತುಮಕೂರು ತಾಲೂಕು ಘಟಕ ಗುಬ್ಬಿ

ದಿನಾಂಕ 20 ಸೆಪ್ಟೆಂಬರ್ 2021ರ ಸೋಮವಾರದಂದು ಜ್ಞಾನ ಬಿಕ್ಷಾ ಪಾದಯಾತ್ರಿಗಳಾದ ಶ್ರೀ ವಿವೇಕಾನಂದ ಹೆಚ್ ಕೆ ರವರು ಗುಬ್ಬಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ತಂಗಿರುವುದನ್ನು ತಿಳಿದ ಗುಬ್ಬಿ ತಾಲೂಕಿನ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿ ಸನ್ಮಾನಿಸಲು ಪ್ರವಾಸಿ ಮಂದಿರಕ್ಕೆ ತೆರಳಿ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು


ಈ ಕಾರ್ಯಕ್ರಮಕ್ಕೆ ಶ್ರೀಯುತ ರಂಗಸ್ವಾಮಯ್ಯ ಸರ್ ಅವರು ಎಲ್ಲರನ್ನೂ ಸ್ವಾಗತಿಸಿದರು ನಂತರ ವಿವೇಕಾನಂದ ಸರ್ ಅವರು ಮಾತನಾಡಿ ಸಮಾಜದ ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ ನಾನು ಪಾದಯಾತ್ರೆಯನ್ನು ಕೈಗೊಂಡಿರುವೆ ಕರ್ನಾಟಕದಾದ್ಯಂತ ಪಾದಯಾತ್ರೆಯನ್ನು ಕೈಗೊಂಡು ಎಲ್ಲ ಇಲಾಖೆಗಳಲ್ಲೂ ನಡೆಯುತ್ತಿರುವ ಭ್ರಷ್ಟತೆಯನ್ನು ಕಡಿಮೆಮಾಡುವ ಉದ್ದೇಶ ಹೊಂದಿದ್ದೇನೆ ಒಮ್ಮೆಲೆ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿಲ್ಲ ಇದೊಂದು ಆಂದೋಲನವಾಗಿದೆ ಎಲ್ಲ ಇಲಾಖೆಗಳಲ್ಲಿರುವ ಒಳ್ಳೆಯವರನ್ನು ಗುರುತಿಸಿ ಅವರನ್ನು ಒಳ್ಳೆತನವನ್ನು ಮೇಲೆ ತರುವುದು ಹಾಗೂ ಕೆಟ್ಟದ್ದನ್ನು ಕಡಿಮೆ ಮಾಡುವ ಪಣತೊಟ್ಟಿರುವೆ ಭ್ರಷ್ಟತೆಯ ಮಟ್ಟ ಪೂರ್ತಿ ನಿರ್ಮೂಲನೆಯಾಗದಿದ್ದರೂ ಕ್ರಮೇಣ ಕಡಿಮೆಯಾದರೆ ನನ್ನ ಆಂದೋಲನಕ್ಕೆ ಪಾದಯಾತ್ರೆಗೆ ಜಯ ಸಿಕ್ಕಂತೆ ಎಂದು ಹೇಳಿದರು ನಂತರ ಸುರೇಶ್ ಸರ್ ಅವರು ಮಾತನಾಡಿ ವಿವೇಕ್ ಸರ್ ಅವರ ಉದ್ದೇಶ ಅತ್ಯಮೂಲ್ಯವಾದದ್ದು ಅವರ ಪಾದಯಾತ್ರೆಗೆ ಜಯ ಸಿಗಲಿ ಎಂದು ಆಶಿಸಿದರು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಯರ ಸಂಘ ಗುಬ್ಬಿ ತಾಲೂಕು ಘಟಕದ ವತಿಯಿಂದ ಸರ್ ರವರನ್ನು ಸನ್ಮಾನಿಸಲಾಯಿತು ಶ್ರೀಯುತ ರವೀಶ್ ಸರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದರು
ಈ ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಅಧ್ಯಕ್ಷರಾದ ಲಕ್ಷ್ಮಿ ಎಸ್ ವಿ ರವರು ಕಾರ್ಯದರ್ಶಿಯವರಾದ ಭಾರತಿ ಭಾಯಿ ರವರು ಪದಾಧಿಕಾರಿಗಳಾದ ಲೀಲಾವತಿ ಪದ್ಮಾವತಿ ತಿಮ್ಮಮ್ಮ ಮಂಜಮ್ಮ ಚಂದ್ರಕಲಾ ಮುಂತಾದವರು ಹಾಜರಿದ್ದರು

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಲೇಖನಸಾಮಗ್ರಿಗಳ ವಿತರಣೆ

ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ಗುಬ್ಬಿ

ದಿನಾಂಕ 15 ಸೆಪ್ಟೆಂಬರ್ 2021ರ ಬುಧವಾರದಂದು ಗುಬ್ಬಿ ತಾಲೂಕಿನ ಬೆಲವತ್ತ ಕ್ಲಸ್ಟರ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ ಕೋಡಿಹಳ್ಳಿ ಯಲ್ಲಿ ಶಿಕ್ಷಕರ ದಿನಾಚರಣೆ ಜೊತೆಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಲಯನ್ಸ್ ಕ್ಲಬ್ ಗುಬ್ಬಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಾಗೂ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು ಶಾಲಾ ಮಕ್ಕಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು
ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಗಣ್ಯರು ದೀಪಬೆಳಗಿಸಿ ನಂತರ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆಯವರ ಫೋಟೋಗಳಿಗೆ ಪುಷ್ಪ ನಮನ ಸಲ್ಲಿಸಿದರು
ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ ಅವರು ಮಾತನಾಡಿ ಗುಬ್ಬಿ ತಾಲೂಕಿನಲ್ಲಿ ಸಂಘದ ಚಟುವಟಿಕೆಗಳು ಅತ್ಯುತ್ತಮ ರೀತಿಯಲ್ಲಿ ನಡೆಯುತ್ತಿದ್ದು ಇದಕ್ಕೆಲ್ಲಾ ಕಾರಣರಾದ ಸಂಘದ ಬೆನ್ನೆಲುಬು ಗಳಂತೆ ಇರುವ ಶ್ರೀಯುತ ರಂಗಸ್ವಾಮಿ ಸರ್ ರವಿ ಸರ್ ಹಾಗೂ ಸುರೇಶ್ ಸರ್ ಅವರನ್ನು ತಮ್ಮ ಸಹೋದರರು ಎಂದು ಗುಬ್ಬಿ ತಾಲೂಕು ನನ್ನ ತವರುಮನೆ ಎಂದು ಭಾವನಾತ್ಮಕವಾಗಿ ಮಾತನಾಡಿದರು ಜೊತೆಗೆ ಮಾತೃಸಂಘ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಲ್ಲಿ ನಮ್ಮ ಸಂಘವು ಯಾವ ಸಂಘದ ವಿರೋಧಿಯೂ ಅಲ್ಲ ನಾವು ನಿಮ್ಮ ಜೊತೆಗಿರುತ್ತೇವೆ ನಮ್ಮನ್ನು ನಿಮ್ಮ ಕೆಲಸಕಾರ್ಯಗಳಿಗೆ ಆಹ್ವಾನಿಸಿ ನಾವು ನಮ್ಮ ಕಾರ್ಯಕ್ರಮಗಳಿಗೆ ನಿಮ್ಮನ್ನು ಆಹ್ವಾನಿಸುತ್ತೇವೆ ಎಂದರು.

ನಂತರ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಉಮೇಶ ರವರು ಮಾತನಾಡಿ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಜೊತೆ ಯಾವಾಗಲೂ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಮಲ್ಲಪ್ಪನವರು ಮಾತನಾಡಿ ಅವರು ಕೂಡ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಉತ್ತಮ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು ಇದಕ್ಕೆ ಸದಾ ನಮ್ಮ ಬೆಂಬಲವಿರುತ್ತದೆ ಎಂದು ಹೇಳಿದರು
ಗುಬ್ಬಿ ತಾಲೂಕಿನ ಅಕ್ಷರದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ ರವರು ಮಾತನಾಡಿ ಸಂಘಟನೆ ಮಾಡಲು ಎಲ್ಲರಿಗೂ ಹಕ್ಕಿದೆ ನಾನು ಕೂಡ ಸಂಘಟನೆಗಾಗಿ ಹೋರಾಡಿದವನು ತಾಲೂಕಿನ ಎಲ್ಲಾ ಸಂಘಗಳು ಸಂಘಟನೆಗಳು ಕೈಜೋಡಿಸಿಕೊಂಡು ಕೆಲಸಕಾರ್ಯಗಳನ್ನು ಕಾರ್ಯಕ್ರಮಗಳನ್ನು ಮಾಡುತ್ತ ಮುನ್ನಡೆಯಬೇಕು ಎಲ್ಲಾ ಸಂಘ ಹಾಗೂ ಸಂಘಟನೆಗಳ ಉದ್ದೇಶವೂ ಒಂದೇ ಶಿಕ್ಷಕ ಶಿಕ್ಷಕಿಯರ ಹಿತ ಕಾಪಾಡುವುದು ಆದುದರಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸವನ್ನು ಮಾಡುತ್ತಾ ಮುನ್ನಡೆಯಿರಿ ಎಂದು ಎಲ್ಲರಿಗೂ ಕಿವಿಮಾತು ಹೇಳಿದರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮಕ್ಕೆ ಹಾಜರಿದ್ದ ಎಲ್ಲಾ ಗಣ್ಯರನ್ನು ಸನ್ಮಾನಿಸಿದರು
ಗುಬ್ಬಿ ತಾಲೂಕಿನ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ರಂಗಸ್ವಾಮಿಯವರು ಶ್ರೀಯುತ ರವೀಶ್ ರವರು ಹಾಗೂ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ರವರನ್ನು ಸನ್ಮಾನಿಸಲಾಯಿತು ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಇತರೆ ಗಣ್ಯರು ಹಾಗೂ ಶಿಕ್ಷಕ-ಶಿಕ್ಷಕಿಯರು ಕೂಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ವೈಯಕ್ತಿಕವಾಗಿ ಸನ್ಮಾನಿಸಿದರು
ಲಯನ್ಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಗಳನ್ನು ಹಾಗೂ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದವತಿಯಿಂದ ಲೇಖನ ಸಾಮಗ್ರಿಗಳು ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕಿನ ಅಕ್ಷರದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ ರವರು
ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಮಲ್ಲಪ್ಪನವರು ಗುಬ್ಬಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗೊರವಯ್ಯ ನವರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಉಮೇಶ್ ಸರ್ ಅವರು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತುಮಕೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾ ದೇವಿಯವರು ಬೆಲವತ್ತ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರೂಪ ಅವರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗುಬ್ಬಿ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು ಕೊರಟಗೆರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಸುಜಾತಾ ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ಪ್ರವೀಣ ಕುಮಾರಿಯವರು ಗುಬ್ಬಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಿ ಬಾಯಿ ಹಾಗೂ ಖಜಾಂಚಿ ಆದ ಶ್ರೀಮತಿ ಅನಿತಾ ಪದಾಧಿಕಾರಿಗಳಾದ ಶ್ರೀಮತಿ ವಿಶಾಲಾಕ್ಷಿ ಶ್ರೀಮತಿ ಲೀಲಾವತಿ ಹೆಚ್ ಬಿ ಶ್ರೀಮತಿ ಪುಷ್ಪ ಶ್ರೀಮತಿ ಲೀಲಾವತಿ ಶ್ರೀಮತಿ ದಾಕ್ಷಾಯಣಮ್ಮ ಶ್ರೀಮತಿ ರಾಜಮ್ಮ ಗುಬ್ಬಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶ್ರೀಯುತ ಎಚ್ ಕೆ ಶಶಿಧರ್ ಶ್ರೀಯುತ ಶಿವಣ್ಣ ಶ್ರೀಯುತ ಅರುಣ್ ಕುಮಾರ್ ಶ್ರೀಯುತ ಸಿದ್ದಲಿಂಗೇಗೌಡ ಗುಬ್ಬಿ ತಾಲೂಕಿನ NPS ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರಸಾದ್ ರವರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಬೆಲವತ್ತ ಕ್ಲಸ್ಟರ್ ನ ಶಿಕ್ಷಕ ಶಿಕ್ಷಕಿಯರು ಗ್ರಾಮಸ್ಥರು ಹಾಜರಿದ್ದರು ಶಾಲೆಯ ಅಡುಗೆ ಸಿಬ್ಬಂದಿಯವರು ಎಲ್ಲರಿಗೂ ಹೋಳಿಗೆ ಊಟವನ್ನು ತಯಾರಿಸಿದ್ದು ಊಟವು ತುಂಬಾ ರುಚಿಕರವಾಗಿತ್ತು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಏರ್ಪಡಿಸಿದ್ದರು ಸರ್ ಅವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಗುಬ್ಬಿ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲಾಯಿತು

NPS ಶಿಕ್ಷಕರ ಅಕಾಲಿಕ ಮರಣ,ಮೃತರ ಕುಟುಂಬಕ್ಕೆ 1ಲಕ್ಷ ರೂ ಧನ ಸಹಾಯ

ಶಿಕಾರಿಪುರ,ಸೆ.06 ತಾಲ್ಲೂಕಿನ GHPS ಹರಗಿ ಶಾಲೆಯ ಶಿಕ್ಷಕರಾದ ಶ್ರೀಯುತ ದಿನೇಶ್ ರವರು ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ್ದು, ಸದರಿ ಶಿಕ್ಷಕರು NPS ಯೋಜನೆಗೆ ಒಳಪಟ್ಟವರಾಗಿದ್ದು ನಮ್ಮೆಲ್ಲರಿಗೂ ಗೊತ್ತಿರುವಂತೆ NPS ಯೋಜನೆಗೆ ಒಳಪಡುವ ನೌಕರರ ಮರಣ ಉಪಧನವು ಅತಿ ಕಡಿಮೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ
ಮೃತ ಶಿಕ್ಷಕರ ತಾಯಿಯವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತಿದ್ದು ಅವರ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಶಿಕಾರಿಪುರ ಘಟಕದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಾಗೂ NPS ಶಿಕ್ಷಕರ ಸಂಘಗಳ ವತಿಯಿಂದ 1 ಲಕ್ಷ ರೂ ಹಣದ ಚೆಕ್ ನ್ನು ಸೆಪ್ಟಂಬರ್-05 ಶಿಕ್ಷಕರ ದಿನಾಚರಣೆಯಂದು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ ಎಸ್ ಗುರುಮೂರ್ತಿಯವರ ಮುಖಾಂತರ  ವಿತರಿಸಲಾಯಿತು ಎಂದು ಶಿಕಾರಿಪುರದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಎಂ ಸುಣಗಾರ್ ತಿಳಿಸಿದ್ದಾರೆ.

ಶಿಕ್ಷಕರ ದಿನಾಚರಣೆ – ಎರಡು ಭಾವಚಿತ್ರಗಳಿಗೂ ಸಮಾನ ಗೌರವ ನೀಡಿ ಪುಷ್ಪಾರ್ಪಣೆ ಮಾಡಿದ ಮುಖ್ಯಮಂತ್ರಿಗಳು-ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಕಿಯರ ಸಂಘ

ಸನ್ಮಾನ್ಯ ಗೌರವಯುತ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶಿಕ್ಷಣ ಸಚಿವರು ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಯಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಮಾತೇ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರವನ್ನೂ ಇರಿಸಿ,ಎರಡೂ ಭಾವಚಿತ್ರಗಳಿಗೂ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ,ಇದು ಶಿಕ್ಷಕ ಶಿಕ್ಷಕಿಯರ ಮೇಲಿರುವ ಅವರ ಅಭಿಮಾನವನ್ನು ತೋರಿಸುತ್ತದೆ,ಸಮಸ್ತ ಕರ್ನಾಟಕದ ಮಹಿಳಾ ಶಿಕ್ಷಕಿಯರ ಪರವಾಗಿ ಘನ ಸರ್ಕಾರದ ಮಾನ್ಯಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಗೌರವಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತದೆ.

ರಾಜ್ಯಾದ್ಯಂತ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಇದೇ ರೀತಿಯಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ದೊಂದಿಗೆ ಮಾತೇ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರವನ್ನು ಸಹಾ ಇಟ್ಟು ಗೌರವ ಸಮರ್ಪಣೆ ಆಗಬೇಕು. ಪುರುಷ ಪ್ರಧಾನವಿದ್ದ ಅಂತಹ ಕಾಲದಲ್ಲಿ ,ಶಿಕ್ಷಣಕ್ರಾಂತಿಯನ್ನೇ ಮೊಳಗಿಸಿ ಭಾರತದ ಪ್ರಥಮ ಶಿಕ್ಷಕಿ ಬಿರುದು ಪಡೆದ ಅಕ್ಷರಮಾತೆ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ರವರಿಗೆ ಯಾವುದೇ ಹಂತದ ಶೈಕ್ಷಣಿಕ ಕಾರ್ಯಕ್ರಮಗಳಲ್ಲೂ ಸಹಿತ ಅವರ ಭಾವಚಿತ್ರವಿಟ್ಟು ಪೂಜಿಸಿ ಗೌರವಿಸುವಂತ ಶಿಷ್ಟಾಚಾರ ಎಲ್ಲಾ ಶೈಕ್ಷಣಿಕ ದಿನಾಚರಣೆಯಲ್ಲಿ ಬರಬೇಕು
ಪ್ರತಿ ಶಾಲೆಯಲ್ಲಿಯೂ ಸಹಾ ಅವರ ಭಾವಚಿತ್ರ ಇರಬೇಕು
ಶಿಕ್ಷಕರ ದಿನಾಚರಣೆಯಂದು,ಡಾ ರಾಧಾಕೃಷ್ಣನ್ ರವರಿಗೆ ಗೌರವ ಸಲ್ಲುವಂತೆಯೇ ಮಾತೆ ಸಾವಿತ್ರಿಬಾಯಿ ಫುಲೆ ರವರಿಗೂ ಸಲ್ಲಬೇಕು ಇದರಿಂದ ಎಲ್ಲರೂ ತಮ್ಮ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕತೆ ಪಡೆಯಬಹುದಾಗಿದೆ,ಇದು ನಮ್ಮೆಲ್ಲರ ಆಶಯವೂ ಆಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆ ತಿಳಿಸಿದೆ.

ಡಾ.ಮುಳ್ಳೂರ ರವರ ಎರಡು ದಿನಗಳ ತುಮಕೂರು ಜಿಲ್ಲಾ ಪ್ರವಾಸ ಸಂಪೂರ್ಣ ಯಶಸ್ವಿ

ತುಮಕೂರು ಆ.22 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್ ಮುಳ್ಳೂರ ರವರ ಎರಡು ದಿನಗಳ ತುಮಕೂರು ಜಿಲ್ಲಾ ಪ್ರವಾಸ ಸಂಪೂರ್ಣ ಯಶಸ್ವಿಯಾಗಿದೆ.

ಹೌದು ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕಗಳು ಜಂಟಿಯಾಗಿ ಅಯೋಜನೆ ಮಾಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಭೆಗೆ ಧಾರವಾಡ ದಿಂದ ಶನಿವಾರ ಬೆಳಿಗ್ಗೆ ತುಮಕೂರಿಗೆ ಬಂದಿಳಿದಿದ್ದ ಡಾ.ಲತಾ.ಎಸ್.ಮುಳ್ಳೂರ ರವರು ನೇರವಾಗಿ ಶ್ರೀ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಬೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ನಂತರದಲ್ಲಿ ಶ್ರೀ ಮಠಕ್ಕೆ ಆಗಮಿಸಿದ್ದ ಕೃಷಿ ಹಾಗೂ ರೈತರ ಕಲ್ಯಾಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರನ್ನು ಬೇಟಿ ಮಾಡಿ ಗೌರವಿಸಿ ಸಂಘಟನೆಗೆ ಸಹಕಾರ,ಬೆಂಬಲ ಕುರಿತಂತೆ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಶ್ರೀ ಮಠಕ್ಕೆ ಬಂದಿದ್ದ ತುಮಕೂರಿನ ಮಾಜಿ ಮಂತ್ರಿಗಳಾದ ಶ್ರೀ ಶಿವಣ್ಣರವರನ್ನೂ ಸಹಾ ಗೌರವಿಸಿದರು ಹಾಗೆಯೇ ಹೆಸರಾಂತ ಚಲನಚಿತ್ರ ನಟರು,ಕನ್ನಡಪರ ಹೋರಾಟಗಾರರಾದ ಮುಖ್ಯಮಂತ್ರಿ ಚಂದ್ರುರವರನ್ನು ಗೌರವಿಸಿ, ಸಂಘಟನೆ ಗುರಿ ಉದ್ದೇಶ ಕುರಿತಂತೆ ಚರ್ಚಿಸಿದರು. ತದ ನಂತರ ನೇರವಾಗಿ ತುಮಕೂರು ಪ್ರವಾಸಿ ಮಂದಿರಕ್ಕೆ ತೆರಳಿ ಮಾದ್ಯಮರೊಂದಿಗೆ ಪತ್ರಿಕಾ ಗೋಷ್ಟಿ ನಡೆಸಿದರು.


ಮದ್ಯಾಹ್ನ ಎರಡಕ್ಕೆ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಎರಡೂ ಜಿಲ್ಲೆಗಳ ಎಲ್ಲಾ ತಾಲ್ಲೂಕು ಪದಾಧಿಕಾರಿಗಳೊಂದಿಗೆ ಸಂಘಟನೆ ಕುರಿತಂತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಶಿಕ್ಷಕಿಯರು ಒಟ್ಟುಗೂಡಿ ಸಂಘಟನೆಯನ್ನು ಬಲಪಡಿಸಬೇಕು, ಎದುರಾಗುವ ಯಾವುದೇ ಸಮಸ್ಯೆಗಳನ್ನು ದೈರ್ಯದಿಂದ ಎದುರಿಸಬೇಕು ಎಂದು ಭಾಗವಹಿಸಿದ್ದ ಎಲ್ಲರಿಗೂ ದೈರ್ಯತುಂಬಿ ಆತ್ಮವಿಶ್ವಾಸ ಮೂಡಿಸಿದರು.


ಸಭೆಯು ಸಂಪೂರ್ಣವಾಗಿ ಯಶಸ್ವಿಯಾಯಿತು.
ಎರಡನೇ ದಿನ ಭಾನುವಾರ ಬೆಳಿಗ್ಗೆ ಯೇ ತಿಪಟೂರಿಗೆ ಪ್ರಯಾಣ ಬೆಳಸಿ ಮಾನ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ಬಿ.ಸಿ.ನಾಗೇಶ್ ರವರನ್ನು ಬೇಟಿ ಮಾಡಿ ಗೌರವಿಸಿ ಸನ್ಮಾನಿಸಿದರು. ತಿಪಟೂರು ತಾಲ್ಲೂಕು ಪದಾಧಿಕಾರಿಗಳೊಂದಿಗೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಬೇಟಿ ಮಾಡಿ,ಮಹಿಳಾ ಮೀಸಲಾತಿ ಬೇಡಿಕೆ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು. ಮದ್ಯಾಹ್ನ ತುಮಕೂರಿಗೆ ಮರಳಿ ಇತ್ತೀಚೆಗೆ ನಡೆದಿದ್ದ ಕರೀಕೆರೆ ಶಾಲೆಯ ದುರ್ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸಿ ಅಲ್ಲಿನ ಶಾಲೆಯ ಶಿಕ್ಷಕಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಎರಡು ದಿನಗಳ ತುಮಕೂರು ಪ್ರವಾಸದಲ್ಲಿ ತುಮಕೂರು ಜಿಲ್ಲಾಧ್ಯಕ್ಷರಾದ ಅನುಸೂಯದೇವಿ ಹಾಗೂ ಮಧುಗಿರಿ ಜಿಲ್ಲಾಧ್ಯಕ್ಷರಾದ ರಾಧಮ್ಮ ಹಾಗೂ ಇತರೆ ಪದಾಧಿಕಾರಿಗಳು ಪ್ರತೀ ಸಂದರ್ಭದಲ್ಲೂ ನನ್ನ ಜೊತೆಯಲ್ಲಿದ್ದು ಪ್ರವಾಸದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ ಎಂದು ಡಾ.ಮುಳ್ಳೂರ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎರಡೂ ಜಿಲ್ಲೆಗಳ ಎಲ್ಲಾ ತಾಲ್ಲೂಕು ಪದಾಧಿಕಾರಿಗಳಿಗೂ,ಆತ್ಮೀಯ ಶಿಕ್ಷಕ ಶಿಕ್ಷಕಿಯರಿಗೂ ಧನ್ಯವಾದಗಳನ್ನು ಅರ್ಪಿಸಿ ಭಾನುವಾರ ರಾತ್ರಿ ಧಾರವಾಡಕ್ಕೆ ಪ್ರಯಾಣ ಬೆಳಿಸಿದರು.