ಲಲಿತಾ ವೃದ್ಧಾಶ್ರಮದಲ್ಲಿ ಫುಲೆ ಶಿಕ್ಷಕಿಯರ ಅರ್ಥಪೂರ್ಣ ಪರಿಸರ ದಿನಾಚರಣೆ

ಕರ್ನಾಟಕ  ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ರಾಯಚೂರು


ರಾಯಚೂರು.ಜೂನ್ 20

ಇಂದು ಲಲಿತ ವೃದ್ಧಾಶ್ರಮದಲ್ಲಿ ಪರಿಸರ ದಿನಾಚರಣೆ ನಿಮಿತ್ತವಾಗಿ ಗಿಡಗಳನ್ನ ನೆಡುವದರ ಮೂಲಕ ಹಾಗೂ ಅಲ್ಲಿನ ವೃದ್ಧರಿಗೆ ಹಣ್ಣುಗಳನ್ನು ಹಂಚುವುದರ ಜೊತೆಗೆ ಆಶ್ರಮಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನ ಸಂಘದ ವತಿಯಿಂದ ಸಂಘದ ಎಲ್ಲಾ ಪಧಾಧಿಕಾರಿಗಳ ಸಹಾಯ ಮತ್ತು ಸಹಕಾರದಿಂದ ಆಶ್ರಮಕ್ಕೆ ನೀಡಲಾಯಿತು .
ಈ ಸೇವಾ ಮನೋಭಾವಕ್ಕೆ ಅಲ್ಲಿನ ಹಿರಿಯ ಜೀವಿಗಳು ತುಂಬು ಹೃದಯದಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಾಜರಿದ್ದ ಎಲ್ಲಾ ಶಿಕ್ಷಕಿಯರನ್ನು ಅಕ್ಷತೆ ಹಾಕುವುದರ ಮೂಲಕ ಆಶೀರ್ವದಿಸಿದರು ಹಾಗೆ ಒಬ್ಬ ಹಿರಿಯ ಅಪ್ಪಾಜಿಯವರು ತವರು ಮನೆಗೆ ಹೆಣ್ಣು ಮಕ್ಕಳು ಬಂದು ಹರಸಿ ದಂತೆ ಖುಷಿಯಾಗಿದೆ ಎಂಬ ಮಾತನ್ನು ಹೇಳುವುದರ ಮೂಲಕ ಎಲ್ಲರನ್ನು ಭಾವನಾತ್ಮಕವಾಗಿ ಬಂದಿಸಿದರು ಆಗ ಎಲ್ಲರ ಕಣ್ಣುಗಳಲ್ಲಿ ಭಾವನಾತ್ಮಕ ಹನಿಗಳು ತುಂಬಿ ಬಂತು  ಅಲ್ಪ ಸೇವೆ ನಮ್ಮ ಸಂಘದ ವತಿಯಿಂದ ಇಂದು ನೆರವೇರಿದೆ ಎನ್ನುವ ಆತ್ಮತೃಪ್ತಿ ಎಲ್ಲರಲ್ಲೂ ಮೂಡಿ ಬಂತು  ಈ ಒಂದು ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಕಾರಣೀಭೂತರಾದಂತಹ ಎಲ್ಲಾ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರಿಗೆ ತುಂಬು ಹೃದಯದ ಧನ್ಯವಾದಗಳು


ಹಾಗೆ ಈ ಒಂದು ಕಾರ್ಯಕ್ರಮ ಯಶಸ್ವಿ ಯಾಗುವುದಕ್ಕೆ ಕಾರಣಭೂತರಾದಂತ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಛಾಯಾದೇವಿ ಕೋಳೂರು ಮತ್ತು ತಾಲೂಕಾಧ್ಯಕ್ಷರಾದಂತ ಶ್ರೀಮತಿ ಧನಲಕ್ಷ್ಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದಂತಹ ಶ್ರೀಮತಿ ಕೆ ವಿಜಯಲಕ್ಷ್ಮಿ ಹಾಗೂ ಶ್ರೀಮತಿ ನಿರ್ಮಲ, ಶ್ರೀಮತಿ ಶಾರದಾ, ಶ್ರೀಮತಿ ಪ್ರಮೀಳಾ, ಶ್ರೀಮತಿ ಗೀತಾಂಜಲಿ,ಶ್ರೀಮತಿ ಕವಿತಾ, ಶ್ರೀಮತಿ ಜಯಲಕ್ಷ್ಮಿ,ಶ್ರೀಮತಿ ಅನಿತಾ, ಶ್ರೀಮತಿ ದೀಕ್ಷಾ, ಶ್ರೀಮತಿ ಗಾಯಿತ್ರಿ ಶಿಕ್ಷಕಿಯವರೆಲ್ಲರೂ ಉಪಸ್ಥಿದ್ದಾರೆಂದು ಹಾಗೆ ಇನ್ನುಳಿದ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಶಿಕ್ಷಕಿಯರು ಸಕ್ರಿಯವಾಗಿ ಉತ್ಸಾಹದಿಂದ, ಸಹಕಾರದಿಂದ ಗೌರವಯುತವಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟದ್ದಕ್ಕಾಗಿ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣೀಭೂತರಾದಂತಹ ಎಲ್ಲಾ ಮಹಿಳಾ ನೌಕರರಿಗೂ ಕರ್ನಾಟಕ  ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ತುಂಬ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಗಿದೆ.

ವರದಿ – ಧನಲಕ್ಷ್ಮೀ .ತಾಲೂಕು ಅಧ್ಯಕ್ಷರು, ರಾಯಚೂರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment