
ಗುಬ್ಬಿ.ಮಾ.11.ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಿ.ರಾಜ್ಯಘಟಕ- ಧಾರವಾಡ,ತುಮಕೂರು ಜಿಲ್ಲೆಯಗುಬ್ಬಿ ತಾಲ್ಲೂಕು ಘಟಕದ ವತಿಯಿಂದ ಹಾಗೂ ಭಾರತ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ, ಗುಬ್ಬಿ ಇವರ ಸಹಯೋಗದಲ್ಲಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ ರವರ ಮಾರ್ಗದರ್ಶನದಲ್ಲಿ ದಿನಾಂಕ 11-03-2023 ರ ಶನಿವಾರ ಅಪರಾಹ್ನ ಗುಬ್ಬಿಯ ಶ್ರೀಮಾತಾ ಸಮುದಾಯ ಭವನದಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಹಾಗೂ “ಸಾಧಕರಿಗೆ ಸನ್ಮಾನ” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಎಸ್ ವಿ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸೋಮಶೇಖರ್ ರವರು,ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಯುತ ಮಧುಸೂದನ್ ರವರು,ಖ್ಯಾತ ವಕೀಲರಾದಂತಹ ಶ್ರೀಮತಿ ಪುಷ್ಪಾವತಿ ರವರು ಮತ್ತು ಶ್ರೀಮತಿ ಮಂಗಳರವರು.ತಾಲ್ಲೂಕಿನ ಮುಖಂಡರುಗಳಾದಂತಹ ಶ್ರೀಯುತ ಬೆಟ್ಟಸ್ವಾಮಿರವರು, ಶ್ರೀಯುತ ದಿಲೀಪ್ ಕುಮಾರ್ ರವರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದಂತಹ ಶ್ರೀಮತಿ ಗಾಯತ್ರಿ ನಾಗರಾಜ್ ರವರು ಭಾರತ ಸ್ಕೌಟ್ಸ್ ಗೈಡ್ಸ್ ನ ಅಧ್ಯಕ್ಷರು, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರುಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಗಳು ಹಾಗೂ ಎಲ್ಲಾ ಸಿ ಆರ್ ಪಿ ಗಳು ಬಿ ಆರ್ ಪಿ ಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಲತಾ ಮಣಿಯವರು ನಡೆಸಿಕೊಟ್ಟರೆ,ಗುಬ್ಬಿ ತಾಲೂಕು ಘಟಕದ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಅನಿತ ವಿ ಎಸ್ ರವರು ಎಲ್ಲರನ್ನು ಸ್ವಾಗತಿಸಿದರು. ಸಂಸ್ಥಾಪಕ ರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಶ್ರೀಮತಿ ಸೂರ್ಯಕಲಾ ರವರು ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದರು.ತದನಂತರ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಸಿದರು.ಕಾರ್ಯಕ್ರಮದಲ್ಲಿ ವಿಶ್ವ ಮಹಿಳಾ ದಿನದ ಆಶೋತ್ತರಗಳ ಮೂಲಕ,ಮಹಿಳೆಯರ ಸ್ಥಾನಮಾನ,ಹಾಗೂ ಪುರುಷರ ಸರಿ ಸಮಾನ ಸಾಧನೆಗೈದ ಮಹಿಳಾ ಸಾಧಕಿಯರನ್ನು ನೆನಯುವ ಮೂಲಕ ಎಲ್ಲಾ ಅತಿಥಿಗಳು ತಮ್ಮ ಭಾಷಣದಲ್ಲಿ ಮಾತನಾಡಿದರು.ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಏರ್ಪಡಿಸಿದ್ದ ಉಪನ್ಯಾಸವೂ ಸಹಾ ಅತ್ಯುತ್ತಮವಾಗಿತ್ತು. ಹೆಣ್ಣುಮಕ್ಕಳ ರಕ್ಷಣಾ ಕಾಯ್ದೆಗಳ ವಿಚಾರ ಧಾರೆಯನ್ನು ಬಹಳ ಉತ್ತಮವಾಗಿ ತಿಳಿಸಿಕೊಟ್ಟರು


ಅನಂತರ ಹೋಬಳಿಗೆ ಒಂದರಂತೆ ತಾಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಶಿಕ್ಷಕಿಯರಿಗೆ ಅತ್ಯುತ್ತಮ ಸಾಧಕಿ ಎಂದು ಗುರುತಿಸಿ ಅವರಿಗೆ ಗುರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆರು ಜನ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಆರು ಜನರನ್ನು ಗುರುತಿಸಿ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ತಾಲ್ಲೂಕಿನ ಸಾಧಕಿಯರೆಂದು ಗುರ್ತಿಸಿ ಸನ್ಮಾನ ಮಾಡಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರುಗಳನ್ನು ಸಹಾ ಕಾರ್ಯಕ್ರಮದ ನೆನಪಿನ ಕಾಣಿಕೆ ನೀಡುವುದರ ಮೂಲಕ ಗೌರವ ಸಮರ್ಪಣೆಯನ್ನು ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಲಕ್ಷ್ಮೀ ರವರು ತಮ್ಮ ಅಧ್ಯಕ್ಷೀಯ ಬಾಷಣದಲ್ಲಿ ತಾಲ್ಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಮಹಿಳಾ ದಿನಾಚರಣೆ ಮಹತ್ವವನ್ನು ತಿಳಿಸಿಕೊಟ್ಟರು. ಶ್ರೀಮತಿ ಮಂಜಮ್ಮ ಖಜಾಂಚಿಗಳು ಎಲ್ಲರನ್ನು ವಂದಿಸಿದರು.. ಸಹಕಾರ ನೀಡಿದಂತ ಶ್ರೀ ಸುರೇಶ್ ರವರು ಶ್ರೀ ರಂಗಪ್ಪ ನವರು, ಶ್ರೀ ರಂಗಸ್ವಾಮಿ ರವರು ಶ್ರೀ ರವೀಶ್ ರವರುಹಾಗೂ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.




















