ಜುಲೈ-8ಕ್ಕೆ ರಾಜ್ಯಾದ್ಯಂತ ಸಾವಿತ್ರಿಬಾಯಿ ಫುಲೆ ಚಲನಚಿತ್ರ ವೀಕ್ಷಣೆಗೆ ಚಾಲನೆ,ಉದ್ಘಾಟನಾ ಸಮಾರಂಭ & ಶೈಕ್ಷಣಿಕ ಕಾರ್ಯಾಗಾರ

*ಮಾತೆ *ಸಾವಿತ್ರಿಬಾಯಿ ಫುಲೆ ಚಲನಚಿತ್ರ (ಅಂತಾರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರ) ರಾಜ್ಯಾದ್ಯಂತ ಬಿಡುಗಡೆ ಸಮಾರಂಭ* *,ಹಾಗೂ *ಶೈಕ್ಷಣಿಕ ಕಾರ್ಯಾಗಾರ*💐💐💐💐💐💐
*ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಹಾಗೂ ಶ್ರೀ ಅಮೋಘ.ಸಿದ್ದೇಶ್ವರ ಕ್ರಿಯೇಷನ್ಸ್ ಅವರ ಸಹಯೋಗದಲ್ಲಿ ದಿ. 08.07.2022 ಶುಕ್ರವಾರ 12.00 ಗಂಟೆಗೆ ಆಲೂರ ವೆಂಕಟರಾವ ಸಭಾ ಭವನ ಧಾರವಾಡದಲ್ಲಿ ನೆರವೇರಲಿದೆ*

ಉದ್ಘಾಟಕರು

ಅಂದು ಸಮಾರಂಭದ ಉದ್ಘಾಟಕರಾಗಿ ಗೌರವಾನ್ವಿತ ಸನ್ಮಾನ್ಯ ಮಹಾಪೌರರಾದ ಶ್ರೀ ಈರೇಶ.ಅಂಚಟಗೇರಿ ಅವರು ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಹಿರಿಯ ಕಲಾವಿದೆ ಜನಪ್ರಿಯ ನಟಿ ಶ್ರೀಮತಿ ತಾರಾ ಅನುರಾಧ ಅವರು .ಉದ್ಘಾಟಿಸಲಿದ್ದಾರೆ💐💐💐💐💐💐
ಮಾತೆ ಸಾವಿತ್ರಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ

. *ಗೌರವಾನ್ವಿತ *ಡಾ.ಸರಜೂ ಕಾಟ್ಕರ ಸಾಹಿತಿಗಳು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಕಾದಂಬರಿ ರಚಿಸಿದವರು.**ಗೌರವಾನ್ವಿತ ಶ್ರೀ ವಿಶಾಲ್ ರಾಜ್ ಜನಪ್ರಿಯ ನಿದೇ೯ಶಕರು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಚಿತ್ರಕಥೆ ನಿದೇ೯ಶನ*

. ಗೌರವಾನ್ವಿತ ಶ್ರೀ ಬಸವರಾಜ. ಭೂತಾಳಿ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿಮಾ೯ಪಕರು.

ಶ್ರೀ ನಾಗರಾಜ ಆದವಾನಿ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಕ್ಯಾಮರಾಮನ

ಸಮಾರಂಭದ ಅಧ್ಯಕ್ಷತೆ ಡಾ.ಲತಾ ಎಸ್ ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕನಾ೯ಟಕ ಸಾವಿತ್ರಿಬಾಯಿ ಫುಲೆ. ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ
💐💐💐💐💐💐 . ಮಾತೇ ಸಾವಿತ್ರಿಬಾಯಿ ಫುಲೆ ಅವರ ಕುರಿತು ಉಪನ್ಯಾಸ

  • ಗೌರವಾನ್ವಿತ ಶ್ರೀಮತಿ ವಿದ್ಯಾ ನಾಡಗೇರ KES
    ಹಾಗೂ ಮುಖ್ಯಅತಿಥಿಗಳು ಸಾವ೯ಜನಿಕ ಸಂಪಕಾ೯ಧಿಕಾರಿಗಳು ಆಯುಕ್ತರ ಕಛೇರಿ ಧಾರವಾಡ . 💐💐💐💐💐💐💐💐*
    ವಿಶೇಷ ಆಹ್ವಾನಿತರು ಗೌರವಾನ್ವಿತ ಸನ್ಮಾನ್ಯ ಶ್ರೀಎಸ್,ವಿ,ಸಂಕನೂರ ಸದಸ್ಯರು ಕನಾ೯ಟಕ ವಿಧಾನಪರಿಷತ್ತು
    💐💐💐💐💐🎂
    . ಸನ್ಮಾನ್ಯ ಶ್ರೀ ಎಸ್,ಎಸ್ ಕೆಳದಿಮಠ ಉಪನಿರ್ದೇಶಕರು (ಆಡಳಿತ)ಸಾವ೯ಜನಿಕ ಶಿಕ್ಷಣ ಇಲಾಖೆ ಧಾರವಾಡ
    💐💐💐💐
    . ಗೌರವಾನ್ವಿತಸನ್ಮಾನ್ಯ ಶ್ರೀಮತಿ ಶೀವಲೀಲಾ ಕಳಸಣ್ಣನವರ KES ಮಾನ್ಯ ಸಹಾಯಕ ಯೋಜನಾಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕನಾ೯ಟಕ ಉಪನಿರ್ದೇಶಕ ರ ಕಾಯಾ೯ಲಯ ಸಾವ೯ಜನಿಕ ಶಿಕ್ಷಣ ಇಲಾಖೆ ಧಾರವಾಡ
    💐💐💐💐💐💐💐💐💐💐
    . ಗೌರವಾನ್ವಿತ ಸನ್ಮಾನ್ಯ. ಶ್ರೀಮತಿ ಪಾವ೯ತಿ ವಸ್ತ್ರದ KES ಹಿರಿಯ ಉಪನ್ಯಾಸಕರು ಡೈಟ್ ಧಾರವಾಡ
    💐💐💐💐💐💐💐💐
    . ಗೌರವಾನ್ವಿತ ಸನ್ಮಾನ್ ಶ್ರೀ ಗಿರೀಶ ಪದಕಿ ಮಾನ್ ಕ್ಷೇತ್ರ ಶಿಕ್ಷಣಾಧಿಕಾರಿಗ ಧಾರವಾಡ ಶಹರ.
    💐💐💐💐💐💐💐
    ಗೌರವಾನ್ವಿತ ಸನ್ಮಾನ್ಯ ಶ್ರೀಮತಿ ಲೂಸಿ ಕಾಶ್ಮೀರ ಸಾಲ್ಡಾನ ಮಹಾಪೋಷಕರು,ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಧಾರವಾಡ
    💐💐💐💐💐💐💐. ಗೌರವಾನ್ವಿತ ಸನ್ಮಾನ್ಯ ಶ್ರೀ ಮಾತಾ೯ಂಡಪ್ಪ ಕತ್ತಿ ಸಾಹಿತಿಗಳು ಧಾರವಾಡ. ಪ್ರಧಾನ ಕಾಯ೯ದಶಿ೯ಗಳು ಪುಟ್ಟರಾಜ ಗವಾಯಿಗಳ ಕಲಾಪ್ರತಿಷ್ಟಾನ ಧಾರವಾಡ. 💐💐💐💐💐💐💐💐💐
    💐💐*
    ಸವ೯ರಿಗೂ ಸ್ವಾಗತ ಬಯಸುವವರು
    ಡಾ.ಲತಾ ಎಸ್ ಮುಳ್ಳೂಸಂಸ್ಥಾಪಕ ರಾಜ್ಯಾಧ್ಯಕ್ಷರು

ಶ್ರೀ ಬಸವರಾಜ ವಿ ಭೂತಾಳಿ . ನಿಮಾ೯ಪಕರು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಹಾಗೂ ಅಧ್ಯಕ್ಷರು: ಶ್ರೀ ಅಮೋಘಸಿದ್ದೇಶ್ವರ ಕ್ರಿಯೇಷನ್ ಯಾದವಾಡ.

ರಾಜ್ಯಪದಾಧಿಕಾರಿಗಳು
ಶ್ರೀಮತಿ ಹೇಮಾ
ಕೊಡ್ಡಣನವರ ರಾಜ್ಯ ಹಿರಿಯ ಉಪಾಧ್ಯರು

ಶ್ರೀಮತಿ ಸಾರಿಕಾ ಗಂಗಾ ರಾಜ್ಯ HS. ಮುಖ್ಯಸ್ಥರು

ಶ್ರೀಮತಿ ಜ್ಯೋತಿ ಹೆಚ್
ರಾಜ್ಯ ಪ್ರಧಾನ ಕಾರ್ಯದರ್ಶಿ
💐ಶ್ರೀಮತಿ ಅನುಸೂಯದೇವಿ
ರಾಜ್ಯ ಉಪಾಧ್ಯಕ್ಷರು
💐ಶ್ರೀಮತಿ ಕಲ್ಪನ ರವೀಂದ್ರನಾಥ
ರಾಜ್ಯ ಸಂಘಟನಕಾರ್ಯದರ್ಶಿ
💐ಶ್ರೀಮತಿ ಲಕ್ಷ್ಮಿದೇವಮ್ಮ
ರಾಜ್ಯ ಉಪಾಧ್ಯಕ್ಷರು
💐ಶ್ರೀಮತಿ ಜಯಶ್ರೀ ಬೆಣ್ಣೆ
ರಾಜ್ಯ ಸಂಘಟನ ಕಾರ್ಯದರ್ಶಿ
💐ಶ್ರೀಮತಿ ಸರಸ್ವತಿ ಸಿ ಕೆ
ರಾಜ್ಯ ಸಹಕಾರ್ಯದರ್ಶಿ
💐ಶ್ರೀಮತಿ ರೂಪ ಕೆ
ರಾಜ್ಯ ಸಹ ಕಾರ್ಯದರ್ಶಿ
💐ಶ್ರೀಮತಿ ಶಮಾ ಪಾಟೀಲ್
ರಾಜ್ಯ ಸಹ ಕಾರ್ಯದರ್ಶಿ
💐ಶ್ರೀಮತಿ ಅಕ್ಕ ಮಹಾದೇವಿ ಉಪ್ಪಿನ
ರಾಜ್ಯ ಸಂಘಟನ ಕಾರ್ಯದರ್ಶಿ
💐ಶ್ರೀಮತಿ ರೇಷ್ಮಾ ಕೆ
ರಾಜ್ಯ ಸಂಘಟನ ಕಾರ್ಯದರ್ಶಿ
ಶ್ರೀಮತಿ ಲಲಿತಾ ಕ್ಯಾಸಣ್ಣನವರ
ರಾಜ್ಯ ಸಹ ಕಾರ್ಯದರ್ಶಿ
ಶ್ರೀಮತಿ ಮಮತಾ ರಾಣಿ ಕೋಲಾರ
ರಾಜ್ಯ ಸಹ ಕಾರ್ಯದರ್ಶಿ
ಶ್ರೀಮತಿ ಸುನಿತಾ ಕುಲಕರ್ಣಿ
ರಾಜ್ಯ ಸಹ ಕಾರ್ಯದರ್ಶಿ

ಶ್ರೀಮತಿ ಸರಸ್ವತಿ ಹೆಚ್ ವೈ
ರಾಜ್ಯ PST ಸಮಿತಿ ಮುಖ್ಯಸ್ಥರು
ಶ್ರೀಮತಿ ಸಾರಿಕಾ ಎಸ್ ಗಂಗಾ
ರಾಜ್ಯ ಫ್ರೌಢಶಾಲಾ ಸಮಿತಿ ಮುಖ್ಯಸ್ಥರು
💐ಶ್ರೀಮತಿ ರಾಜಶ್ರೀ
ರಾಜ್ಯ ಆಪ್ತ ಕಾರ್ಯದರ್ಶಿಗಳು
💐ಶ್ರೀಮತಿ ಮಮತಾ
ರಾಜ್ಯ ಮಾಹಿತಿ ಮುಖ್ಯಸ್ಥರು
💐ಶ್ರೀಮತಿ ಪ್ರವೀಣ
ರಾಜ್ಯ ಆಪ್ತ ಕಾರ್ಯದರ್ಶಿಗಳು

ಸರ್ವರಿಗೂ ಮತ್ತೊಮ್ಮೆ ಸ್ವಾಗತ

ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ

“ವೈದ್ಯ ನಾರಾಯಣೋ ಹರಿ”

ವೈದ್ಯರ ದಿನಾಚರಣೆ ಪ್ರಯುಕ್ತ ದಿನಾಂಕ 02-07-2 022 ಶನಿವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಘಟಕ ಮಂಡಘಟ್ಟದಲ್ಲಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಕರ್ನಾಟಕ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಇವರಿಂದ ಸಮಾರಂಭ ನಡೆಸಲಾಯಿತು.

ಆಸ್ಪತ್ರೆಯ ವೈದ್ಯರಾದ ಶ್ರೀಯುತ ಸುರೇಶ್,l ಅಪ್ಪಾಜಿಗೌಡ ,ಹಾಗೂ ಸಿಬ್ಬಂದಿ ವರ್ಗದವರಾದ ಶ್ರೀಮತಿ ಪ್ರೇಮ, ಸುಮಾ, ರಂಗನಾಥ್, ಮುಂತಾದವರು *ಪಾಲ್ಗೊಂಡಿದ್ದರು. ಇವರಿಗೆ ಕರ್ನಾಟಕ *ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ಪ್ರಭುಗೌಡ ಅವರು ವೈದ್ಯರ ದಿನಾಚರಣೆ ಪ್ರಯುಕ್ತ ಪ್ರತಿಯೊಬ್ಬರಿಗೂ ಗೌರವಿಸಿ ಸನ್ಮಾನಿಸಲಾಯಿತು.*
ಶ್ರೀಯುತ ಡಾಕ್ಟರ್ ಸುರೇಶ್ ಅಪ್ಪಾಜಿಗೌಡರವರು ಶಾಲೆಯ ಮಕ್ಕಳಿಗೆ ಯಾವ ಸಮಯದಲ್ಲೂ ಕೂಡ ಹೋದರು ಮಕ್ಕಳಿಗೆ ಪ್ರೀತಿಯಿಂದ ಕಾಳಜಿಯಿಂದ ಜವಾಬ್ದಾರಿಯುತವಾಗಿ ಚಿಕಿತ್ಸೆ ನೀಡಿ ಗುಣಪಡಿಸಿ ಕಳಿಸುತ್ತಾರೆ . ಇದು ನಮ್ಮೆಲ್ಲರ ಹೆಮ್ಮೆಯ ವಿಚಾರ ಅದೇ ರೀತಿ ಪ್ರೇಮ ರವರು ಕೂಡ ನಮ್ಮ ಶಾಲೆ ಎಲ್ಲಾ ಮಕ್ಕಳನ್ನು ಕೂಡ ಚಿಕಿತ್ಸೆ ಸಮಯದಲ್ಲಿ ಕಾಳಜಿ ರೂಪದಿಂದ ನೋಡಿಕೊಳ್ಳುತ್ತಾರೆ ಇಂತಹ ಡಾಕ್ಟರ್ ಹಾಗೂ ಸಿಬ್ಬಂದಿಯಿಂದ ನಮಗೆ ಮತ್ತು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಚಾರ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ…
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಪಾಧ್ಯಕ್ಷರಾದ ಶ್ರೀಮತಿ ವನಜಾಕ್ಷಿ ಶಶಿಕುಮಾರ್ ಹಾಗೂ ಶಿಕ್ಷಕಿಯರಾದ ಶ್ರೀಮತಿ ದಮಯಂತಿ ಮಂಜುಳಾ ದೇವಿಕ ಇನ್ನು ಮುಂತಾದವರು ಉಪಸ್ಥಿತರಿದ್ದರು

ವೈದ್ಯರಿಗೆ ಸನ್ಮಾನಿಸಿ ವೈದ್ಯರ ದಿನಾಚರಣೆ ಮಾಡಿದ ಶಿಕ್ಷಕಿಯರ ಸಂಘ

ವೈದ್ಯ ನಾರಾಯಣೋ ಹರಿ,ವೈದ್ಯರ ದಿನಾಚರಣೆಯ ಪ್ರಯುಕ್ತ ದಿ‌ನಾಂಕ 02-07-22 ಶನಿವಾರದಂದು ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಾಸಿಕ ಸಭೆಯನ್ನು ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾಘಟಕ ರಾಮನಗರ ವತಿಯಿಂದ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ/ಜಮೀಲರವರು “ಆರೋಗ್ಯ” ದ ಬಗ್ಗೆ ಅತ್ಯುತ್ತಮ ವಾದ 4 ಟಿಪ್ಸ್ ತಿಳಿಸಿದರು.ಹಾಗೂ ದಿನಚರಿಯ ಆಹಾರ ಕ್ರಮಹೇಗಿರಬೇಕೆಂಬ ಬಗ್ಗೆಅತ್ಯಂತ ಸವಿಸ್ತಾರವಾಗಿ ತಿಳಿಸಿದರು.ವೈದ್ಯ ದಂಪತಿಗಳಾದ ಡಾ| ಮುಜಾಹಿದುಲ್ಲಾ ಶರೀಫ್ ಹಾಗೂ ಡಾ /ಸಯ್ಯಿದಾ ಬಾನು “ಆರೋಗ್ಯವೇ ಭಾಗ್ಯ” ಇಂದಿನ ಒತ್ತಡಸಹಿತ ಜೀವನದಲ್ಲಿ ನಾವು ಹೇಗೆ ಒತ್ತಡ ಮುಕ್ತರಾಗಿ ಆರೋಗ್ಯ ಕಾಪಾಡಿಕೊಳ್ಳಬಹುದೆಂಬುದರ ಬಗ್ಗೆ ಬಹಳ ಸರಳವಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಡಾ.ರತ್ನಮ್ಮರೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು , ಇದೇ ಸಂದರ್ಭದಲ್ಲಿ ಜುಲೈ31 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ದವಾಗಿರುವ ಮಾತೆ ಸಾವಿತ್ರಿ ಫುಲೆಯ ಚಿತ್ರದ ಟಿಕೆಟ್ ಗಳನ್ನು ಅಧ್ಯಕ್ಷರು, ಕಾರ್ಯದರ್ಶಿ ಗಳಿಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಪ್ರತಿಯೂಬ್ಬ ಪದಾದಿಕಾರಿಗಳಿಗೆ ಹಾಗೂ ವೈದ್ಯರಿಗೆ ಹೃದಯ ಸ್ಪರ್ಶಿ ಅಭಿನಂದನೆಗಳನ್ನು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ. ನಮ್ಮ ಸಂಘ ನಮ್ಮ ಹೆಮ್ಮೆ

ಜುಲೈ-31ರಂದು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಪ್ರದರ್ಶನ-ವಿದ್ಯಾರ್ಥಿಗಳಿಗೆ,ಶಿಕ್ಷಕ ಶಿಕ್ಷಕಿಯರಿಗೆ ಮಾನ್ಯ ಸಚಿವರಿಂದ ಉಚಿತ ಟಿಕೆಟ್ ವ್ಯವಸ್ಥೆ.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ-ಧಾರವಾಡ ಜಿಲ್ಲಾಘಟಕ : ವಿಜಯನಗರ.

ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆಯವರ ಜೀವನಾಧಾರಿತ ಚಲನಚಿತ್ರ ‘ರಾಷ್ಟ್ರ ಪ್ರಶಸ್ತಿ ವಿಜೇತೆ ಜನಪ್ರಿಯ ನಟಿ ತಾರಾ ಅವರು ಮಾತೇ ಸಾವಿತ್ರಿಬಾಯಿ ಫುಲೆ ಅವರ ಪಾತ್ರದಲ್ಲಿ ನಟಿಸಿರುವ. ಜನಪ್ರಿಯ ನಟ ಸುಚೇಂದ್ರ ಪ್ರಸಾದ ಅವರು ಜ್ಯೋತಿಬಾ ಫುಲೆ ಪಾತ್ರದಲ್ಲಿ ನಟಿಸಿರುವ, ಜನಪ್ರಿಯ ನಿರ್ದೇಶಕರಾದ ಶ್ರೀ ವಿಶಾಲರಾಜ್ ಅವರು ನಿರ್ದೇಶಿಸಿದ ಹಾಗೂ ಉತ್ತರ ಕರ್ನಾಟಕದ ಯಾದವಾಡದ ಶ್ರೀ ಬಸವರಾಜ ಭೂತಾಳ್ಳಿ ಅವರು ಪ್ರೊಡ್ಯೂಸರ ಆಗಿರುವ ಚಲನಚಿತ್ರ ಮಾತೆಯ ಹೆಸರಿನ ಸಾವಿತ್ರಿಬಾಯಿ ಫುಲೆ’ ಯು ಜುಲೈ 31ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಅದರಲ್ಲೂ ನಮ್ಮ ಸಂಘಟನೆಯ ಮೂಲಕ ತರೆಕಾಣುತ್ತಿರುವುದು ಇನ್ನಷ್ಟು ಹೆಮ್ಮೆಯ ಸಂಗತಿ.ವಿಜಯನಗರ ಜಿಲ್ಲೆಯ ಹೆಮ್ಮಯ ಜನನಾಯಕರು, ಜನಪ್ರಿಯ ಶಾಸಕರು. ಸಚಿವರು ಆದ ಸನ್ಮಾನ್ಯ ಶ್ರೀ ಆನಂದಸಿಂಗ್ ಸಾರ್ ಅವರ ಸುಪುತ್ರರಾದ ಶ್ರೀ ಸಿದ್ದಾಥ೯ಸಿಂಗ್ ಸಾರ್ ಅವರು ತಮ್ಮ ಕ್ಷೇತ್ರದಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾಥಿ೯ / ವಿದ್ಯಾಥಿ೯ನಿಯರಿಗೆ ಮತ್ತು ಎಲ್ಲಾ ಶಿಕ್ಷಕ / ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಸಿನೆಮಾ ತೋರಿಸಲು ಅದರ ಖರ್ಚುವೆಚ್ಚ ಭರಿಸಲು ಒಪ್ಪಿಕೊಂಡಿದ್ದಾರೆ . ಅವರಿಗೆ ನಮ್ಮ ಸಂಘದ ಪರವಾಗಿ ಹೃದಯಪೂವ೯ ಧನ್ಯವಾದಗಳು.

ಡಾ. ಲತಾ. ಎಸ್. ಮುಳ್ಳೂರ
ಸಂಸ್ಥಾಪಕ ರಾಜ್ಯಾಧ್ಯಕ್ಷರು

ಶ್ರೀಮತಿ ಉಮಾದೇವಿ.
ಜಿಲ್ಲಾ ಅಧ್ಯಕ್ಷರು
ವಿಜಯನಗರ ಜಿಲ್ಲೆ.

ಸಾವಿತ್ರಿಬಾಯಿ ಫುಲೆ ಸಂಘದ ಉಪಾಧ್ಯಕ್ಷರಾದ ಸುಜಾತ ಎಸ್ ಹೇಮಂತ್ ರವರ “ಅನುಭಾವ” ಕವನ ಸಂಕಲನದ ಬಿಡುಗಡೆ

ಸುಜಾತ ಎಸ್ ಹೇಮಂತ್ , ಉಪಾಧ್ಯಕ್ಷ ರು, ಸಾವಿತ್ರಿಬಾಯಿ ಫುಲೆ ಸಂಘ, ಶಿವಮೊಗ್ಗ.ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವಾನಿಯ ಪ್ರೌಢಶಾಲಾ ವಿಭಾಗದಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ “ಅನುಭಾವ” ಎಂಬ ಶೀರ್ಷಿಕೆಯ ಕವನಸಂಕಲನವನ್ನು ದಿನಾಂಕ26/06/22 ರ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಮಾನ್ಯ ಶ್ರೀಯುತ ಆರಗ ಜ್ಞಾನೇಂದ್ರ ರವರು ಗೃಹ ಸಚಿವರು ಕರ್ನಾಟಕ ಸರ್ಕಾರ ಇವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು. ಹಾಗೂ ಅನುಭಾವ ಕೃತಿಗೆ ಶುಭ ಹಾರೈಸಿ ಮಾತನಾಡಿದರು. ಶ್ರೀಯುತ ಹರೀಶ್ ಕೆ ಎಸ್ ಹಿರಿಯ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವಾನಿ ಇವರು ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ ಪ್ರೌಢಶಾಲಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು, ಎಸ್ ಡಿ ಎಂ ಸಿ ಯು ಸರ್ವ ಸದಸ್ಯರು, ಗ್ರಾಮಪಂಚಾಯತಿಯ ಸರ್ವ ಸದಸ್ಯರು, ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು ಪೋಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನೂತನ ಅಧಿಕಾರಿಗಳಿಗೆ ಸ್ವಾಗತಿಸಿ ಅಭಿನಂದಿಸಿದ ಫುಲೆ ಶಿಕ್ಷಕಿಯರು

ಗುಬ್ಬಿ-ಮೇ 21, 2022ರ ಶನಿವಾರದಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ-ಧಾರವಾಡ,ಜಿಲ್ಲಾಘಟಕ- ತುಮಕೂರು, ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾಲೂಕಿಗೆ ನೂತನವಾಗಿ ಆಗಮಿಸಿದ ಬಿಆರ್ಸಿಯವರಾದ ಶ್ರೀಯುತ ಮಧುಸೂದನ್ ಸರ್ ಹಾಗೂ ಅಕ್ಷರ ದಾಸೋಹದ ನಿರ್ದೇಶಕರಾದ ಶ್ರೀಯುತ ಜಗದೀಶ್ ಸರ್ ರವರಿಗೆ ಸ್ವಾಗತವನ್ನು ಕೋರಿ ಅಭಿನಂದಿಸಿದರು

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಯುತ ಮಧುಸೂದನ್ ಸರ್ ರವರು ಸಂಘದ ಬಗ್ಗೆ ನನಗೆ ತಿಳಿದಿದೆ. ಸಂಘವು ರಚನೆಯಾಗಿ ಮೂರು ವರ್ಷಗಳಲ್ಲೇ ರಾಜ್ಯದಾದ್ಯಂತ ಉತ್ತಮ ಹೆಸರು ಗಳಿಸಿದೆ.. ಹೀಗೆಯೇ ಉತ್ತಮ ಕೆಲಸಗಳನ್ನು ಮಾಡುತ್ತಾ ಹೋದರೆ ಮಾತೃ ಸಂಘವನ್ನೆ ಹಿಂದಿಕ್ಕಿ ಸಾವಿತ್ರಿ ಬಾಯಿ ಫುಲೆ ಸಂಘವು ಮುನ್ನುಗ್ಗುವುದರಲ್ಲಿ ಅನುಮಾನವಿಲ್ಲ. ನಿಮ್ಮ ಸಂಘಕ್ಕೆ ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು..

ಶ್ರೀಯುತ ಜಗದೀಶ್ ಸರ್ ರವರು ಮಾತನಾಡಿ ನನಗೆ ಅಭಿನಂದನೆ ಸಲ್ಲಿಸಿದ ಸಾವಿತ್ರಿ ಬಾಯಿ ಫುಲೆ ಸಂಘಕ್ಕೆ ಧನ್ಯವಾದಗಳು ಸಂಘದ ಎಲ್ಲಾ ಕೆಲಸಗಳಿಗೂ ನನ್ನ ಸಹಕಾರ ಇರುತ್ತದೆ ನಿಮ್ಮೆಲ್ಲ ಕಾರ್ಯಕ್ರಮಗಳಿಗೂ ನಾನು ಹಾಜರಾಗುತ್ತೇನೆ ನಿಮ್ಮ ಸಂಘವು ರಾಜ್ಯಾದ್ಯಂತ ಉತ್ತಮ ಕೆಲಸಗಳನ್ನು ಮಾಡುತ್ತಿದೆ ನೀವು ಕೂಡ ನಮ್ಮ ಇಲಾಖಾ ಕೆಲಸಗಳಿಗೆ ಕೈ ಜೋಡಿಸಿ.. ಸಂಘವು ಇನ್ನೂ ಹೆಚ್ಚು ಉತ್ತಮ ಕೆಲಸಗಳನ್ನು ಮಾಡುತ್ತಾ ಮುನ್ನಡೆಯಲಿ ಎಂದು ಹರಸಿದರು..

ಈ ಸಂದರ್ಭದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರಾದ ಲಕ್ಷ್ಮಿ ಎಸ್ ವಿ ರವರು, ಕಾರ್ಯದರ್ಶಿಯವರಾದ ಅನಿತ ವಿ ಎಸ್ ರವರು, ಕೋಶಾಧ್ಯಕ್ಷರಾದ ಮಂಜಮ್ಮ ಬಿ ಎಸ್ ರವರು ಪದಾಧಿಕಾರಿಗಳಾದ ಶ್ರಿಮತಿ ಲೀಲಾವತಿ ಶ್ರಿಮತಿ ಸುಗುಣ ಶ್ರಿಮತಿ ತಿಮ್ಮಮ್ಮ ಶ್ರಿಮತಿ ಜಯಮ್ಮ ಶ್ರೀಮತಿ ಲತಾಮಣಿ ಕೆ ಎಸ್ ಶ್ರೀಮತಿ ಅರ್ಪಣಾ ಶ್ರೀಮತಿ ಪದ್ಮಾವತಿ ಶ್ರೀಮತಿ ವಿಶಾಲಾಕ್ಷಿ, ಮಾತೃ ಸಂಘದ ನಿರ್ದೇಶಕರಾದ ಶ್ರೀಯುತ ಕಾಂತರಾಜು ಸರ್ ರವರು ಹಾಗೂ ಸದಾ ನಮಗೆ ಬೆಂಬಲವಾಗಿರುವ ಶ್ರೀಯುತ ಸುರೇಶ್ ಸರ್ ಅವರು ಹಾಜರಿದ್ದರು,ಭಾಗವಹಿಸಿ ಸಹಕರಿಸಿದ ಎಲ್ಲರಿಗೂ ಶ್ರೀಮತಿ ಅನಿತ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಶ್ರೀಮತಿ ಲಕ್ಷ್ಮೀ,ಎಸ್.ವಿ. ಅಧ್ಯಕ್ಷರು,ಗುಬ್ಬಿ ತಾಲ್ಲೂಕು
ಶ್ರೀಮತಿ ಅನಿತಾ,ವಿ.ಎಸ್.ಪ್ರಧಾನ ಕಾರ್ಯದರ್ಶಿ,ಗುಬ್ಬಿ.ತಾ.

ಮೊದಲಿಗೆ ಶಿಕ್ಷಕಿಯಾಗಿದ್ದ ಪ್ರತಿಭ. ಆರ್ ಇಂದು ತಾಲ್ಲೂಕು ದಂಡಾಧಿಕಾರಿಗಳಾಗಿ ನೇಮಕ-ಅಭಿನಂದಿಸಿ ಬೀಳ್ಕೊಟ್ಟ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರು

ತುಮಕೂರು ಮೇ04-ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ-ಧಾರವಾಡ, ಜಿಲ್ಲಾ- ಘಟಕ ತುಮಕೂರು ವತಿಯಿಂದ ಉಪನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು(ದ) ಇಲ್ಲಿ ವಿಜ್ಞಾನ ವಿಷಯದ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಪ್ರತಿಭಾ ಆರ್.ರವರು ರವರು ತಹಸೀಲ್ದಾರರಾಗಿ ನೇಮಕಗೊಂಡಿದ್ದರಿಂದ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು. ಶ್ರೀಮತಿ ಪ್ರತಿಭಾ ರವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರಾರಂಭದಲ್ಲಿ ಸರ್ಕಾರಿ ಸೇವೆಗೆ ಸೇರಿ ನಂತರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಬಡ್ತಿಯಾಗಿ, ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನ ಉಪನ್ಯಾಸಕರಾಗಿ ಪ್ರಸ್ತುತ ತುಮಕೂರಿನ ಉಪ ನಿರ್ದೇಶಕರ ಕಛೇರಿಯಲ್ಲಿ ವಿಜ್ಞಾನ ವಿಷಯದ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಪಿಎಸ್ ಸಿ ನೇರ ನೇಮಕದಲ್ಲಿ ಇಂದು ತಹಸೀಲ್ದಾರರಾಗಿ ನೇಮಕಗೊಂಡು, ತುಮಕೂರು ಜಿಲ್ಲೆಯ ಮಹಿಳಾ ಸಾಧಕಿಯರಲ್ಲಿ ಒಬ್ಬರಾಗಿದ್ದಾರೆ.ಇದು ಜಿಲ್ಲೆಗೆ ಹೆಮ್ಮೆ ತಂದಿರುವ ವಿಷಯವಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ ಯವರು ಅಭಿಪ್ರಾಯಪಟ್ಟಿದ್ದಾರೆ, ಕಾರ್ಯದರ್ಶಿಯಾದ ಪ್ರವೀಣ ಕುಮಾರಿಯವರು ಇತರ ಪದಾಧಿಕಾರಿಗಳಾದ ಯಶೋದಮ್ಮನವರು, ಹೇಮಾವತಿ ರವರು, ಲತಾ ರವರು, ಸುಶೀಲಮ್ಮನವರು, ಚಂದ್ರಮ್ಮ ನವರು, ಗೀತಾರವರು, ಲೋಕಾಂಬ ರವರು ಎಲ್ಲರು ಭಾಗವಹಿಸಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಬೀಳ್ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಎಪಿಸಿ ಅಧಿಕಾರಿಗಳಾದ ಶ್ರೀಮತಿ ಲಾವಣ್ಯ ಮೇಡಂ ರವರು ಹಾಗೂ ಶ್ರೀಮತಿ ತಾರಾಮಣಿ ಮೇಡಂ ರವರು ಸಹಾ ಬಾಗವಹಿಸಿ ಅವರನ್ನು ಪ್ರೀತಿಯಿಂದ ಅಭಿನಂದಿಸಿದ್ದಾರೆ.

ಕಾರ್ಯಕ್ರಮ ಕುರಿತು ಮಾತಾನಾಡಿದ ಶ್ರೀಮತಿ ಪ್ರತಿಭ ಆರ್ ರವರು ತಾವು ಬೆಳೆದು ಬಂದ ಹಾದಿಯನ್ನ ಹಾಗೂ ತನಗಾದ ಸಂತೋಷವನ್ನ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.ನನ್ನ ಸಾದನೆಗೆ ತಂದೆ ತಾಯಿಗಳ ಆಶೀರ್ವಾದ ಹಾಗೂ ಕುಟುಂಬದ  ಸಂಪೂರ್ಣ ಸಹಕಾರ ಸಿಕ್ಕಿದ್ದು ಕಾರಣವಾಗಿದೆ.ಹಾಗೆಯೇ ಹಿತೈಷಿಗಳ ಪ್ರೀತಿಯು ಸಹ ಇದರಲ್ಲಿದೆ ಆದ್ದರಿಂದ ತಹಶೀಲ್ದಾರಾಗುವ ಕನಸು ಇಂದು ನನಸಾಗಿದೆ ಎಂದು  ಸಂತಸ ವ್ಯಕ್ತಪಡಿಸಿದ್ದಾರೆ.ವಿದ್ಯಾಬ್ಯಾಸದಲ್ಲಿ ಉತ್ತಮ ಸಾಧನೆ ಮಾಡಿರುವ ಅವರು ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದವರಾಗಿದ್ದು,ಬಿ.ಎಡ್.ಎಂ.ಎಡ್.ಎಂ.ಫಿಲ್ ಸಹಾ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಕೆ.ಇ.ಎಸ್. ಮಾಡಿದ್ದ ಅವರು ಇಂದು ಕೆ.ಎ.ಎಸ್.ಕೂಡ ಮುಗಿಸಿ ತಹಶೀಲ್ದಾರರು/ ತಾಲ್ಲೂಕು ದಂಡಾಧಿಕಾರಿಯಾಗಿ ನೇಮಕಗೊಂಡು ಶಿಕ್ಷಕಿಯರಿಗೆ ಮಾದರಿಯಾಗಿದ್ದಾರೆ. ತುಮಕೂರು ಜಿಲ್ಲೆಗಷ್ಟೆ ಅಲ್ಲದೇ ಇಡೀ ರಾಜ್ಯಕ್ಕೆ ಒಂದು ಹೆಮ್ಮೆಯ ವಿಚಾರವಾಗಿದೆ. ರಾಜ್ಯದ ಸಮಸ್ತ ಮಹಿಳಾ ಶಿಕ್ಷಕಿಯರಿಗೆ ಅತೀವ ಸಂತಸ ತಂದಿದೆ.ಅವರ ಮುಂದಿನ ಆಡಳಿತದಲ್ಲಿ ಉತ್ತಮ ಸೇವೆ ಮಾಡಲಿ,ಅತ್ಯುತ್ತಮ ಅಧಿಕಾರಿಯಾಗಿ ಅವರ ಹೆಸರು ಮತ್ತಷ್ಟು ಎತ್ತರಕ್ಕೆ ಏರಲಿ ಎಂದು  ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಅಭಿನಂದಿಸಿ ಆಶಿಸಿದ್ದಾರೆ.