ಸಸಿಗೆ ಬೇಡಿಕೆ ಇಟ್ಟ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ ಜೂ21.
ಬರಡಾದ ನೆಲಕ್ಕೆ ಜೀವಚೈತನ್ಯ ತಲುಪಿಸುವ ಹೊಣೆ ಹೊತ್ತು, ಸದ್ದಿಲ್ಲದೆ ಚಿಗುರೊಡೆದು ಬಂದ ಫುಲೆ ಸಂಘವು ಪ್ರಕೃತಿ ಯಂತೆ ಶುದ್ಧ. ವನಸಿರಿಯ ಪ್ರೀತಿಯಂತೆ ಅದಕ್ಕೆ ಪರ್ಯಾಯ ಪದ ಇಲ್ಲವೆನ್ನುವಷ್ಟು ಪರಿಶುದ್ಧ ಎಂಬ ನುಡಿಯಂತೆ ಇಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘವು, ಶಿವಮೊಗ್ಗದ ವಲಯ ಅರಣ್ಯಾಧಿಕಾರಿ ಶ್ರೀ ಉಮೇಶ್ ರವರಿಗೆ ಔಷಧಿಯುಕ್ತ ಹಾಗೂ ಉಪಯುಕ್ತ ಸಸಿಗಳನ್ನು ನೀಡುವಂತೆ ಮನವಿ ಮಾಡಿದೆ.ವಲಯ ಅರಣ್ಯಾಧಿಕಾರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತಮ ಕೆಲಸದಲ್ಲಿ ಫುಲೆ ಶಿಕ್ಷಕಿಯರ ಸಂಘ ತೊಡಗಿಸಿಕೊಂಡಿದೆ ಹೀಗೇ ಮುಂದೆಯು ಪರಿಸರ ಪ್ರೇಮ ‌ಪರಿಸರ ಪ್ರಜ್ಞೆ ಎಲ್ಲರಲಿ ಮೂಡಿಸುವಂತ ಕಾರ್ಯಕ್ರಮಗಳನ್ನು ಫುಲೆ ಸಂಘವು ಹಮ್ಮಿಕೊಳ್ಳಲು ನಮ್ಮ ಸಹಕಾರ ಎಂದಿಗೂ ಸಿಗುತ್ತದೆ ಎಂದು ಭರವಸೆ ನೀಡಿದ್ದು,ಈ ಸಸಿಗಳನ್ನು
ರವೀಂದ್ರ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ನೆಟ್ಟು ಬೆಳೆಸಿ ಪೋಷಿಸುವ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಸಂಘಟನೆ ಹೊರಲಿದೆ ಎಂದು ಜಿಲ್ಲಾಧ್ಯಕ್ಷರಾದ ರಾಧಾ ರವರು ತಿಳಿಸಿದ್ದಾರೆ..
ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ನರಗುಂದ ಹಾಗೂ ಜಿಲ್ಲಾ ಕೋಶಾಧ್ಯಕ್ಷರಾದ ಲಲಿತ ರವರು,ತಾಲೂಕಿನ ಅಧ್ಯಕ್ಷರಾದ ಶಾಹಿನ ಬಾನು,ತಾಲ್ಲೂಕಿನ ಕೋಶಾದಕ್ಷರಾದ ಲಕ್ಷ್ಮಿ ರವರುಗಳು ಸಂಘದ ಎಲ್ಲಾ ಪದಾಧಿಕಾರಿಗಳು ಪರವಾಗಿ ಭಾಗವಹಿಸಿ ಮನವಿ ಮಾಡಿಕೊಂಡಿದ್ದಾರೆ.

ಶಿಶುಪಾಲನೆ ರಜೆ- ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಛೇರಿಗೆ ಬೇಟಿ.

ಬೆಂಗಳೂರು ಜೂನ್-21

2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶೀಘ್ರದಲ್ಲಿ ಜಾರಿಯಾಗಲು
ಸರ್ಕಾರದ ಆದೇಶ ಹೊರಬೀಳಬೇಕಾಗಿದೆ.

ಇಂತಹ ಕೋವಿಡ್ ಸಂಕಷ್ಟದಿನದಲ್ಲಿ ಶಿಶು ಆರೈಕೆ ರಜೆಯು ಪ್ರತಿ ಮಹಿಳಾ ನೌಕರರಿಗೆ ಅನಿವಾರ್ಯವಾಗಿದ್ದು ಅತ್ಯಂತ ಮಹತ್ವದ ಆದೇಶವಾಗಿರುತ್ತದೆ.
ಇಂದು ರಾಜ್ಯದ ಎಲ್ಲಾ ಮಹಿಳಾ ನೌಕರರು ,ಶಿಕ್ಷಕಿಯರು ಸರ್ಕಾರದ ಈ ಆದೇಶವನ್ನೇ ಎದುರು ನೋಡುತ್ತಿದ್ದಾರೆ.
ಘನ ಸರ್ಕಾರವು
ಅತೀ ಶೀಘ್ರದಲ್ಲಿ ರಾಜ್ಯ ಮಹಿಳಾ ನೌಕರರಿಗೆ ‘೬ ತಿಂಗಳ ಶಿಶುಪಾಲನಾ ರಜೆ’ ಯ ಸರ್ಕಾರಿ ಆದೇಶವನ್ನು ಮಾಡಿಕೊಡುವಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ‌ ಶಿಕ್ಷಕಿಯರ ಸಂಘದ ಬೆಂಗಳೂರು ದಕ್ಷಿಣ ಭಾಗ-1 ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಕೆ.ಶಾಸ್ತ್ರೀ ,ಉಪಾಧ್ಯಕ್ಷರುಗಳಾದ ಶ್ರೀಮತಿ ನೂರುನ್ನೀಸಾ, ಶ್ರೀಮತಿ ಮಣಿ,ಆರ್ ಹಾಗೂ ಕೋಶಾಧ್ಯಕ್ಷರಾದ ಶ್ರೀಮತಿ ಉಮಾದೇವಿ ರವರುಗಳು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು,(DPAR) ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಕಛೇರಿಗೆ ಖುದ್ದಾಗಿ ಬೇಟಿ ಮಾಡಿ ಅತೀ ಶೀಘ್ರವಾಗಿ ಆದೇಶ ಹೊರಡಿಸಲು ಮನವಿ ಮಾಡಿಕೊಂಡಿರುತ್ತಾರೆ.
ಹಾಗೆಯೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು, ವಿಧಾನಸೌಧ, ಬೆಂಗಳೂರು
ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಆರ್ಥಿಕ ಇಲಾಖೆ), ವಿಧಾನಸೌಧ, ಬೆಂಗಳೂರು ರವರುಗಳಿಗೂ ಸಹಾ ಖುದ್ದಾಗಿ ಬೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಶಿಶುಪಾಲನಾ ರಜೆ ಶೀಘ್ರವಾಗಿ ಜಾರಿಯಾಗಲಿ-ಡಾ.ಲತಾ.ಎಸ್.ಮುಳ್ಳೂರ ಮನವಿ

ಧಾರವಾಡ ಜೂನ್ 18.

ಶಿಶುಪಾಲನೆ ರಜೆ ಕುರಿತ ಸರ್ಕಾರದ ಆದೇಶ ಮಾಡಲು ಮನವಿ ಸಲ್ಲಿಸಿದ ರಾಜ್ಯ ಫುಲೆ ಸಂಘ

2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ್ದು,
ಇದು ಮಹಿಳಾ ನೌಕರರ ಮತ್ತು ಶಿಕ್ಷಕಿಯರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಿಗಿರುವ ಕಾಳಜಿಯನ್ನು ತೋರಿಸುತ್ತದೆ.


ಇದು ರಾಜ್ಯದ ಎಲ್ಲಾ ಮಹಿಳಾ ಸರ್ಕಾರಿ ನೌಕರರು ಮತ್ತು ಮಹಿಳಾ ಶಿಕ಼ಕಿಯರಿಗೆ ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ರಾಜ್ಯದ ಸರ್ವ ಮಹಿಳಾ ಶಿಕ್ಷಕಿಯರೆಲ್ಲರೂ ಅಭಾರಿಯಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರವರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.


ಅತೀ ಶೀಘ್ರದಲ್ಲಿ ರಾಜ್ಯ ಮಹಿಳಾ ನೌಕರರಿಗೆ ‘೬ ತಿಂಗಳ ಶಿಶುಪಾಲನಾ ರಜೆ’ ಯ ಸರ್ಕಾರಿ ಆದೇಶವನ್ನು ಮಾಡಿಕೊಡುವಂತೆ ಘನ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳವರಿಗೆ ಹಾಗೂ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರಿಗೆ
ಡಾ. ಲತಾ. ಎಸ್. ಮುಳ್ಳೂರ ಹಾಗೂ
ರಾಜ್ಯ ಪ್ರಧಾನ ಕಾರ್ಯದರ್ಶಿ
ಶ್ರೀಮತಿ ಜ್ಯೋತಿ. H ರವರುಗಳು ಮನವಿ ಮಾಡಿದ್ದಾರೆ. ಹಾಗೆಯೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು, ವಿಧಾನಸೌಧ, ಬೆಂಗಳೂರು ಹಾಗೂ‌ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಆರ್ಥಿಕ ಇಲಾಖೆ), ವಿಧಾನಸೌಧ, ಬೆಂಗಳೂರು ಇವರುಗಳಿಗೂ ಸಹ ಮನವಿ ಪ್ರತಿಗಳನ್ನು ಸಲ್ಲಿಸಿದ್ದಾರೆ.

ಬಿ.ಇ.ಒ ಅಧಿಕಾರಿಗೆ ಮನವಿ ಸಲ್ಲಿಕೆ

ತೀರ್ಥಹಳ್ಳಿ ಜೂ.13. ಕೋವಿಡ್ 19 ಮಹಾ ರೋಗವು ಉಲ್ಬಣಗೊಂಡು ವಿಶ್ವವ್ಯಾಪಿ ಜನಜೀವನವನ್ನು ತಲ್ಲಣಗೊಳಿಸಿದೆ.
ಅದರಲ್ಲೂ ಎರಡನೇ ಅಲೆಯು ನಮ್ಮ ದೇಶದಲ್ಲಿ ಅತೀವ ಶೀಘ್ರವಾಗಿ ವ್ಯಾಪಿಸಿ ಲಕ್ಷಾಂತರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸಾವಿರಾರು ಜನರ ಜೀವಹಾನಿ ಮಾಡಿರುತ್ತದೆ
ಇದು ಶೈಕ್ಷಣಿಕ ರಂಗದ ಮೇಲೆ ಪ್ರಭಾವ ಬೀರಿರುತ್ತದೆ
ಇನ್ನು ತಜ್ಞರ ಅಭಿಪ್ರಾಯದಂತೆ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಎಂದು ವರದಿ ಮಾಡಿರುತ್ತಾರೆ.


ಈಗಾಗಲೇ ಶಿಕ್ಷಣ ಇಲಾಖೆಯು 2021 22ನೇ ಸಾಲಿನ ಶೈಕ್ಷಣಿಕ ಅವಧಿ ಶಾಲಾ ದಾಖಲಾತಿ ಪ್ರಾರಂಭಿಸಲು ಸೂಚಿಸಿದೆ. ಆದ್ದರಿಂದ ಕೋವಿಡ್ ಡ್ಯೂಟಿ ಮಾಡುವ ಶಿಕ್ಷಕರಿಗೆ ಮಾತ್ರವಲ್ಲದೆ ತಾಲೂಕಿನ ಪ್ರತಿ ಶಿಕ್ಷಕರಿಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ ಮೊದಲ ಸಾಲಿನ ಆದ್ಯತೆ ನೀಡಿ ಕೋವಿಡ್ ಲಸಿಕೆ ಹಾಕಿಸಬೇಕೆಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತೀರ್ಥಹಳ್ಳಿ
ತಾಲ್ಲೂಕು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಮನವಿ ಸಲ್ಲಿಸಿದೆ.ತಾಲ್ಲೂಕಿನ ಅಧ್ಯಕ್ಷರಾದ ಭಾರತಿ ಕೆ ಎಸ್ ,ಪ್ರಧಾನ ಕಾರ್ಯದರ್ಶಿಗಳಾದ ನರ್ಮದಾ ಎಂ ವಿ,ಕೋಶಾಧ್ಯಕ್ಷರು ನಂದಿನಿ ರವರುಗಳು
ಎಲ್ಲಾ ಪದಾಧಿಕಾರಿಗಳ ಪರವಾಗಿ ಹಾಜರಿದ್ದರು.

ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ ಶಿಕ್ಷಕಿಯರ ಸಂಘ

ಧಾರವಾಡ ಜೂನ್ -12
ಕೊವಿಡ್ ಎರಡನೇ ಅಲೆ ಇಡೀ ರಾಜ್ಯದ ಜನ ಸಮುದಾಯವನ್ನೇ ತಲ್ಲಣಗೊಳಿಸಿದ್ದಲ್ಲದೇ ಕೊರೊನಾ ಸೋಂಕಿಗೆ ಸಿಕ್ಕಿ ಹಲವಾರು ಶಿಕ್ಷಕರ ಪ್ರಾಣ ಬಲಿಯಾಗಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಅವಧಿ ಜುಲೈ-1 ರಿಂದ ಪ್ರಾರಂಭವಾಗುತ್ತಿದ್ದು,ಶಿಕ್ಷಕರು ಹದಿನೈದು ದಿನ‌ ಮೊದಲೇ ಜೂನ್ -15 ಕ್ಕೆ ಪೂರ್ವ‌ಸಿದ್ದತೆಗಾಗಿ ಶಾಲೆಗೆ ಹೋಗಬೇಕೆಂದು ಇಲಾಖೆಯು ಆದೇಶ ಹೊರಡಿಸಿದೆ.ಇದರಿಂದ ಎಲ್ಲ ಶಿಕ್ಷಕರಿಗೂ ಸಮಸ್ಯೆ ಎದುರಾಗಿದೆ.
ಕೊವಿಡ್ ಲಾಕ್ ಡೌನ್ 11 ಜಿಲ್ಲೆಗಳಲ್ಲಿ ಮುಂದುವರೆದಿದ್ದು,ಉಳಿದ 20 ಜಿಲ್ಲೆಗಳಲ್ಲಿ ಸೆಮಿ ಲಾಕ್ಡೌನ್ ಮಾಡಲಾಗಿದೆ ಸರಿಯಷ್ಟೆ.ಆದರೆ
ಕೆ.ಎಸ್.ಆರ್.ಟಿ.ಸಿ.
ಬಸ್ ಸಂಚಾರ ರಾಜ್ಯದಾದ್ಯಂತ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಇಂತ ಪರಿಸ್ಥಿತಿಯಲ್ಲಿ ಸರ್ಕಾರಿ ಬಸ್ ನ್ನೇ ಸಂಪೂರ್ಣ ಅವಲಂಬಿಸಿಕೊಂಡು ಶಾಲೆಗೆ ಹೋಗಬೇಕಾದ ಶಿಕ್ಷಕರುಗಳಿಗೆ ಜೂನ್-15 ಕ್ಕೆ ಶಾಲೆಗೆ ತೆರಳಲು ಕಷ್ಟಸಾದ್ಯವಾಗಿದೆ.ಅದರಲ್ಲು ಮಹಿಳಾ ಶಿಕ್ಷಕಿಯರಿಗೆ ಶಾಲೆಗೆ ಹೋಗಲು ಹೆಚ್ಚು ತೊಂದರೆಯಾಗಿರುತ್ತದೆ. ಆದ್ದರಿಂದ ಘನ ಸರ್ಕಾರವು ಈ ಎಲ್ಲಾ ಪರಿಸ್ಥಿತಿಯನ್ನು ಮರುಪರಿಶೀಲಿಸಿ, ಎಲ್ಲಾ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ ಶಾಲೆ ಪ್ರಾರಂಭವಾಗುವ ಎರಡು ದಿನಗಳ ಮೊದಲು ಜೂನ್ 29 ಕ್ಕೆ ಶಾಲೆಗೆ ಹಾಜರಾಗಲು ಸೂಚಿಸಿ ಆದೇಶ ಮಾಡಬೇಕೆಂದು ಹಾಗೂ ಗರ್ಭಿಣಿ ಶಿಕ್ಷಕಿಯರಿಗೆ, ಒಂದು ವರ್ಷ ಮಗು ಹಾರೈಕೆ ಮಾಡುತ್ತಿರುವ ಶಿಕ್ಷಕಿಯರಿಗೆ,ವಿಕಲಚೇತನ ಶಿಕ್ಷಕಿಯರಿಗೆ ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಶಿಕ್ಷಕಿಯರಿಗೆ ಕೊವಿಡ್ ಅಲೆ ಸುಧಾರಣೆ ಆಗುವವರೆಗೆ ವರ್ಕ್ ಫ್ರಂ ಹೋಂ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಿ ಅನುಕೂಲ ಮಾಡಿಕೊಡಬೇಕೆಂದು ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಸುರೇಶ ಕುಮಾರ್.ಎಸ್ ರವರನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ರವರುಗಳು ಸಮಸ್ತ ಶಿಕ್ಷಕ,ಶಿಕ್ಷಕಿಯರ ಪರವಾಗಿ ಮನವಿಯನ್ನು ಮಾಡಿದ್ದಾರೆ.

ಶಿಕ್ಷಕರ ಸ್ನೇಹಿ,ಪ್ರಾಮಾಣಿಕ ಅಧಿಕಾರಿಗೆ ಶುಭಕೋರಿದ ಫುಲೆ ಶಿಕ್ಷಕಿಯರ ಸಂಘ

ಮಧುಗಿರಿ. ಜೂ.10.
ಸರಳ ಸಜ್ಜನಿಕೆಯ ಕ್ರಿಯಾಶೀಲರು, ಶಿಕ್ಷಣ ಆಸಕ್ತರು, ಸದಾ ಶೈಕ್ಷಣಿಕ ಚಟುವಟಿಕೆಯಲ್ಲಿ ಜೀವನವನ್ನು ತೊಡಗಿಸಿಕೊಂಡವರು,ಮಕ್ಕಳ ಕಲಿಕೆಗಾಗಿ ಸದಾ ಚಿಂತನೆ ಮಾಡುವವರು ಮಧುಗಿರಿ ಶೈ. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರು ಶ್ರೀ ಎಂ ರೇವಣ್ಣಸಿದ್ದಪ್ಪ‌ನವರು.

ಕೊವಿಡ್ ಎರಡನೇ ಅಲೆಗೆ ಸಿಕ್ಕಿ ಹಲವಾರು ಶಿಕ್ಷಕರು ತಮ್ಮ ಜೀವವನ್ನೆ ಕಳೆದುಕೊಂಡಾಗ ಮರುಗಿ, ಅಂತಹ ಸಂಕಷ್ಟದ ದುಸ್ಥಿತಿಯಲ್ಲೂ ವಿವಿಧ ವರ್ಚ್ಯುಯಲ್ ವೆಬಿನಾರ್ ಕಾರ್ಯಕ್ರಮಗಳನ್ನು ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಾರಥ್ಯದಲ್ಲಿ ಹಮ್ಮಿಕೊಂಡು ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಮತ್ತು ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ಮೂಡಿಸಿದರು, ಎಲ್ಲರಿಗೂ ಧೈರ್ಯ ತುಂಬುವ ಮೂಲಕ ಪ್ರತೀ ಶಿಕ್ಷಕರ ಪ್ರೀತಿಗೆ ಪಾತ್ರರಾದವರು, ಸರಳ ಸೌಮ್ಯ ಸ್ವಭಾವ,ಸ್ಪಂದನೆ,ಸಹಕಾರಗಳಿಂದ ಇವರು ಶಿಕ್ಷಕರ ಸ್ನೇಹಿಯಾಗಿ.ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಶಿಕ್ಷಕರ ಆಶಾಕಿರಣವಾಗಿ ಹೆಮ್ಮೆಯ ಜಿಲ್ಲಾ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಂ. ರೇವಣ್ಣ ಸಿದ್ದಪ್ಪ ರವರ ಜನ್ಮ ದಿನ ಇಂದು,

ಅವರಿಗೆ ಪ್ರೀತಿಪೂರ್ವಕವಾಗಿ ಶುಭಕೋರುವ ಮೂಲಕ ಅವರಿಗೆ ಆ ದೇವರು ಆರೋಗ್ಯ ಐಶ್ವರ್ಯ,ಸಂಪತ್ತನ್ನು ನೀಡಲಿ, ಹೆಚ್ಚು ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉನ್ನತ ಮಟ್ಟದಲ್ಲಿ ಅವರಿಗೆ ಕೀರ್ತಿ ಲಬಿಸಲಿ ಎಂದು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಪ್ರಾರ್ಥಿಸಿ ಆಶಿಸುತ್ತಾ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪದಾಧಿಕಾರಿಗಳ ಪರವಾಗಿ, ಹಾಗೂ ಪ್ರಾಥಮಿಕ ಪ್ರೌಢಶಾಲೆಯ ಸಮಸ್ತ ಶಿಕ್ಷಕಿಯರ ಪರವಾಗಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜಿ.ಎಲ್.ರಾಧಮ್ಮ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲತಾಮಣಿ. ಹೆಚ್.ಕೆ ರವರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ – ಫುಲೆ ಸಂಘ

ಶಿಕಾರಿಪುರ- ಜೂ.9 ಕೊವಿಡ್ ಮಹಾಮಾರಿಯ ಎರಡನೇ ಅಲೆಯು ಹಳ್ಳಿ ಹಳ್ಳಿಗೆ ಹರಡಿ ಇಂದು ದೊಡ್ಡಪ್ರಮಾಣದ ಜೀವ ಹಾನಿ ಮಾಡಿದೆ. ರಾಜ್ಯದ ನೂರಾರು ಶಿಕ್ಷಕರು ಬಲಿಯಾಗಿದ್ದಾರೆ,ಇದರಿಂದ ತಾಲ್ಲೂಕಿನ ಶಿಕ್ಷಕ ಶಿಕ್ಷಕಿಯರಿಗೆ ಆತಂಕ ಮೂಡಿದೆ.
ಈಗಾಗಲೇ ಶಿಕ್ಷಣ ಇಲಾಖೆಯು 2021-22 ನೇ ಸಾಲಿನ ಶೈಕ್ಷಣಿಕ ಅವದಿ ಪ್ರಕಟಿಸಿ ಶಾಲಾ ದಾಖಲಾತಿ ಪ್ರಾರಂಬಿಸಲು ಸೂಚಿಸಿದೆ. ಆದರಿಂದ ಕೊವಿಡ್ ಡ್ಯೂಟಿ ಮಾಡುವ ಶಿಕ್ಷಕರಿಗೆ ಮಾತ್ರವಲ್ಲದೇ ತಾಲ್ಲೂಕಿನ ಪ್ರತೀ ಶಿಕ್ಷಕ-ಶಿಕ್ಷಕಿಯರಿಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ
ಮೊದಲ ಸಾಲಿನ ಆದ್ಯತೆ ನೀಡಿ ಕೋವಿಡ್ ಲಸಿಕೆ ಹಾಕಿಸಬೇಕು ಎಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕಾರಿಪುರ ತಾಲ್ಲೂಕಿನ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಇಂದು ಮನವಿ ಸಲ್ಲಿಸಿದೆ.
ತಾಲೂಕಿನ ಎಲ್ಲಾ ಪದಾಧಿಕಾರಿಗಳ ಪರವಾಗಿ
ತಾಲ್ಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಸುಣಗಾರ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಉಷಾರಾಣಿ ಎಸ್ ವಿ,ತಾಲ್ಲೂಕು ಕೋಶಾಧ್ಯಕ್ಷರಾದ ಶ್ರೀಮತಿ ಅರುಣ ದೊಡ್ಡಮನಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಬ್ಯಾಡಗಿ ರವರು ಹಾಜರಿದ್ದರು.