ಶ್ರೀಮತಿ ಅರುಣಾ ಬಾಯಿ .ಅಧ್ಯಕ್ಷರು.
ಮಾನವಿ ತಾಲ್ಲೂಕು ,ರಾಯಚೂರು ಜಿಲ್ಲೆ..
ಕಾದಂಬರಿ ಆಧಾರಿತ ಸಿನೆಮಾ ಇದಾಗಿದ್ದು,ಮಾತೆ ಸಾವಿತ್ರಿ ಅನಾಚಾರ ಮೌಡ್ಯವನ್ನು ಚೆನ್ನಾಗಿ ಪ್ರಶ್ನೆ ಮಾಡಿದ್ದಾರೆ, ಸತಿಸಹಗಮನ ಪದ್ದತಿ, ಬಾಲ್ಯ ವಿವಾಹ , ಶಿಕ್ಷಣ ದಿಂದ ಹಳೆ ಕಂದಾಚಾರಕ್ಕೆ ಸವಾಲು ಎತ್ತಿದ್ದಾರೆ, ಸಮಾನತೆ , ಸ್ವಾತಂತ್ರ್ಯ,ಬಗ್ಗೆ ತಿಳಿಯಬೇಕು ಅಂದರೆ ಶಿಕ್ಷಣ ಬೇಕು ಎನ್ನುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಸಮಾಜದಲ್ಲಿ ಇರುವ ಅನಿಷ್ಟ ಪದ್ಧತಿ ಗಳನ್ನ ಪ್ರಶ್ನೆ ಮಾಡಿದ್ದಾರೆ. ಲಿಂಗ,ಜಾತಿಗಿಂತ ಎಲ್ಲರೂ ಸಮಾನರು ಎಂಬುದನ್ನು ಮನಗಂಡು ಸತ್ಯವನ್ನು ಪ್ರತಿಪಾದಿಸಿದ್ದಾರೆ, ವಿತಂಡವಾದ ಎಂದವರಿಗೆ ಲಕ್ಷ್ಯ ಕೊಡದೆ ಹೆಣ್ಣುಮಕ್ಕಳ ಮೇಲೆ ಆಗುವ ಅತ್ಯಾಚಾರ ,ಶೋಷಣೆ ,ಅನ್ಯಾಯ ವಿರುದ್ಧ ಸಿಡಿದೆದ್ದ ಸಾವಿತ್ರಿ ಬಾಯಿ, ಶೋಷಣೆ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಶಿಕ್ಷಣ ದಿಂದಲೇ ಧೈರ್ಯ ತುಂಬಿದ್ದಾರೆ. ಹೆಣ್ಣು ಒಂದು ಭೋಗದ ವಸ್ತು ಅಲ್ಲಾ ಮಹಿಳೆಯರು ಜಾಗೃರಾಗಿರಬೇಕು ಸಮಾಜದ ಅನಿಷ್ಟ ಪದ್ಧತಿ ವಿರುದ್ಧ ಧ್ವನಿ ಎತ್ತಬೇಕು ಎಂದು ಸಿನೆಮಾದಲ್ಲಿ ಸ್ಪಷ್ಟವಾಗಿ ಮೂಡಿ ಬಂದಿದೆ.
ಸಮಾಜದ ಸುಧಾರಣೆ ಆಗಬೇಕಾದರೆ ಹೊಸ ಕ್ರಾಂತಿ ಜ್ವಾಲೆ ಕಿಡಿ ಹಚ್ಚಿದವರು ಸಾವಿತ್ರಿ.. ಅಜ್ಞಾನದಿಂದ ಜ್ಞಾನದ ಕಡೆಗೆ ಕೊoಡಯ್ಯುವಲ್ಲಿ ಜೀವನದ ರಹಸ್ಯ ಇದೆ. ಮನುಷ್ಯರು ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದ್ದಾರೆ..ಮಹಿಳೆಯರ ಕೇಶಮುಂಡನೆಗೂ ಕೊನೆ ಹಾಡಿದ್ದಾರೆ.. ಸಿನೆಮಾದಲ್ಲಿ ಎಲ್ಲಾ ನಟರು ತಮ್ಮ ಪಾತ್ರಗಳಿಗೆ ನಿಜವಾಗಿಯೂ ಜೀವ ತುಂಬಿದ್ದಾರೆ.. ಜನ ಸೇವಾ ಜನಾರ್ಧನ ಸೇವಾ ಎಂದು ಹೇಳಿ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇರುವ ಅಜ್ಞಾನ ಹೋಗಲಾಡಿಸಿ ಜ್ಞಾನದ ಜ್ಯೋತಿ ಹಚ್ಚಿದ್ದಾರೆ.. ಇಂಥಾ ಸಿನಿಮಾ ಮಾಡಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಅನಂತ ದನ್ಯವಾದಗಳು.

ಡಾ. ರಾಧಾ ಕೆ. ಎಂ. ತಿಪಟೂರು
ಸಾವಿತ್ರಿಬಾಯಿ ಫುಲೆ ಚಲನಚಿತ್ರವು ಅತ್ಯುತ್ತಮ ಚಲನಚಿತ್ರವಾಗಿದ್ದು ಸಾವಿತ್ರಿಬಾಯಿ ಫುಲೆಯವರು ತಮ್ಮ ಜೀವನದಲ್ಲಿ ಪಟ್ಟಂತಹ ಕಷ್ಟ, ಅಕ್ಷರ ಅಭ್ಯಾಸವನ್ನು ಕಲಿತು ಅವರು ಶಾಲೆಯನ್ನು ಪ್ರಾರಂಭಿಸಿ ಹೆಣ್ಣುಮಕ್ಕಳಿಗೆ ದಾರಿದೀಪವಾದಂತಹ ರೀತಿಯನ್ನು ಅತ್ಯಂತ ಮನಮುಟ್ಟುವಂತೆ ಚಿತ್ರಿಸಲಾಗಿದ್ದು ಇಂದಿನ ಎಲ್ಲಾ ಹೆಣ್ಣು ಮಕ್ಕಳಿಗೆ ಆಕೆ ಹೇಗೆ ಮಾದರಿಯದಳು ಎಂಬುದನ್ನು ಮನೋಹರವಾಗಿ ತಿಳಿಸಲಾಗಿದೆ. ಚಲನಚಿತ್ರ ನಿರ್ದೇಶಕರಿಗೆ ನಿರ್ಮಾಪಕರಿಗೆ ಹಾಗೂ ನಟನೆ ಮಾಡಿದ ಎಲ್ಲರಿಗೂ ಹೃತ್ಪೂರ್ವಕವಾದ ಧನ್ಯವಾದಗಳು

R.ಮುಕ್ತಾಮಣಿ. ಸಂಘಟನಾ ಕಾರ್ಯದರ್ಶಿ. ತಿಪಟೂರು ತಾಲೂಕು
ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಚಲನಚಿತ್ರ ಅತ್ಯುತ್ತಮ ಚಲನಚಿತ್ರವಾಗಿದ್ದು ಸಾವಿತ್ರಿಬಾಯಿ ಯವರು ಅಕ್ಷರ ಅಭ್ಯಾಸವನ್ನು ಕಲಿತು ಅವರು ಶಾಲೆಯನ್ನು ಪ್ರಾರಂಭಿಸಿ ಹೆಣ್ಣು ಮಕ್ಕಳಿಗೆ ಬೆಳಕಾಗಿ ಆಕೆ ಹೇಗೆ ಮಾದರಿಯಾದರು ಎಂಬುದನ್ನು ಮನಮುಟ್ಟುವಂತೆ ತಿಳಿಸಲಾಗಿದೆ. ಈ ಚಲನಚಿತ್ರವನ್ನು ಶಾಲಾ ಮಕ್ಕಳು ಸಹ ವೀಕ್ಷಿಸುವಂತೆ ಅವಕಾಶ ಒದಗಿ ಬರಲಿ.

Vijayalakshmi Teacher GHS SHIVANAGERE MADHUGIRI DISTRICT
I need to discussing about Savitri bai pule picture. It was excellent story. She met so much of risk in her life. But she didn’t think about it. Really she’s a good teacher and mother also.

ಭವ್ಯ ಎಂಟಿ,ಅಧ್ಯಕ್ಷರು
ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ. ತುರುವೇಕೆರೆ ತಾಲೂಕು ಘಟಕ, ತುಮಕೂರು ಜಿಲ್ಲೆ
ಸಾವಿತ್ರಿಬಾಯಿ ಪುಲೆ ರವರ ಕನ್ನಡ ಚಲನಚಿತ್ರ ಒಂದು ಅಭೂತಪೂರ್ವವಾದ ಚಲನಚಿತ್ರವಾಗಿದೆ, ಅದನ್ನ ತೆರೆಯ ಮೇಲೆ ತಂದಂತಹ ನಿರ್ದೇಶಕರಿಗೆ ಅನಂತ ಅನಂತ ಧನ್ಯವಾದಗಳು ಹಾಗು ಕಾದಂಬರಿ ಕಾರರಿಗೆ ಹಾಗೂ ತಾರಾ ಗಣಕ್ಕೆ ಕೋಟಿ ಕೋಟಿ ನಮಸ್ಕಾರಗಳು, ಅಂದಿನ ಕಾಲದ ಹೆಣ್ಣಿನ ಸುಖ ದುಃಖವನ್ನು ಎಳೆ ಎಳೆಯಾಗಿ ಚಿತ್ರಿಸಿರುವ ನಮ್ಮ ನಿರ್ದೇಶಕರಿಗೆ, ಚಿತ್ರತಂಡಕ್ಕೆ ಮತ್ತು ಪ್ರೊಡ್ಯೂಸರ್ ಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು, ಇಂತಹ ಒಂದು ಚಲನಚಿತ್ರವನ್ನು ತೆರೆಯ ಮೇಲೆ ತಂದಿರುವುದೇ ಒಂದು ದೊಡ್ಡ ಮತ್ತು ಗೌರವ ಪೂರ್ವಕವಾದ ವಿಷಯವಾಗಿದೆ. ಪ್ರತಿಯೊಂದು ಸೂಕ್ಷ್ಮ ಸಂಗತಿಗಳನ್ನು ತೆರೆಯ ಮೇಲೆ ತಂದಿರುವುದು, ಅಸಹಾಯಕ ಸಂದರ್ಭದಲ್ಲಿ ಸಾವಿತ್ರಿಯ ದಿಟ್ಟ ನಡೆ ಜ್ಯೋತಿಬಾ ರವರ ಸಹಕಾರ ಸಾಂಗತ್ಯ, ಗಂಡ ಹೆಂಡಿರ ಪವಿತ್ರ ಬಂಧನ, ಹೆಣ್ಣಿನ ಶೋಷಣೆ ಮೂಢನಂಬಿಕೆ, ಅವೆಲ್ಲವನ್ನು ತೊಡೆದು ಹಾಕುವಲ್ಲಿ ಸಾವಿತ್ರಿ ಮತ್ತು ಜ್ಯೋತಿಬಾ ರವರ ಗಟ್ಟಿ ನಿರ್ಧಾರ, ಕಥಾ ಎಣಿಕೆಯ ಸರಳತೆ, ಎಲ್ಲವೂ ತುಂಬಾ ಸುಂದರವಾಗಿ ಮೂಡಿ ಬಂದಿದೆ.

ಸ್ವಪ್ನ ಆರ್. ಎ. ಸಹ ಶಿಕ್ಷಕಿ
ಸ.ಕಿ. ಪ್ರಾ.ಶಾಲೆ ದಾಸಣ್ಣನಹಟ್ಟಿ
ಹಿರಿಯೂರು ತಾಲ್ಲೂಕು,ಚಿತ್ರದುರ್ಗ ಜಿಲ್ಲೆ
ಆಗಿನ ಕಾಲದಲ್ಲಿ ಶಿಕ್ಷಣ ಪಡೆಯುವ ಕಷ್ಟಗಳು ಹೇಗೆ ಎಂಬುದನ್ನು ಅದ್ರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ,ಸಮಾಜದ ಉದ್ದಾರಕ್ಕೆ ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ ಮಹಾತಾಯಿಗೆ ಶರಣು ಶರಣು ಅದೇ ರೀತಿ ಇದನ್ನು ಚಿತ್ರಮಂದಿರದಲ್ಲಿ ನೋಡಲು ಅವಕಾಶ ನೀಡಿದ ಹಾಗೂ ಚಿತ್ರವನ್ನು ಮಾಡಲು ವಿಶಾಲ ಮನಸ್ಸು ಮಾಡಿದ ನಿರ್ದೇಶಕರಿಗೂ, ನಿರ್ಮಾಪಕರಿಗೆ,ಚಿತ್ರಕ್ಕೆ ಕಾದಂಬರಿ ರೂಪುರೇಷೆ ಕೊಟ್ಟ ಸರಜು ಕಾಟ್ಕರ್ ಅವರಿಗೆ ಅನಂತ ಧನ್ಯವಾದಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಮಯದ ಚಿತ್ರ ಬರಲಿ ಎಂದು ನಿರೀಕ್ಷಿಸುವೆ.

ಸಾವಿತ್ರಿ ಬಾಯಿ ಫುಲೆ ಚಲನಚಿತ್ರವು ಉತ್ತಮವಾಗಿ ಮೂಡಿಬಂದಿದೆ… ಒಂದು ಹೆಣ್ಣಿನ ಅಸಹಾಯಕತೆ ದೌರ್ಬಲ್ಯದ ನಡುವೆಯೂ ಒಬ್ಬ ಹೆಣ್ಣು ಮಗಳಾಗಿ ಶಿಕ್ಷಣಕ್ಕೆ ನೀಡಿರುವ ಒತ್ತು ಅಮೂಲ್ಯವಾದುದು… ನಿರ್ದೇಶಕರಿಗೆ ಮೊದಲ ಧನ್ಯವಾದಗಳು. ಸರಜೂ ಕಾಟ್ಕರ್ ಅವರ ಆಧಾರಿತ ಸಿನಿಮಾವಾದರೂ ಕಥೆ ಚಿತ್ರಕಥೆ ತುಂಬಾ ಚೆನ್ನಾಗಿದೆ… ಅವರಿಗೂ ಧನ್ಯವಾದಗಳು., ಆಗಿನ ಕಾಲದಲ್ಲಿ ಮಹಿಳೆಯರು ಹೊರಗೆ ಬರುವುದು ಕಷ್ಟವಿತ್ತು ಅಂತ ಸಂದರ್ಭದಲ್ಲೂ ದಿಟ್ಟ ಹೆಜ್ಜೆ ಇಟ್ಟ ಸಾವಿತ್ರಿ ಬಾಯಿ ಫುಲೆ ಹಾಗೂ ಅವರಿಗೆ ಬೆನ್ನುಲಬಾಗಿ ಪ್ರತಿ ಹೆಜ್ಜೆಗೂ ನಿಂತ ಜ್ಯೋತಿಬಾ ಫುಲೆ ಅವರಿಗೂ ಧನ್ಯವಾದಗಳು…
LikeLike
ಸಾವಿತ್ರಿ ಬಾಯಿ ಫುಲೆ ಚಲನಚಿತ್ರವು ಉತ್ತಮವಾಗಿ ಮೂಡಿಬಂದಿದೆ… ಒಂದು ಹೆಣ್ಣಿನ ಅಸಹಾಯಕತೆ ದೌರ್ಬಲ್ಯದ ನಡುವೆಯೂ ಒಬ್ಬ ಹೆಣ್ಣು ಮಗಳಾಗಿ ಶಿಕ್ಷಣಕ್ಕೆ ನೀಡಿರುವ ಒತ್ತು ಅಮೂಲ್ಯವಾದುದು… ನಿರ್ದೇಶಕರಿಗೆ ಮೊದಲ ಧನ್ಯವಾದಗಳು. ಸರಜೂ ಕಾಟ್ಕರ್ ಅವರ ಆಧಾರಿತ ಸಿನಿಮಾವಾದರೂ ಕಥೆ ಚಿತ್ರಕಥೆ ತುಂಬಾ ಚೆನ್ನಾಗಿದೆ… ಅವರಿಗೂ ಧನ್ಯವಾದಗಳು., ಆಗಿನ ಕಾಲದಲ್ಲಿ ಮಹಿಳೆಯರು ಹೊರಗೆ ಬರುವುದು ಕಷ್ಟವಿತ್ತು ಅಂತ ಸಂದರ್ಭದಲ್ಲೂ ದಿಟ್ಟ ಹೆಜ್ಜೆ ಇಟ್ಟ ಸಾವಿತ್ರಿ ಬಾಯಿ ಫುಲೆ ಹಾಗೂ ಅವರಿಗೆ ಬೆನ್ನುಲಬಾಗಿ ಪ್ರತಿ ಹೆಜ್ಜೆಗೂ ನಿಂತ ಜ್ಯೋತಿಬಾ ಫುಲೆ ಅವರಿಗೂ ಧನ್ಯವಾದಗಳು…
LikeLike
Thanking you
LikeLike