ಶಿಕ್ಷಕಿಯರು ಬರುತ್ತಿದ್ದಾರೆ.ದಾರಿ ಬಿಡಿ.ಗೌರವ ಕೊಡಿ ಎಂದು ಸಂದೇಶ ನೀಡಿದ ವಿಶ್ರಾಂತ ಕುಲಪತಿಗಳು ಡಾ.ಮಲ್ಲಿಕಾ ಘಂಟಿರವರು


ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ವತಿಯಿಂದ

ಆಯೋಜನೆಯಾದ ರಾಜ್ಯಮಟ್ಟದ ವರ್ಚುವಲ್ ವೇಬಿನಾರ ಕಾರ್ಯಕ್ರಮ,
ದಿನಾಂಕ 14 /08/ 2021 ಶನಿವಾರ ಸಂಜೆ. 4 ಗಂಟೆಗೆ ಹೆಸರಾಂತ ಮಹಿಳಾಪರ ಹೋರಾಟಗಾರರು, ಸ್ತ್ರೀವಾದಿ ಚಿಂತಕರು .ರಾಜ್ಯಕ್ಕೆ ಚುರಪರಿಚಿತರು ಹಾಗೂ ಹಿರಿಯ ಸಾಹಿತಿಗಳು ಆದಂತಹ ಡಾ. ಮಲ್ಲಿಕಾ ಘಂಟಿ ಮೇಡಂ .ವಿಶ್ರಾಂತ ಉಪಕುಲಪತಿಗಳು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವರಿಂದ ಮಹಿಳಾ ಸ್ವಾತಂತ್ರ್ಯ ಸಮಾನತೆ ಮತ್ತು ಮಹಿಳಾ ಮೀಸಲಾತಿ ಎಂಬ ವಿಷಯದ ಕುರಿತು ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮ ಅತ್ತ್ಯುತ್ತಮವಾಗಿ ಜರುಗಿತು.
ಈ ವೆಬಿನಾರ ಕಾರ್ಯಕ್ರಮವನ್ನು ಶ್ರೀಮತಿ ರಕ್ಷಾ ಮೇಡಮ್ ಅವರು ಗಣೇಶನ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.
ಡಾ. ಲತಾ .ಎಸ್. ಮುಳ್ಳೂರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಭೆಯಲ್ಲಿ ಹಾಜರಿದ್ದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಅತಿಥಿ ಮಹೋದಯರಿಗೆ ಸ್ವಾಗತ ಕೋರಿದರು.
ಶ್ರೀಮತಿ ಜ್ಯೋತಿ ಎಚ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ವೆನಿನಾರ್ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀಮತಿ ಸುಜಾತ ಮೇಡಂ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು ಕಾರ್ಯಕ್ರಮದ ಕೇಂದ್ರಬಿಂದುವಾದ ಡಾಕ್ಟರ್ ಮಲ್ಲಿಕಾಘಂಟಿ ಅವರ ಪರಿಚಯ ಮಾಡಿಕೊಟ್ಟರು. ಅವರು ಮಾಡಿದಂತಹ ಪರಿಚಯ ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು.
ಡಾ.ಮಲ್ಲಿಕಾ ಘಂಟಿ ಮೇಡಮ್ ಮಹಿಳಾ ಮೀಸಲಾತಿ ಬಗ್ಗೆ ಮಹಿಳಾ ಸಮಾನತೆಗಳ ಬಗ್ಗೆ ಅತ್ಯಂತ ಸುಧೀರ್ಘವಾಗಿ ತಮ್ಮ ಅನುಭವಗಳ ಆಧಾರದ ಮೇಲೆ ತಾವು ಎದುರಿಸಿದಂತಹ ಸಮಸ್ಯೆಗಳನ್ನು ಹಾಗೂ ಅದನ್ನು ಪರಿಹರಿಸಿದ ರೀತಿಗಳನ್ನು ವಿವರವಾಗಿ ಹೇಳಿದರು.
ಮಾತೇ ಸಾವಿತ್ರಿಬಾಯಿ ಪುಲೆಯವರ ಕಾಲದಿಂದ ಹಿಡಿದು ಈಗಿನವರೆಗೂ ಅವರು ಅನುಭವಿಸಿದಂತಹ ಸಮಸ್ಯೆಗಳನ್ನು ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲ ಮಹಿಳೆಯರು ಎದುರಿಸುತ್ತಿದ್ದಾರೆ ಎನ್ನುವುದನ್ನು ವ್ಯಕ್ತಪಡಿಸಿದರು. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ಸಂಸ್ಕೃತ ಶ್ಲೋಕ ಅದರ ಬದಲಾಗಿ ಇವತ್ತು ಎಲ್ಲಿ ಹೆಣ್ಣುಮಕ್ಕಳು ಇರುತ್ತಾರಲ್ಲ ಅಲ್ಲಿ ನೋವುಗಳು ಕಷ್ಟಗಳು ಇರುತ್ತವೆ ಎನ್ನುವ ಮಟ್ಟಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ಬಂದೊದಗಿದೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುವುದನ್ನು ಹೇಳಿದರು.


ಬೌದ್ಧ ಜೈನ ಧರ್ಮದ ಕಾಲದಿಂದಲೂ ಮಹಿಳೆಯರಿಗೆ ಸಂಘ ಪ್ರವೇಶ ಮಾಡುವ ಒಂದು ಸ್ವಾತಂತ್ರ್ಯ ಇರಲಿಲ್ಲ ಮಹಿಳೆಯರು ಸಂಘ ಪ್ರವೇಶ ಮಾಡಿದರೆ ಸಂಘದ ಆಯಸ್ಸು ಕಡಿಮೆಯಾಗುತ್ತದೆ ಎನ್ನುವ ಒಂದು ಭಾವನೆಯನ್ನು ಪುರುಷರು ಹೊಂದಿದ್ದರು. ಹೀಗಾಗಿ ಕೌಟುಂಬಿಕವಾಗಿ ಸಾಮಾಜಿಕವಾಗಿ ಸಮಾನತೆಯನ್ನು ಕಾಣಲಿಕ್ಕೆ ಆಗುತ್ತಾ ಇರಲಿಲ್ಲ .ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತನ್ನು ಏಕೆ ಹೇಳಿದರು ಜಗತ್ತನ್ನು ತೆರೆದಂತೆ ಮಾತು ಬರಬಹುದಾಗಿತ್ತಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಹಿಳೆಯರಿಗೆ ದೌರ್ಜನ್ಯ ಅವರಿಗೆ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅವಕಾಶ ಕುಟುಂಬದಿಂದಲೇ ಶುರುವಾಗುತ್ತೆ .ಲಿಂಗ ತಾರತಮ್ಯ ಎನ್ನುವುದು ಕೂಡ ನಮ್ಮ ಮನೆಯ ಕುಟುಂಬದ ಪರಿಸರದಿಂದಲೇ ಆರಂಭವಾಗುತ್ತೆ ಈ ಒಂದು ಭಾವನೆಯನ್ನು ಎಲ್ಲರೂ ಕಿತ್ತೊಗೆದಾಗ ಸ್ತ್ರೀ ಸಮಾನತೆಯನ್ನು ತಕ್ಕಮಟ್ಟಿಗೆ ಸಾಧಿಸಬಹುದು. ಹಾಗೆಯೇ ಜ್ಞಾನವು ಸಮಾನತೆಯನ್ನು ಕೊಡುತ್ತದೆ ಮತ್ತು ಅಕ್ಷರವು ಸ್ವಾತಂತ್ರ್ಯವನ್ನು ಒದಗಿಸುತ್ತದೆ .ಹೀಗಾಗಿ ಸಮಾನತೆ ಮತ್ತು ಸ್ವಾತಂತ್ರ್ಯ ಅವುಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಇವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಮೀಸಲಾತಿಯನ್ನುವುದು ಒಂದು ಹಂತದಲ್ಲಿ ಸಾಮಾಜಿಕವಾಗಿ ಸಾರ್ವಜನಿಕವಾಗಿ ಮುಂದುವರಿಯಲು ಒಂದು ಊರುಗೋಲಾಗಿದೆ. ಎನ್ನುವ ಮಾತನ್ನು ಸೂಕ್ಷ್ಮವಾಗಿ ಹೇಳಿದರು. ಇದನ್ನೆಲ್ಲಾ ನೋಡಿದಾಗ ಮಹಿಳೆಯರಿಗೆ ಸ್ವಾತಂತ್ರ್ಯ ಬಂದಿದೆ ಎಂದರೆ ಅದು ಒಂದು ಆದರ್ಶ ಮಾತ್ರ ಆದರೆ ಅದು ವಾಸ್ತವದಲ್ಲಿ ಸ್ವಾತಂತ್ರ್ಯ ಅಲ್ಲ ಎನ್ನುವುದನ್ನು ವ್ಯಕ್ತಪಡಿಸಿದರು.
ಮೆಡಮ ಅವರ ಸುಧೀರ್ಘ 3 ತಾಸು ವೆಬಿನಾರ ನಂತರ ಸಂವಾದ ಕಾರ್ಯಕ್ರಮ ನಡೆಯಿತು ಶಿಕ್ಷಕಿಯರು ಕೇಳಿದಂತಹ ಪ್ರಶ್ನೆಗಳಿಗೆ ಸಹನೆಯಿಂದ ತಾಳ್ಮೆಯಿಂದ ಸಮರ್ಪಕವಾದ ಉತ್ತರ ಕೊಟ್ಟರು. ತಮ್ಮ ವೃತ್ತಿ ಜೀವನದಲ್ಲಿ ತಾವು ಅನುಭವಿಸಿದಂತಹ ವಿಚಾರಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ಇಲ್ಲಿ ಸಣ್ಣ ದೊಡ್ಡದು ಯಾವುದು ಇಲ್ಲ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅದರ ಮೂಲಕ ನಮ್ಮ ಸಾಮರ್ಥ್ಯಗಳನ್ನು ತೋರ್ಪಡಿಸಬೇಕು ಎಂಬುದನ್ನು ವ್ಯಕ್ತಪಡಿಸಿದರು. ಸಂವಾದ ಕಾರ್ಯಕ್ರಮದ ನಂತರ ನಂದಿನಿ ಮೇಡಂ ಅವರಿಂದ ಅದ್ಭುತವಾದಂತಹ ದೇಶಭಕ್ತಿ ಗೀತೆಯನ್ನು ಕೇಳಿ ಎಲ್ಲರೂ ಆನಂದಿಸಿದರು. ಇದಾದನಂತರ ಡಾ.ಲತಾ ಎಸ್ ಮುಳ್ಳೂರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ವೆಬಿನಾರ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಮ್ಮ ಸಂಘಕ್ಕೆ ನಿಮ್ಮ ಒಂದು ಸಂದೇಶ ನೀಡಿ ಎಂದರು. ಡಾ ಮಲ್ಲಿಕಾಘಂಟಿ ಮೇಡಂ ಅವರಿಗೆ ಕೇಳಿದಾಗ ಮಲ್ಲಿಕಾ ಘಂಟಿ ಮೇಡಂ ಅವರು

ಶಿಕ್ಷಕಿಯರು ಬರುತ್ತಿದ್ದಾರೆ ದಾರಿ ಬಿಡಿ ಗೌರವ ಕೊಡಿ.

ಎನ್ನುವ ಸಂದೇಶ ನೀಡಿದರು. .ಈ ಒಂದು ಸಂದೇಶ ಸಭೆಯಲ್ಲಿ ಹಾಜರಿದ್ದ ಎಲ್ಲರಿಗೆ ಎಲ್ಲ ಶಿಕ್ಷಕಿಯರಿಗೆ ಒಂದು ಪ್ರೇರಕ ಹೇಳಿಕೆಯಾಯಿತು. ಅಂತಿಮವಾಗಿ ಮಲ್ಲಿಕಾ ಘಂಟಿ ಮೇಡಮ್ ಅವರು
ಬಹು ಅಭಿಪ್ರಾಯಗಳ ಮಧ್ಯೆಯೂ ಏಕರೂಪತೆ ಇರಬೇಕು ಬೇರೊಂದು ಹೆಣ್ಣಿಗೆ ಆದ ನೋವು ಅದು ನಮ್ಮ ನೋವು ಅನ್ನುವ ಎಲ್ಲಾ ಮಹಿಳೆಯರು ಹೊಂದಿದಾಗ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಹೇಳಿಕೆ ಮಿಥ್ಯವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ .ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೊನೆಗೆ ಅಕ್ಕಮಹಾದೇವಿ ಮೆಡಮ ರಾಜ್ಯ ಸಂಘಟನಾ ಕಾರ್ಯದರ್ಶಿ ಇವರಿಂದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.ಈ ಒಂದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲು ಶ್ರೀಮತಿ ಭುವನೇಶ್ವರಿ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು ಅವರು ಅತ್ಯಂತ ಸುಂದರವಾಗಿ ಅಚ್ಚುಕಟ್ಟಾಗಿ ನಿರೂಪಣೆಯನ್ನು ನೆರವೇರಿಸಿದರು. ಅದ್ಭುತವಾದ ಇಂತಹ ಅದ್ಭುತವಾದ ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಿದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಡಾ. ಲತಾ. ಎಸ್ ಮುಳ್ಳೂರ್ ಹಾಗೂ ಜ್ಯೋತಿ ಎಚ್ ಮೇಡಂ ಅವರಿಗೆ ಹಾಗೂ ಉಪನ್ಯಾಸ ನೀಡಿದ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಮೆಡಂ ರವರಿಗೂ ಹೃತ್ಪೂರ್ವಕ ವಂದನೆಗಳು.


ವರದಿ–ಶ್ರೀಮತಿ ಪರವೀನ ಎಚ್. ನದಾಫ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು

ನೂತನ ಶಿಕ್ಷಣ ಸಚಿವರ ಬೇಟಿ-ಶೈಕ್ಷಣಿಕ ಸಭೆಗಳಿಗೆ ಫುಲೆ ಪದಾಧಿಕಾರಿಗಳ ಆಹ್ವಾನಕ್ಕೆ ಬೇಡಿಕೆ.

ತುಮಕೂರು.ಆ.11

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ) ರಾಜ್ಯ ಘಟಕ ಧಾರವಾಡ. ತುಮಕೂರು ಮತ್ತು ಮಧುಗಿರಿ ಜಿಲ್ಲಾ ಘಟಕಗಳ ವತಿಯಿಂದ ಈ ದಿನ ದಿನಾಂಕ -11/8/21ರಂದು ಮುಂಜಾನೆ 8 ಗಂಟೆಗೆ ನೂತನ ಪ್ರಾಥಮಿಕ‌ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾಗಿ ಸಾರಥ್ಯವಹಿಸಿರುವ ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶ್ ರವರನ್ನು ಭೇಟಿ ಮಾಡಿ ಸ್ವಾಗತಿಸಿ ಗೌರವಿಸಲಾಯಿತು .

ಕರ್ನಾಟಕದ ಏಕೈಕ ಮಹಿಳಾ ಶಿಕ್ಷಕಿಯರ ಸಂಘ ಇದಾಗಿದ್ದು,ರಾಜ್ಯದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರವರು ಈ ಸಂಘವನ್ನ ಸಂಸ್ಥಾಪಿಸಿ ಎಲ್ಲಾ ಶಿಕ್ಷಕಿಯರಿಗೂ ಒಂದು ಉತ್ತಮ ಸ್ವಾಭಿಮಾನದ ವೇದಿಕೆಯನ್ನು ಅಕ್ಷರಮಾತೆ ಭಾರತದ ಮೊದಲ ಶಿಕ್ಷಕಿ ತಾಯಿ ಸಾವಿತ್ರಿಬಾಯಿ ಫುಲೆ ಯವರ ಹೆಸರಿನಡಿ ಕಲ್ಪಿಸಿದ್ದಾರೆ.ಇದರಿಂದ ಸಮಸ್ತ ಶಿಕ್ಷಕಿಯರ ಕುಂದು ಕೊರತೆಗಳ ನಿವಾರಣೆಗಾಗಿ ಹಾಗೂ ಹಲವಾರು ಶೈಕ್ಷಣಿಕ ಕಾರ್ಯಾಗಾರ, ಮಕ್ಕಳ ಶೈಕ್ಷಣಿಕ ವಿಚಾರಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಿದೆ. ಇಂತಹ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಕ್ಕೂ ಸಹಾ ಪ್ರಾಧಾನ್ಯತೆ ನೀಡಿ ಯಾವುದೇ ಜಿಲ್ಲೆ ಹಾಗೂ ತಾಲ್ಲೂಕು ಶೈಕ್ಷಣಿಕ ಸಭೆಗಳಿಗೆ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಗಳನ್ನು ಸಹಾ ಆಹ್ವಾನಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೇ ಶೈಕ್ಷಣಿಕ ವಿಚಾರವಾಗಿ ಶಿಕ್ಷಕರ ಸ್ನೇಹಿ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದು ತಮ್ಮ ಪ್ರೋತ್ಸಾಹ ಸಹಕಾರ ಹಾಗೂ ಬೆಂಬಲ ಯಾವಾಗಲೂ ಇರಲಿ ಎಂದು ರಾಜ್ಯ ಉಪಾಧ್ಯಕ್ಷರು ಹಾಗೂ ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯದೇವಿ ಮನವಿ ಮಾಡಿದ್ದಾರೆ. ಮನವಿಗೆ ಶ್ರೀಯುತರು ಸಕಾರಾತ್ಮಕವಾಗಿ ಸ್ಪಂದಿಸಿದ್ದು,ಉತ್ತಮ ಪ್ರತಿಕ್ರಿಯೆ ನೀಡಿರುವುದು ಎಲ್ಲರಲ್ಲೂ ಸಂತಸ ತಂದಿದೆ ಎಂದು ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಮ್ಮ ರವರು ತಿಳಿಸಿದ್ದಾರೆ. ರಾಜ್ಯ ಉಪಾಧ್ಯಕ್ಷರು ಹಾಗೂ
ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ, ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜಿ .ಎಲ್. ರಾಧಮ್ಮ, ಕಾರ್ಯದರ್ಶಿಯಾದ ಶ್ರೀಮತಿ ಲತಾಮಣಿ H.K.ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸುಜಾತಾ ಜಿ . ತಿಪಟೂರು ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ವನಿತಾ ಬಿ .ಆರ್.ಕಾರ್ಯದರ್ಶಿಯಾದ ಶ್ರೀಮತಿ ಪುಷ್ಪಾವತಿ ಕೋಶಾಧ್ಯಕ್ಷರಾದ ಶ್ರೀಮತಿ ರಾಧಾಮಣಿ ಉಪಾಧ್ಯಕ್ಷರುಗಳಾದ ಶ್ರೀಮತಿ ಮುಕ್ತ ಮಣಿ ಮತ್ತು ಶ್ರೀಮತಿ ಸಾವಿತ್ರಿ ಹಾಗೂ ಸಹ ಕಾರ್ಯದರ್ಶಿಗಳಾದ ಶ್ರೀಮತಿ ಜಯಶೀಲ ಹಾಗೂ ಶ್ರೀಮತಿ ಸೀತಮ್ಮ .ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಲತಾ ರಾಜ್ ಕಾರ್ಯದರ್ಶಿಯಾದ ಶ್ರೀಮತಿ
ಸಾವಿತ್ರಿ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಯಶೋದಾ ಗುಬ್ಬಿ ತಾಲ್ಲೂಕಿನ ಶಿಕ್ಷಕರಾದ ಶ್ರೀ ರಂಗಸ್ವಾಮಿ ಜೆ.ಎಸ್ ಹಾಜರಿದ್ದರು .

ಮಹಿಳಾ ಮೀಸಲಾತಿ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಮನವಿ ಕೊಟ್ಟ ವಿಜಯನಗರ ಫುಲೆ ಶಿಕ್ಷಕಿಯರ ಸಂಘ

ವಿಜಯನಗರ ಆ.04 -2021

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಘಟಕ ಧಾರವಾಡ ,ಜಿಲ್ಲಾ ಘಟಕ ವಿಜಯನಗರ ವತಿಯಿಂದ
ಇಂದು ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳ ಪರವಾಗಿ ಹಾಗೂ ಸಮಸ್ತ ಮಹಿಳಾ ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಇರುವಂತೆ 33% ಮಹಿಳಾ ಸಂವಿಧಾನಿಕ ಮೀಸಲಾತಿಯನ್ನು ಕರ್ನಾಟಕ ರಾಜ್ಯ ಸಕಾ೯ರಿ ನೌಕರರ ಸಂಘದಲ್ಲು ನೀಡುವಂತೆ ಸ್ನೇಹಪರರೂ, ಮಹಿಳಾ ಪರ ಕಾಳಜಿ ಇರುವ ರಾಜ್ಯ ಸಕಾ೯ರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಶ್ರೀಯುತ ಷಡಕ್ಷರಿ ಸರ್ ಅವರಿಗೆ

ಮನವಿಯನ್ನು ಸಲ್ಲಿಸಲು,ವಿಜಯನಗರ ಜಿಲ್ಲಾ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ ಸರ್ ಹಾಗೂ ಜಿಲ್ಲಾ ಪ್ರಧಾನಕ್ಯ೯ದಶಿ೯ಗಳಾದ ಶ್ರೀ ಕಡ್ಲಿ ವೀರಭದ್ರೇಶ ಸರ್ ಅವರಿಗೆ ನಮ್ಮ ಸಂಘದ ಬೆನ್ನೆಲುಬಾಗಿ ನಿಂತಿರುವ ಹಿರಿಯ ಶಿಕ್ಷಕರ ಸಮ್ಮುಖದಲ್ಲಿ, ವಿಜಯನಗರ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಘಟಕಗಳ ವತಿಯಿಂದ ಮನವಿ ಸಲ್ಲಿಸಲಾಯಿತು.
ನಮ್ಮ ಮನವಿಯನ್ನು ಸ್ವೀಕರಿಸಿ ಸದಾ ಮಹಿಳಾ ಪರ ಇರುವ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಕ್ಕೆ ನಮ್ಮ ಬೆಂಬಲ ಯಾವತ್ತು ಸದಾ ಇರುತ್ತದೆ ಎಂದು ಆತ್ಮಸ್ಥೈಯ೯ ತುಂಬಿದರು. ಮನವಿಯನ್ನು ಸ್ವೀಕರಿಸಿದ ರಾಜ್ಯ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ಜಿಲ್ಲಾಧ್ಯಕ್ಷರು ಸಲ್ಲಿಸಿದ್ದಾರೆ.

ಅಧ್ಯಕ್ಷರೇ.ಮಹಿಳಾ ನೌಕರರಿಗೆ ಸಾಂವಿಧಾನಿಕ ಮೀಸಲಾತಿ ಕೊಡಿ – ಡಾ.ಲತಾ.ಎಸ್.ಮುಳ್ಳೂರ

ಗೆ,
ಶ್ರೀ ಸಿ.ಎಸ್. ಷಡಾಕ್ಷರಿ
ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ.(ರಿ) ಬೆಂಗಳೂರು
ಕಬ್ಬನ್ ಉದ್ಯಾನವನ ಬೆಂಗಳೂರು-560001

*ವಿಷಯ:* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಸಾಂವಿಧಾನಿಕ ಸಮಾನತೆಗಾಗಿ ಮಹಿಳಾ ನೌಕರರಿಗೆ ಮೀಸಲಾತಿ ಕಲ್ಪಿಸುವ ಕುರಿತು

ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಹುಟ್ಟು ಹಾಕಿದ ದಿಟ್ಟ ಮಹಿಳೆ ಹಾಗೂ ಎಲ್ಲಾ ನೌಕರರ ವಿಶ್ವಾಸಕ್ಕೆ ದ್ವನಿಯಾಗಿದ್ದ ದಿ.ಶ್ರೀಮತಿ ಮೇರಿ ದೇವಾಸಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.. ಹಾಗಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಲ್ಲಿ ಬಹುತೇಕ ಮಹಿಳಾ ನೌಕರರೇ ಬಹಳಷ್ಟು ಇದ್ದಾರೆ, ಎಲ್ಲಾ ಸರ್ಕಾರಿ ಮಹಿಳಾ ನೌಕರರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅಂದಿನಿಂದಲೂ ಎಲ್ಲರೂ ನೌಕರರ ಸಂಘಕ್ಕೆ ವಾರ್ಷಿಕ ವಂತಿಕೆ ಹಣವನ್ನು ಪ್ರಾಮಾಣಿಕ ವಾಗಿ ಸಲ್ಲಿಸುತ್ತಾ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ 33% ಮಹಿಳಾ ಶಿಕ್ಷಕಿಯರಿಗೆ ಮೀಸಲಾತಿ ಕಲ್ಪಿಸಿರುವಂತೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕ್ರಿಯಾಶೀಲ, ಮಹಿಳಾಪರ ಅಪಾರ ಕಾಳಜಿ ಹೊಂದಿರುವ ಅಧ್ಯಕ್ಷರಾದ ತಾವುಗಳು ಸಹಾ ಮಹಿಳಾ ನೌಕರರಿಗೆ, ನೌಕರರ ಸಂಘದಲ್ಲಿ ಸಾಂವಿಧಾನಿಕವಾಗಿ ಸಿಗಬೇಕಾದ ಮಹಿಳಾ ಮೀಸಲಾತಿ ಕಲ್ಪಿಸಬೇಕು. ರಾಜ್ಯದ ಸಮಸ್ತ ಮಹಿಳಾ ನೌಕರರಿಗೆ ಸಮಾನತೆಯ ಹಾದಿಯಲ್ಲಿ ನ್ಯಾಯ ಒದಗಿಸಿ ಕೊಡಲೇ ಬೇಕಾಗಿ ಒತ್ತಾಯಿಸಿ ಮನವಿ ಸಲ್ಲಿಸುತ್ತಿದ್ದೇವೆ.

ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಜಿಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ಸಮಸ್ತ ಮಹಿಳಾ ನೌಕರರ ಪರವಾಗಿ.ಡಾ.ಲತಾ ಎಸ್ ಮುಳ್ಳೂರ ರವರು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ರವರಿಗೆ ಬೇಡಿಕೆ ಇಟ್ಟಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದ ಗುಬ್ಬಿ ತಾಲ್ಲೂಕು ಫುಲೆ ಶಿಕ್ಷಕಿಯರ ಸಂಘ

ಗುಬ್ಬಿ,ಆ.03-ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ತಾಲ್ಲೂಕು ಘಟಕ ಗುಬ್ಬಿ ಯ ನೂತನ ಪದಾಧಿಕಾರಿಗಳು
ಪರಿಚಯಪೂರ್ವಕ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳುವುದರ ಮೂಲಕ ಎಲ್ಲಾ ಪದಾಧಿಕಾರಿಗಳು ಹಾಜರಾಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸೋಮಶೇಖರ್ ಸರ್ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ್ ಸರ್ ಅವರನ್ನು ಬೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿಯವರು, ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು,ಗೌರವಾಧ್ಯಕ್ಷರಾದ

ಶ್ರೀಮತಿ ದೇವಿಕಾ ರವರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ ಬಾಯಿಯವರು, ಕೋಶಾಧ್ಯಕ್ಷರಾದ ಶ್ರೀಮತಿ ಅನಿತರವರು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳೂ ಹಾಜರಿದ್ದರು.

ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯದೇವಿ ರವರು ಮಾತನಾಡಿ ಸಂಘದ ಧ್ಯೇಯೋದ್ದೇಶಗಳ ಬಗ್ಗೆ, ಯೋಜನೆಗಳ ಬಗ್ಗೆ, ಸಂಘದ ಕಾರ್ಯವೈಖರಿ ಕುರಿತು ತಿಳಿಸಿದರು. ತಾಲ್ಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು ಶಾಲಾ ಕರ್ತವ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಸಂಘದ ಚಟುವಟಿಕೆಗಳನ್ನು ನಡೆಸುವುದಾಗಿ ತಿಳಿಸಿದರು.

ಮಾನ್ಯBEO ಸರ್ ಮಾತನಾಡುತ್ತಾ ಸಂಘವು ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಬಗ್ಗೆ ತಿಳಿದಿದೆ ಹೀಗೆಯೇ ಶಿಕ್ಷಕರಿಗೆ, ಮಕ್ಕಳಿಗೆ,ಉಪಯೋಗವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯಿರಿ ಎಂದು ಶುಭ ಹಾರೈಸಿದರು. ತಾಲ್ಲೂಕಿನ ಅಕ್ಷರ ದಾಸೋಹ ಅಧಿಕಾರಿಯಾದ ಶ್ರೀ ಯೋಗಾನಂದ್ ಸರ್ ಅವರು ಮಾತನಾಡುತ್ತಾ ನಾನು ಸಂಘ, ಸಂಘಟನೆ ಎಂದು ಕೆಲಸ ಮಾಡಿದ್ದೇನೆ ನಿಮಗೆ ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದರು. ಈ ಕಾರ್ಯಕ್ರಮದ ರೂವಾರಿ, ಸಂಘದ ಬೆನ್ನೆಲುಬುಗಳಾದ ಸುರೇಶ್ ಸರ್, ರಂಗಸ್ವಾಮಿ ಸರ್, ರವೀಶ್ ಸರ್ ಇವರುಗಳು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದರು. ಈ ಕಾರ್ಯಕ್ರಮಕ್ಕೆ ಆಗಮಿಸಿ ಸಹಕರಿಸಿ ಯಶಸ್ವಿಯಾಗಲು ಶ್ರಮಿಸಿದ ಎಲ್ಲರನ್ನೂ  ಎಲ್ಲ ಪದಾಧಿಕಾರಿಗಳ ಪರವಾಗಿ
ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಿ ಬಾಯಿ ರವರುಗಳು ಧನ್ಯವಾದ ಸಲ್ಲಿಸಿದ್ದಾರೆ.

ಶಾಸಕರಿಗೆ ಹಾಗೂ ತಾಲ್ಲೂಕಿನ ಅಧಿಕಾರಿಗಳಿಗೆ ವಿವಿಧ ಸೌಲಭ್ಯ ಕೋರಿ ಮನವಿ ಪತ್ರ ಸಲ್ಲಿಸಿದ ಫುಲೆ ಶಿಕ್ಷಕಿಯರ ಸಂಘ

ಸಂಡೂರು ಆಗಸ್ಟ್-01 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಸಂಡೂರಿನಿಂದ, ಅಧ್ಯಕ್ಷರಾದ ಪ್ರೇಮ. ಕೆ , ಪ್ರಧಾನ ಕಾರ್ಯದರ್ಶಿಗಳಾದ ಅರ್ಚನಾ. ಕೆ, ಉಪಾಧ್ಯಕ್ಷರಾದ ಡಾ. ಉಮಾ, ಉಪಾಧ್ಯಕ್ಷರಾದ ಸುನಿತಾ ಕುಮಾರಿ ಟಿ. ಕೆ , ಸಂಘಟನಾ ಕಾರ್ಯದರ್ಶಿಗಳಾದ ನೂರುನ್ನಿಸ ಹಾಜರಿದ್ದು,, ಇನ್ನಿತರ ಸಂಘದ ಸದಸ್ಯರಾದ ಇಸ್ಮಾಯಿಲ್ ಸರ್, ನೂರುಲ್ಲಾ ಸರ್, ಷಣ್ಮುಖಪ್ಪ ಸರ್ ಮತ್ತು ಸಿದ್ದೇಶ್ ಸರ್ ಇವರೆಲ್ಲರ ಸಹಯೋಗದೊಂದಿಗೆ ಸನ್ಮಾನ್ಯ ಶ್ರೀ ಮಾಜಿ ಸಚಿವರು ಹಾಗೂ ಶಾಸಕರಾದ
ಈ.ತುಕಾರಾಮ್ ರವರನ್ನು ಭೇಟಿಯಾಗಿ (1)ಸಿ ಅಂಡ್ ಆರ್ ನೀತಿ ತಿದ್ದುಪಡಿ , (2)ಹಳ್ಳಿಗಳಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಿ ಕೊಡುವುದು, (3)ವರ್ಗಾವಣೆ ಸಮಸ್ಯೆ, (4)ಬಡ್ತಿ ಸಮಸ್ಯೆಯ ಬಗ್ಗೆ, (5)ವಿದ್ಯಾರ್ಥಿವೇತನ ಸಮಸ್ಯೆ , (6)ಹಿಂದಿ ಶಿಕ್ಷಕರ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಲಾಯಿತು,ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ.ಹಾಗೂ

ಬಸ್ ಡಿಪೋ ಮ್ಯಾನೇಜರ್ ರವರಿಗೆ ಕರೆಮಾಡಿ ಹಳ್ಳಿಗಳಿಗೆ ಬಸ್ಸುಗಳನ್ನು ಬಿಡುವಂತೆ ಹೇಳಿದರು.
ನಂತರ ತಾಲೂಕು ಕಚೇರಿಗೆ ಹೋಗಿ ಮಾನ್ಯ ತಹಶೀಲ್ದಾರ್ ಮೇಡಂ ರವರಿಗೆ (7)ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಆಧಾರ್ ಕಾರ್ಡ್ ಸಮಸ್ಯೆ, (8)ವಿದ್ಯಾರ್ಥಿವೇತನದ ಸಮಸ್ಯೆ ಬಗ್ಗೆ ಮತ್ತು (9)ವಿದ್ಯಾರ್ಥಿಗಳಿಗೆ ಸುಲಭವಾಗಿ ಬ್ಯಾಂಕ್ ಖಾತೆ ತೆರೆಯಲು ಸಹಾಯವಾಗುವಂತೆ ಮನವಿಯನ್ನು ಸಲ್ಲಿಸಲಾಯಿತು ,ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ತಹಶೀಲ್ದಾರ್ ಮೇಡಂ ರವರು ಪ್ರತಿ ಗ್ರಾಮ ಪಂಚಾಯಿತಿಗೆ ಆಧಾರ್ ಕಾರ್ಡ್ ಮಾಡುವವರನ್ನು ಕಳುಹಿಸುತ್ತೇವೆ ಒಂದು ದಿನಾಂಕವನ್ನು ಹೇಳುತ್ತೇವೆ , ಆ ದಿನಾಂಕದಂದು ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೇಳಿದರು,ಹಾಗೂ ಸೋಮವಾರದ ದಿನ ಎಲ್ಲಾ (10)ಬ್ಯಾಂಕುಗಳಿಗೆ ಝೀರೋ ಬ್ಯಾಲೆನ್ಸ್ ಅಕೌಂಟ್ ಓಪನ್ ಮಾಡಿಕೊಡುವಂತೆ ಆರ್ಡರ್ ಕಳುಹಿಸುವುದಾಗಿ ಹೇಳಿರುತ್ತಾರೆ,


ನಂತರ ತಾಲೂಕು ಕಚೇರಿಗೆ ಹೋಗಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ (11)ಮಹಿಳಾ ವಿಶ್ರಾಂತಿ ಕೊಠಡಿ, (12)ಶಾಲಾ ಕಾಂಪೌಂಡ್ ನಿರ್ಮಾಣ,
(13)ಶೌಚಾಲಯ ನಿರ್ಮಾಣ, (14)ಶಾಲಾ ಕಾಂಪೌಂಡ್ ಗಳಿಗೆ ಗ್ರಿಲ್ ಹಾಕಿಸಿ ಕೊಡುವಂತೆ ಹಾಗೂ (15)ಪ್ರತಿ ಶಾಲೆಗಳಿಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿ ಕಡೆಯಿಂದ ವ್ಯವಸ್ಥೆ ಮಾಡಲು ಮನವಿಯನ್ನು
ಸಲ್ಲಿಸಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಯಿಂದ ಎಲ್ಲಾ ಶಾಲೆಗಳಿಗೂ ವಾರಕ್ಕೆರಡು ಬಾರಿ ಶೌಚಾಲಯ ಸ್ವಚ್ಛತೆಗೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ಹೇಳಿರುತ್ತಾರೆ ಮತ್ತು ಮಹಿಳೆಯರ ವಿಶ್ರಾಂತಿ ಕೊಠಡಿಗೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ತಿಳಿಸಿ ಸಹಕರಿಸಿರುತ್ತಾರೆ,


ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಹೋಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ(16) ಸಿ ಅಂಡ್ ಆರ್ ರೂಲ್ಸ್ ತಿದ್ದುಪಡಿ,(17)ವರ್ಗಾವಣೆ ಸಮಸ್ಯೆ (18)ಹಿಂದಿ ಶಿಕ್ಷಕರ ಸಮಸ್ಯೆ ಹಾಗೂ (19) ಶಿಕ್ಷಕ ಮಿತ್ರ ಆಪ್ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳಿಯಲು ಎಲ್ಲಾ ಶಿಕ್ಷಕರಿಗೂ ಒಂದು ದಿನದ ತರಬೇತಿಯನ್ನು ಕೊಡುವಂತೆ ಮನವಿಯನ್ನು ಸಲ್ಲಿಸಲಾಯಿತು,(20)GPT ಗಳ ಪರಿವೀಕ್ಷಣಾ ಅವಧಿ ಪೂರ್ಣ ಗೊಂಡಿರುವುದನ್ನು ಸೇವಾ ಪುಸ್ತಕದಲ್ಲಿ ನಮೂದಿಸುವ ಕುರಿತು ಮನವಿ ಸಲ್ಲಿಸಲಾಯಿತು, (21)ಕೋವಿಡ್-19 ನಿಂದ ಮರಣ ಹೊಂದಿದ ಶಿಕ್ಷಕರಿಗೆ ಮತ್ತು (22)ನಿವೃತ್ತಿ ಹೊಂದಿದ ಶಿಕ್ಷಕರಿಗೆ ಒದಗಿಸಬೇಕಾದ ಪರಿಹಾರ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಸಲ್ಲಿಸಲಾಯಿತು.(23)ಶಿಶುಪಾಲನ ರಜೆಯ ಬಗ್ಗೆ ಮನವಿ ನೀಡಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಸನ್ಮಾನ್ಯ ಶ್ರೀ ಕ್ಷೇತ್ರಶಿಕ್ಷಣಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮೇಲಿನ ಎಲ್ಲಾ ಅಧಿಕಾರಿಗಳಿಗೆ ನೀಡಿದ ಮನವಿಗಳನ್ನುಪೂರೈಸುತ್ತೇವೆ ಎಂದು ಸನ್ಮಾನ್ಯ ಶ್ರೀ ಶಾಸಕರು ಭರವಸೆ ನೀಡಿರುತ್ತಾರೆ ಎಂದು
ಅಧ್ಯಕ್ಷರು ಪ್ರೇಮ. ಕೆ ಹಾಗೂ ಪ್ರಧಾನ ಕಾರ್ಯದರ್ಶಿಗಳು ಅರ್ಚನಾ.ಕೆ ತಿಳಿಸಿದ್ದಾರೆ

ಔಷಧೀಯ ಸಸ್ಯಗಳನ್ನು ನೆಟ್ಟ ಶಿವಮೊಗ್ಗದ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ ಜು.28.ಪರಿಸರಕ್ಕೆ ಯಾರು ತೋರಿಸಬೇಕು ಕನಿಕರ, ಪರಿಸರ ರಕ್ಷಿಸಿ ನಾವು ಬಾಳೋಣ ಸುಖಕರ. ಜನರಿಗಿರುವ ಆಮ್ಲಜನಕದ ಕೊರತೆ, ದೂರಮಾಡುವ ಅಹಂ ಮರೆತೆ. ಇಂದು ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ನಾಗರಾಜ್ ರವರು ಹಾಗೂ ECO ಶ್ರೀಯುತ ಗುಡ್ಡಪ್ಪ ಗಾಣಿಗೇರ್ ಇವರ ಉಪಸ್ಥಿತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರವೀಂದ್ರ ನಗರ ಇಲ್ಲಿ ಅರಣ್ಯ ಇಲಾಖೆಯಿಂದ ವಿತರಿಸಿದ್ದ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಪರಿಸರವನ್ನು ಉಳಿಸುವ ಹೋರಾಟವನ್ನು ಹೊಂದಿರುವ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾಧ್ಯಕ್ಷರಾದ ರಾಧಾ ರವರು ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ರವರು ಕೋಶಾಧ್ಯಕ್ಷರಾದ ಲಲಿತ ರವರು ಹಾಗೂ ತಾಲೂಕು ಅಧ್ಯಕ್ಷರಾದ ಶಾಹಿನ ಬಾನು ಕೋಶಾಧ್ಯಕ್ಷರಾದ ಲಕ್ಷ್ಮಿ ರವರು ಔಷಧಿ ಉಪಯುಕ್ತ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಉತ್ತಮ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ಕಂಡು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿವಮೊಗ್ಗ ಇವರು ಅಭಿನಂದನೆಗಳನ್ನು ತಿಳಿಸಿ ಇನ್ನೂ ಹೆಚ್ಚು ಉತ್ತಮ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದು ಆಶಿಸಿದರು