ಶಾಸಕರಿಗೆ ಹಾಗೂ ತಾಲ್ಲೂಕಿನ ಅಧಿಕಾರಿಗಳಿಗೆ ವಿವಿಧ ಸೌಲಭ್ಯ ಕೋರಿ ಮನವಿ ಪತ್ರ ಸಲ್ಲಿಸಿದ ಫುಲೆ ಶಿಕ್ಷಕಿಯರ ಸಂಘ

ಸಂಡೂರು ಆಗಸ್ಟ್-01 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಸಂಡೂರಿನಿಂದ, ಅಧ್ಯಕ್ಷರಾದ ಪ್ರೇಮ. ಕೆ , ಪ್ರಧಾನ ಕಾರ್ಯದರ್ಶಿಗಳಾದ ಅರ್ಚನಾ. ಕೆ, ಉಪಾಧ್ಯಕ್ಷರಾದ ಡಾ. ಉಮಾ, ಉಪಾಧ್ಯಕ್ಷರಾದ ಸುನಿತಾ ಕುಮಾರಿ ಟಿ. ಕೆ , ಸಂಘಟನಾ ಕಾರ್ಯದರ್ಶಿಗಳಾದ ನೂರುನ್ನಿಸ ಹಾಜರಿದ್ದು,, ಇನ್ನಿತರ ಸಂಘದ ಸದಸ್ಯರಾದ ಇಸ್ಮಾಯಿಲ್ ಸರ್, ನೂರುಲ್ಲಾ ಸರ್, ಷಣ್ಮುಖಪ್ಪ ಸರ್ ಮತ್ತು ಸಿದ್ದೇಶ್ ಸರ್ ಇವರೆಲ್ಲರ ಸಹಯೋಗದೊಂದಿಗೆ ಸನ್ಮಾನ್ಯ ಶ್ರೀ ಮಾಜಿ ಸಚಿವರು ಹಾಗೂ ಶಾಸಕರಾದ
ಈ.ತುಕಾರಾಮ್ ರವರನ್ನು ಭೇಟಿಯಾಗಿ (1)ಸಿ ಅಂಡ್ ಆರ್ ನೀತಿ ತಿದ್ದುಪಡಿ , (2)ಹಳ್ಳಿಗಳಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಿ ಕೊಡುವುದು, (3)ವರ್ಗಾವಣೆ ಸಮಸ್ಯೆ, (4)ಬಡ್ತಿ ಸಮಸ್ಯೆಯ ಬಗ್ಗೆ, (5)ವಿದ್ಯಾರ್ಥಿವೇತನ ಸಮಸ್ಯೆ , (6)ಹಿಂದಿ ಶಿಕ್ಷಕರ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಲಾಯಿತು,ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ.ಹಾಗೂ

ಬಸ್ ಡಿಪೋ ಮ್ಯಾನೇಜರ್ ರವರಿಗೆ ಕರೆಮಾಡಿ ಹಳ್ಳಿಗಳಿಗೆ ಬಸ್ಸುಗಳನ್ನು ಬಿಡುವಂತೆ ಹೇಳಿದರು.
ನಂತರ ತಾಲೂಕು ಕಚೇರಿಗೆ ಹೋಗಿ ಮಾನ್ಯ ತಹಶೀಲ್ದಾರ್ ಮೇಡಂ ರವರಿಗೆ (7)ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಆಧಾರ್ ಕಾರ್ಡ್ ಸಮಸ್ಯೆ, (8)ವಿದ್ಯಾರ್ಥಿವೇತನದ ಸಮಸ್ಯೆ ಬಗ್ಗೆ ಮತ್ತು (9)ವಿದ್ಯಾರ್ಥಿಗಳಿಗೆ ಸುಲಭವಾಗಿ ಬ್ಯಾಂಕ್ ಖಾತೆ ತೆರೆಯಲು ಸಹಾಯವಾಗುವಂತೆ ಮನವಿಯನ್ನು ಸಲ್ಲಿಸಲಾಯಿತು ,ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ತಹಶೀಲ್ದಾರ್ ಮೇಡಂ ರವರು ಪ್ರತಿ ಗ್ರಾಮ ಪಂಚಾಯಿತಿಗೆ ಆಧಾರ್ ಕಾರ್ಡ್ ಮಾಡುವವರನ್ನು ಕಳುಹಿಸುತ್ತೇವೆ ಒಂದು ದಿನಾಂಕವನ್ನು ಹೇಳುತ್ತೇವೆ , ಆ ದಿನಾಂಕದಂದು ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೇಳಿದರು,ಹಾಗೂ ಸೋಮವಾರದ ದಿನ ಎಲ್ಲಾ (10)ಬ್ಯಾಂಕುಗಳಿಗೆ ಝೀರೋ ಬ್ಯಾಲೆನ್ಸ್ ಅಕೌಂಟ್ ಓಪನ್ ಮಾಡಿಕೊಡುವಂತೆ ಆರ್ಡರ್ ಕಳುಹಿಸುವುದಾಗಿ ಹೇಳಿರುತ್ತಾರೆ,


ನಂತರ ತಾಲೂಕು ಕಚೇರಿಗೆ ಹೋಗಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ (11)ಮಹಿಳಾ ವಿಶ್ರಾಂತಿ ಕೊಠಡಿ, (12)ಶಾಲಾ ಕಾಂಪೌಂಡ್ ನಿರ್ಮಾಣ,
(13)ಶೌಚಾಲಯ ನಿರ್ಮಾಣ, (14)ಶಾಲಾ ಕಾಂಪೌಂಡ್ ಗಳಿಗೆ ಗ್ರಿಲ್ ಹಾಕಿಸಿ ಕೊಡುವಂತೆ ಹಾಗೂ (15)ಪ್ರತಿ ಶಾಲೆಗಳಿಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿ ಕಡೆಯಿಂದ ವ್ಯವಸ್ಥೆ ಮಾಡಲು ಮನವಿಯನ್ನು
ಸಲ್ಲಿಸಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಯಿಂದ ಎಲ್ಲಾ ಶಾಲೆಗಳಿಗೂ ವಾರಕ್ಕೆರಡು ಬಾರಿ ಶೌಚಾಲಯ ಸ್ವಚ್ಛತೆಗೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ಹೇಳಿರುತ್ತಾರೆ ಮತ್ತು ಮಹಿಳೆಯರ ವಿಶ್ರಾಂತಿ ಕೊಠಡಿಗೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ತಿಳಿಸಿ ಸಹಕರಿಸಿರುತ್ತಾರೆ,


ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಹೋಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ(16) ಸಿ ಅಂಡ್ ಆರ್ ರೂಲ್ಸ್ ತಿದ್ದುಪಡಿ,(17)ವರ್ಗಾವಣೆ ಸಮಸ್ಯೆ (18)ಹಿಂದಿ ಶಿಕ್ಷಕರ ಸಮಸ್ಯೆ ಹಾಗೂ (19) ಶಿಕ್ಷಕ ಮಿತ್ರ ಆಪ್ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳಿಯಲು ಎಲ್ಲಾ ಶಿಕ್ಷಕರಿಗೂ ಒಂದು ದಿನದ ತರಬೇತಿಯನ್ನು ಕೊಡುವಂತೆ ಮನವಿಯನ್ನು ಸಲ್ಲಿಸಲಾಯಿತು,(20)GPT ಗಳ ಪರಿವೀಕ್ಷಣಾ ಅವಧಿ ಪೂರ್ಣ ಗೊಂಡಿರುವುದನ್ನು ಸೇವಾ ಪುಸ್ತಕದಲ್ಲಿ ನಮೂದಿಸುವ ಕುರಿತು ಮನವಿ ಸಲ್ಲಿಸಲಾಯಿತು, (21)ಕೋವಿಡ್-19 ನಿಂದ ಮರಣ ಹೊಂದಿದ ಶಿಕ್ಷಕರಿಗೆ ಮತ್ತು (22)ನಿವೃತ್ತಿ ಹೊಂದಿದ ಶಿಕ್ಷಕರಿಗೆ ಒದಗಿಸಬೇಕಾದ ಪರಿಹಾರ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಸಲ್ಲಿಸಲಾಯಿತು.(23)ಶಿಶುಪಾಲನ ರಜೆಯ ಬಗ್ಗೆ ಮನವಿ ನೀಡಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಸನ್ಮಾನ್ಯ ಶ್ರೀ ಕ್ಷೇತ್ರಶಿಕ್ಷಣಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮೇಲಿನ ಎಲ್ಲಾ ಅಧಿಕಾರಿಗಳಿಗೆ ನೀಡಿದ ಮನವಿಗಳನ್ನುಪೂರೈಸುತ್ತೇವೆ ಎಂದು ಸನ್ಮಾನ್ಯ ಶ್ರೀ ಶಾಸಕರು ಭರವಸೆ ನೀಡಿರುತ್ತಾರೆ ಎಂದು
ಅಧ್ಯಕ್ಷರು ಪ್ರೇಮ. ಕೆ ಹಾಗೂ ಪ್ರಧಾನ ಕಾರ್ಯದರ್ಶಿಗಳು ಅರ್ಚನಾ.ಕೆ ತಿಳಿಸಿದ್ದಾರೆ

ಔಷಧೀಯ ಸಸ್ಯಗಳನ್ನು ನೆಟ್ಟ ಶಿವಮೊಗ್ಗದ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ ಜು.28.ಪರಿಸರಕ್ಕೆ ಯಾರು ತೋರಿಸಬೇಕು ಕನಿಕರ, ಪರಿಸರ ರಕ್ಷಿಸಿ ನಾವು ಬಾಳೋಣ ಸುಖಕರ. ಜನರಿಗಿರುವ ಆಮ್ಲಜನಕದ ಕೊರತೆ, ದೂರಮಾಡುವ ಅಹಂ ಮರೆತೆ. ಇಂದು ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ನಾಗರಾಜ್ ರವರು ಹಾಗೂ ECO ಶ್ರೀಯುತ ಗುಡ್ಡಪ್ಪ ಗಾಣಿಗೇರ್ ಇವರ ಉಪಸ್ಥಿತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರವೀಂದ್ರ ನಗರ ಇಲ್ಲಿ ಅರಣ್ಯ ಇಲಾಖೆಯಿಂದ ವಿತರಿಸಿದ್ದ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಪರಿಸರವನ್ನು ಉಳಿಸುವ ಹೋರಾಟವನ್ನು ಹೊಂದಿರುವ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾಧ್ಯಕ್ಷರಾದ ರಾಧಾ ರವರು ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ರವರು ಕೋಶಾಧ್ಯಕ್ಷರಾದ ಲಲಿತ ರವರು ಹಾಗೂ ತಾಲೂಕು ಅಧ್ಯಕ್ಷರಾದ ಶಾಹಿನ ಬಾನು ಕೋಶಾಧ್ಯಕ್ಷರಾದ ಲಕ್ಷ್ಮಿ ರವರು ಔಷಧಿ ಉಪಯುಕ್ತ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಉತ್ತಮ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ಕಂಡು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿವಮೊಗ್ಗ ಇವರು ಅಭಿನಂದನೆಗಳನ್ನು ತಿಳಿಸಿ ಇನ್ನೂ ಹೆಚ್ಚು ಉತ್ತಮ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದು ಆಶಿಸಿದರು

ಮಹಿಳೆಯರ ಸೆಲ್ ಫೋನಲ್ಲಿ 112 ನಂಬರ್ ಸೇವ್ ಇರಲಿ -DYSP ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ ಸೂಚನೆ

ಧಾರವಾಡ ಜು.25.ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ ಧಾರವಾಡ ವತಿಯಿಂದ ರಾಜ್ಯ ಮಟ್ಟದ ವೆಬಿನಾರ & ಸಂವಾದ ಕಾರ್ಯಕ್ರಮವನ್ನು ದಿನಾಂಕ 25/07/2021 ರಂದು ಭಾನುವಾರ ಬೆಳಿಗ್ಗೆ 9 : 30 ಗಂಟೆಗೆ ಆಯೋಜಿಸಲಾಯಿತು

ಸದರಿ ಕಾರ್ಯಕ್ರಮಕ್ಕೆ ಕರ್ನಾಟಕದ ಮಹಿಳಾ ಮಾಣಿಕ್ಯರಲ್ಲಿ ಒಬ್ಬರಾದ ಧಾರವಾಡದ ಹೆಮ್ಮೆಯ ಕುವರಿ ದಕ್ಷ,, ಪ್ರಾಮಾಣಿಕ ಪೋಲೀಸ್ ಅಧಿಕಾರಿ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ DYSP ಚಾಮರಾಜ ನಗರ ಇವರನ್ನು ಆಹ್ವಾನಿಸಲಾಗಿತ್ತು. ಸಾಂಪ್ರದಾಯಿಕವಾಗಿ ಸದರಿ ಕಾರ್ಯಕ್ರಮವನ್ನು ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಯಿತು ಪ್ರಾರ್ಥನೆಯನ್ನು ಶ್ರೀಮತಿ ನಂದಿನಿ ಯಾದವ್ ರವರು ನೆರವೇರಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ H ರವರು ಎಲ್ಲರನ್ನು ಸ್ವಾಗತಿಸಿದರು. ನಮ್ಮೆಲ್ಲರ ಮೆಚ್ಚಿನ ರಾಜ್ಯಾಧ್ಯಕ್ಷರಾದ ಡಾ ಲತಾ .ಎಸ್.ಮುಳ್ಳೂರ ಮೇಡಮ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಭುವನೇಶ್ವರಿ ಮೇಡಮ್ ರವರ ನಿರೂಪಣೆಯೊಂದಿಗೆ ವೆಬಿನಾರನ್ನು ಮುಂದುವರಿಸಲಾಯಿತು..

ಮಂಜುಳಾ ನಂಜನಗೂಡು ಇವರು ಪ್ರಿಯದರ್ಶಿನಿ DYSP ಯವರ ಪರಿಚಯ ಮಾಡಿಕೊಟ್ಟರು. ನಂತರ DYSP ಮೇಡಮ್ ರವರು “ಹೆಣ್ಣಿನ ದೌರ್ಜನ್ಯ & ಪೋಲೀಸ್ ರಕ್ಷಣೆ (IPC) ನಿಯಮಗಳು ಈ ಕುರಿತು ಸುದೀರ್ಘವಾಗಿ 2 ಗಂಟೆಯವರೆಗೆ ಮನಮುಟ್ಟುವಂತೆ ಮಾಹಿತಿ ನೀಡಿದರು. ಬಸವರತ್ನ, “ಶರಣ ಶ್ರೀ” ಪ್ರಶಸ್ತಿಗೆ ಭಾಜನರಾದ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ DYSP ಯವರು ವಚನ ಸಾಹಿತ್ಯ, ಕ್ರೀಡೆ, ಕರಾಟೆ, ಗಾಯನ, ಹಿಂದೂಸ್ತಾನಿ ಸಂಗೀತ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ “ಸಕಲ ಕಲಾ ವಲ್ಲಭೆ”. ಇವರು ಭಾವನಾ ಸಾಣಿಕೊಪ್ಪ ಶಿಕ್ಷಕಿಯರ ಹೆಮ್ಮೆಯ ಕುವರಿ ಎಂದು ಹೇಳಿಕೊಳ್ಳಲು ನಮ್ಮ ಶಿಕ್ಷಕಿಯರ ಬಳಗಕ್ಕೆ ಒಂದು ಹೆಮ್ಮೆಯ ಸಂಗತಿ.
ಇಂದಿನ ವೆಬಿನಾರ್ ನಲ್ಲಿ ಪ್ರಿಯದರ್ಶಿನಿ DYSP ಮೇಡಮ್ ರವರು ಹೆಣ್ಣಿನ ದೌರ್ಜನ್ಯ & ಪೋಲೀಸ್ ರಕ್ಷಣೆ (IPC ನಿಯಮಗಳು) ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಹೆಣ್ಣು ದೌರ್ಜನ್ಯಕ್ಕೊಳಗಾಗದಂತೆ ಯಾವ ರೀತಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ದೌರ್ಜನ್ಯಕ್ಕೊಳಗಾದಾಗ ಯಾವ ರೀತಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯವನ್ನು ಪಡೆದುಕೊಳ್ಳಬೇಕು, ಹೆಣ್ಣಿನ ಶೋಷಣೆಯ ಕುರಿತು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿರುವ ಹಕ್ಕುಗಳು,ಪರಿಚ್ಚೇದಗಳು,ಹಾಗೂ ಮಹಿಳೆಯರ ದೌರ್ಜನ್ಯ ಸಂಬಂದ ಇರುವ IPC ಸೆಕ್ಷನ್ ಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಎಲ್ಲಾ ಮಹಿಳೆಯರು ಸುರಕ್ಷಾ App ಹಾಗೂ SOS STAY SAFE App. (Safty App) ಡೌನ್ಲೋಡ್ ಮಾಡಿಕೊಳ್ಳಲು ತಿಳಿಸಿದರು.. ಈ ಆ್ಯಪ್ ಗಳು ..ಮತ್ತು helpline ಗಳು ಹೆಣ್ಣು ಮಕ್ಕಳು ತಮ್ಮ ಮೇಲೆ ದೌರ್ಜನ್ಯವಾದಾಗ ಬಹಳ ಸಹಾಯವಾಗುವುದು ಹಾಗೂ 1091…181…112 Women’s Help line ಬಗ್ಗೆ ಮಾಹಿತಿ ನೀಡಿದರು, ಹಾಗೂ ಪೋಕ್ಸೋ ಕಾಯಿದೆ ಬಗ್ಗೆ ತಿಳಿಸಿದರು.ಒಟ್ಟಿನಲ್ಲಿ ವೆಬಿನಾರ್ ಮಹಿಳೆಯರಿಗೆ ಅತ್ಯಂತ ಉಪಯುಕ್ತವಾಗಿತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ವಾದಾಗ ಮಹಿಳೆಯರ ಸುರಕ್ಷತೆಗಾಗಿ ಇರುವ IPC ನಿಯಮಗಳ ಬಗ್ಗೆ ಸುದೀರ್ಘವಾಗಿ 2 ಗಂಟೆಗಳ ವರೆಗೆ ಸವಿಸ್ತಾರವಾಗಿ ತಿಳಿಸಿದರು
ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕಿಯರು ಪ್ರಶ್ನಿಸಿದ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಸಮರ್ಪಕವಾಗಿ .ಸಮಾಧಾನದಿಂದ, ಉತ್ತರ ನೀಡಿದರು. ಕೊನೆಗೆ ಪರ್ವೀನ್ ಮೇಡಮ್ ರವರು ವಂದನಾರ್ಪಣೆಯನ್ನು ನೆರವೇರಿಸಿದರು. ಒಟ್ಟಾರೆ ಡಾ.ಲತಾ . ಮುಳ್ಳೂರ ಮೇಡಮ್ ಹಾಗೂ ಜ್ಯೋತಿ ಮೇಡಮ್ ರವರ ನೇತೃತ್ವದಲ್ಲಿ ಈ ವೆಬಿನಾರ ಹಾಗೂ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ನೂತನ ಪದಾಧಿಕಾರಿಗಳ ಆಯ್ಕೆ-ಮೊದಲ ಸಭೆ ಯಶಸ್ವಿ

ಮಧುಗಿರಿ ಜು.24 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ರಾಜ್ಯ ಘಟಕ- ಧಾರವಾಡ ಜಿಲ್ಲಾ ಘಟಕ- ಮಧುಗಿರಿ ತಾಲ್ಲೂಕು ಘಟಕ- ಪಾವಗಡ
ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಆಗಿದ್ದು ಸಂಘದ ವತಿಯಿಂದ ಮೊದಲನೇ ಸಭೆಯನ್ನು ದಿನಾಂಕ 24 -7 -20 21ರಂದು ಗೂಗಲ್ ಮೀಟ್ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಮೇಡಂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ಮೇಡಂ ರವರು,ರಾಜ್ಯ ಉಪಾಧ್ಯಕ್ಷರು ಮತ್ತು ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಅನಸೂಯ ಮೇಡಂ ಜಿಲ್ಲಾ ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ಮೇಡಂ ರವರು ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಂಘದ ಧ್ಯೇಯೋದ್ದೇಶಗಳನ್ನು ಕುರಿತು ಮಾತನಾಡಿದರು ಹಾಗೂ ಸಂಘದ ಕಾರ್ಯಗಳ ಕುರಿತು ಹೇಳುತ್ತಾ ಸಂಘವು ರಾಜ್ಯದ ಎಲ್ಲಾ ಶಿಕ್ಷಕಿಯರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ, ಶಿಕ್ಷಕಿಯರ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತದೆ ಎಂದು ಹೇಳಿದರು.ಹಾಗೂ ಶಿಕ್ಷಕಿಯರಿಗೆ ಇರುವ ಸೌಲಭ್ಯಗಳ ಕುರಿತು ತಿಳಿಸಿದರು. ಇದರಲ್ಲಿ ಶಿಶುಪಾಲನಾ ರಜೆಯ ಬಗ್ಗೆ ಸವಿವರವಾಗಿ ತಿಳಿಸಿದರು ಮತ್ತು ಸಂಘದ ಬಲವರ್ಧನೆಗಾಗಿ ಪದಾಧಿಕಾರಿಗಳ ಕಾರ್ಯದ ಬಗ್ಗೆ ತಿಳಿಸಿದರು

ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ಮೇಡಂ ರವರು ಮಾತನಾಡುತ್ತಾ ತಮ್ಮ ಭಾವನೆಗಳನ್ನು ಕ್ರಿಯಾಶೀಲತೆಯನ್ನು ಪ್ರತಿಬಿಂಬಿಸಲು ಶಿಕ್ಷಕಿಯರಿಗಾಗಿ ಇರುವ ಕುಟುಂಬ ಆಪ್, ಇದನ್ನು ಶಿಕ್ಷಕಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಘದಲ್ಲಿ ಪ್ರತಿದಿನ ಪ್ರತಿ ವಿಚಾರಗಳನ್ನು ಅಪ್ಡೇಟ್ ಮಾಡುವ ವಿಚಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರು.ಈ ಗೂಗಲ್ ಮೀಟ್ ನಲ್ಲಿ ಸೇರಿದ್ದ ಪಾವಗಡ ತಾಲೂಕು ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು, ಗೌರವಾಧ್ಯಕ್ಷರು , ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಮ್ಮ ಸಾವಿತ್ರಿಬಾಯಿಪುಲೆ ಸಂಘಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದು ಸಂಘದ ಪರವಾಗಿ ರಾಮಾಂಜನೇಯ ರವರು ಮೀಟ್ ನಲ್ಲಿ ಭಾಗವಹಿಸಿ ಸಂಪೂರ್ಣ ಸಹಕಾರ ನೀಡಿದರು. ಒಟ್ಟಾರೆಯಾಗಿ ಸಂಘದ ಮೊದಲ ಸಭೆ ಯಶಸ್ವಿಯಾಗಿ ಪೂರ್ಣಗೊಂಡಿತು ಸಭೆಯಲ್ಲಿ ಯಶೋಧ ಮೇಡಂ ರವರು ಪ್ರಾರ್ಥನೆ ಮಾಡಿದರೆ ರಾಧಾ ಮೇಡಂ ರವರು ಸರ್ವರನ್ನು ಸ್ವಾಗತಿಸಿದರು. ದುರ್ಗಾ ಮೇಡಂ ರವರು ವಂದನಾರ್ಪಣೆ ಸಲ್ಲಿಸಿದರು.

ಸ್ವಾಗತಿಸಿ ಸನ್ಮಾನಿಸಿದ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ಧಾರವಾಡ.ಜು.17.ಇಂದು ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ. ಜಿಲ್ಲಾ ಘಟಕ ಧಾರವಾಡ ವತಿಯಿಂದ ಶ್ರೀಮತಿ N K ಸಾವಕಾರ ಮೇಡಮ್ ಅವರಿಗೆ ಶುಭ ಕೊರಲಾಯಿತು

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸ0ಸ್ಥೆ ಧಾರವಾಡದ ಪ್ರಾಚಾರ್ಯರಾಗಿ ಅಧಿಕಾರವಹಿಸಿಕೊಂಡ ಮಾನ್ಯ ಶ್ರೀಮತಿ N K. ಸಾವಕಾರ ಮೇಡಂರವರಿಗೆ ಸನ್ಮಾನಿಸಲಾಯಿತು 💐

ಸಂದರ್ಭದಲ್ಲಿ ಮಾತನಾಡಿದ ಮೇಡಂ ರವರು ಮಹಿಳಾ ಶಿಕ್ಷಕಿಯರು ಅನೇಕ ಸಮಸ್ಯೆಗಳಿದ್ದರು ಕೂಡ ಕುಟುಂಬದ ನಿರ್ವಹಣೆ ಜೊತೆ ವೃತ್ತಿಯ ಜೊತೆಗೆ ಸಂಘಟನೆಯಲ್ಲಿಯೂ ತೊಡಗಿ ಉತ್ತಮ ಕಾರ್ಯ ಶೈಕ್ಷಣಿಕ ಕಾರ್ಯ ಮಾಡುತ್ತಿರುವಿರಿ. ಎಂದು ಪ್ರಶ0ಸಿಸಿದರು
ಈ ಸಂದರ್ಭದಲ್ಲಿ ಸಂಘದ ಸ0ಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ರಾಜ್ಯ ಕೋಶಾಧ್ಯಕ್ಷರಾದ ಶ್ರೀಮತಿ ಪ್ರೇಮಾ ಹೆಗಡೆ .ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಎಸ್. ಆರ್ .ಶೀಲವಂತ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸುಶೀಲಾ ಕರಡಿ .ಪದಾಧಿಕಾರಿಗಳಾದ ಶ್ರೀಮತಿ ಉಮಾದೇವಿ ಕಲಕೋಟಿ. ಶ್ರೀಮತಿ ಟಿ. ಎಸ್. ಅರವಳ್ಳಿ. ಶ್ರೀಮತಿ. R. B.ದಿಲಶಾದ ಶ್ರೀಮತಿ G. Y.ಹುಲಮನಿ. ಶ್ರೀಮತಿ Y M.ಬಡಿಗೇರ. ಶ್ರೀಮತಿ ಜಯಶ್ರೀ ಮುದಿಗೌಡರ ಶ್ರೀಮತಿ ಶಾರದಾ ಗೋಸಾಲ ಉಪಸ್ಥಿತರಿದ್ದರು

ಹೆಣ್ಣಿನ ಸ್ವಾತಂತ್ರ್ಯ ಕಸಿಯಲು ಯತ್ನ- ಡಾ.ಮುಳ್ಳೂರ ಖಂಡನೆ

ಧಾರವಾಡ ಜು.16 .ಹೆಣ್ಣಿನ ಶೋಷಣೆ,ಹೆಣ್ಣಿನ ಸ್ವಾತಂತ್ರ್ಯ ಕಸಿಯುವ ಯತ್ನಗಳು ನಡೆಯುತ್ತಲೆ ಇವೆ.ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಪ್ರಕರಣ ಶಿಕ್ಷಣ ವಯಲದಲ್ಲಿ ನಡೆದಿರುವುದು ವಿಷಾದನೀಯ.


ಎಲ್ಲಾ ಶಿಕ್ಷಕ ಶಿಕ್ಷಕಿಯರು ತಮಗಿಷ್ಟವಾದ ಉಡುಪನ್ನು ಧರಿಸಲು ಸ್ವತಂತ್ರವಿದೆ.ಆದರೆ ಸಭ್ಯ ಉಡುಪಾಗಿರಲಿ ಎಂದು 2017 ರಲ್ಲಿ ಘನ ಸರ್ಕಾರವು ಅಧಿಕೃತವಾಗಿ ಘೋಷಣೆ ಮಾಡಿತ್ತು.ಅದರಂತೆ ಶಿಕ್ಷಣ ಇಲಾಖೆಯ ನಿರ್ದೇಶಕರು ಕೂಡ ದಿನಾಂಕ 28:07:2017 ರಲ್ಲಿ ತಮ್ಮ ಆದೇಶ ಸಂಖ್ಯೆ ಎಡಿಎಂ೨(೧)ಸ ಉಡುಪು/2016-17 ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದೆ.ಅದರಂತೆ ಎಲ್ಲಾ ಬೋಧಕ ವಲಯದ ಶಿಕ್ಷಕಿಯರು ಸಬ್ಯ ಉಡುಪಗಳಾದ ಸೀರೆ ಅಥವಾ ಚೂಡಿದಾರ್ ತೊಡಲು ಅವಕಾಶ ಕಲ್ಪಿಸಲಾಗಿದೆ.ಇದನ್ನು ಸಹಿಸದ ಕೆಲವು ಪುರುಷ ಶಿಕ್ಷಕರು,ಶಿಕ್ಷಕಿಯರಿಗೆ ಸೀರೆಯನ್ನೇ ತೊಡಲು ಸೂಚಿಸುವಂತೆ ಚಿಕ್ಕಮಗಳೂರು ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿರುತ್ತಾರೆ,ಇದು ಅವರ ಅಸಹನೆಯನ್ನು ಬಿಂಬಿಸುತ್ತಿದೆ‌.ಹಾಗೂ ಮಹಿಳೆಯರ ಸ್ವಾತಂತ್ರ್ಯ ಕಸಿಯುವ ಯತ್ನವಾಗಿದೆ.ಇದನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಖಂಡಿಸಿದೆ.ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಕಟುವಾಗಿ ಮಾತನಾಡಿದ್ದಾರೆ.

ಅಂತವರ ಮನವಿಯನ್ನು ತಿರಸ್ಕರಿಸಿರುವ ಮಾನ್ಯ ಉಪನಿರ್ದೇಶಕರು ಸಬ್ಯ ಉಡುಪು ಧರಿಸಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ..ಇದರ ಬಗ್ಗೆ ಯಾರೂ ಕೂಡ ಆಕ್ಷೇಪ ಸಲ್ಲಿಸಬಾರದೆಂದು ಸೂಚಿಸಿರುತ್ತಾರೆ.ಅವರ ಈ ಅದೇಶವನ್ನು ನಮ್ಮ ಸಂಘವು ಸ್ವಾಗತಿಸುತ್ತದೆ, ಮನವಿಯನ್ನು ತಿರಸ್ಕರಿಸಿ ಶಿಕ್ಷಕಿಯರ ಸ್ವಾತಂತ್ರ್ಯಪರ ಸೂಕ್ತ ನಿರ್ಣಯ ತೆಗೆದುಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಮಾನ್ಯ ಉಪನಿರ್ದೇಶಕರವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿ ಹೆಚ್.ರವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

C&R ತಿದ್ದುಪಡಿ ಸೇರಿದಂತೆ ಶಿಕ್ಷಕಿಯರ ವಿವಿಧ ಸಮಸ್ಯೆ ಬಗೆಹರಿಸಲು ಕೋರಿ ಮನವಿ ಸಲ್ಲಿಕೆ

ಬೆಂಗಳೂರು, ಜು.13

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ
ಬೆಂಗಳೂರು ದಕ್ಷಿಣ ಜಿಲ್ಲೆ ಬೆಂಗಳೂರು ದಕ್ಷಿಣ ವಲಯ 01 ವತಿಯಿಂದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಕೆ. ಪ್ರಕಾಶ ಅವರಿಗೆ ತಾಲೂಕಿನ ಶಿಕ್ಷಕಿಯರ ಸಮಸ್ಯೆ ಕುರಿತಂತೆ ಮನವಿ ಸಲ್ಲಿಸಲಾಯಿತು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅವರಿಗೆ ಸಂಘವು ಧನ್ಯವಾದಗಳನ್ನು ಸಲ್ಲಿಸಿದೆ.

ಈ ಸಂದರ್ಭದಲ್ಲಿ ಶ್ರೀಮತಿ ಲಷ್ಮಿ. ಕೆ. ಎಸ್. ಅಧ್ಯಕ್ಷರು ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ .(ರಿ) ಬೆಂಗಳೂರು ದಕ್ಷಿಣ ವಲಯ 01 ( ಇಂಗ್ಲಿಷ್ ರಾಜ್ಯ ಸಂಪನ್ಮೂಲ ವ್ಯಕ್ತಿ ಈಗ ಪ್ರಸ್ತುತ DSERT ಇ ಕಲಿಕಾ ಸ0ವೇದ ಕಾರ್ಯಕ್ರಮ ಚಂದನವಾಹಿನಿಯಲ್ಲಿ 1 ರಿಂದ 7 ನೇ ತರಗತಿವರೆಗೆ ಇಂಗ್ಲಿಷ್ ವಿಡಿಯೋ ಪಾಠಗಳ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಲಷ್ಮಿ.ಕೆ. ಎಸ್) ಹಾಗೂ ಶ್ರೀಮತಿ ವಿಜಯಾ ಗೌರವಾಧ್ಯಕ್ಷರು ಶ್ರೀಮತಿ ನೂರಜಹಾನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಮಾದೇವಿ ಕೋಶಾಧ್ಯಕ್ಷರು ಶ್ರೀಮತಿ ಮಣಿ. R. ಉಪಾಧ್ಯಕ್ಷರು ಶ್ರೀಮತಿ ಲೀಲಾವತಿ ಸಂಘಟನಾ ಕಾರ್ಯದರ್ಶಿ ಗಳು ಶ್ರೀಮತಿ ರಾಜೇಶ್ವರಿ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಆಯಿಷಾ ಸಹ ಕಾರ್ಯದರ್ಶಿ. ಶ್ರೀಮತಿ ಭಾರತಿ ಸಹ ಕಾರ್ಯದರ್ಶಿ ಹಾಜರಿದ್ದರು