ಶಿಕಾರಿಪುರ ಜು.07 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ.ರಾಜ್ಯಘಟಕ ಧಾರವಾಡ. ಜಿಲ್ಲಾ ಘಟಕ ಶಿವಮೊಗ್ಗ, ಶಿಕಾರಿಪುರ ತಾಲ್ಲೂಕು ಘಟಕದಿಂದ C&R ನಿಯಮ ತಿದ್ದುಪಡಿಮಾಡಿ ಪದವೀಧರ ಸೇವಾನಿರತ ಶಿಕ್ಷಕರಿಗೆ 6-8ನೇ ತರಗತಿ ಬೋದಿಸುವ ಶಿಕ್ಷಕರನ್ನಾಗಿ ಮಾಡಿ PST ಇಂದ GPT ವೃಂದಕ್ಕೆ ವಿಲೀನ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ.

1-7 ನೇ ತರಗತಿ ಬೋದಿಸುವ ಶಿಕ್ಷಕರನ್ನು 1-5 ನೇ ತರಗತಿಗೆ ಸೀಮಿತಗೊಳಿಸಿ ಹಿಂಬಡ್ತಿ ಮಾಡಿರುವುದು ಅವರ ವಿದ್ಯಾರ್ಹತೆಗೆ ಹಾಗೂ ಅವರ ಸುದೀರ್ಘ ಸೇವೆಗೆ ಮಾನ್ಯತೆ ಇಲ್ಲದಂತಾಗಿದೆ.ಇದರಿಂದ ರಾಜ್ಯದ ಎಲ್ಲಾ ಪದವೀಧರ ಸೇವಾನಿರತ ಶಿಕ್ಷಕರಿಗೆ , ಅನ್ಯಾಯವಾಗಿದೆ.ಅದಾಗ್ಯೂ ಇದುವರೆಗೆ 1-7 ನೇ ತರಗತಿವರೆಗೆ ಬೋದಿಸುತ್ತಿದ್ದೇವೆ, ಸಿ.ಅಂಡ್ ಆರ್.ತಿದ್ದುಪಡಿ ಮಾಡಿ ಶೀಘ್ರದಲ್ಲಿ ಪದವೀಧರ ಶಿಕ್ಷ ಶಿಕ್ಷಕಿಯರನ್ನು 6-8 ನೇ ತರಗತಿಯ GPT ವೃಂದಕ್ಕೆ ವಿಲೀನಮಾಡಬೇಕು,ಅವರು ಮಾಡಿರುವ ಸುದೀರ್ಘವಾದ ಸೇವೆಗೆ ಹಾಗೂ ಗಳಿಸಿರುವ ವಿದ್ಯಾರ್ಹತೆಗೆ ನ್ಯಾಯ ಒದಗಿಸಬೇಕು .ಇಲ್ಲವಾದರೆ 6ರಿಂದ 8ನೇ ತರಗತಿ ಬೋದನೆಯನ್ನು ಬಹಿಷ್ಕರಿಸುವುದಾಗಿ ತಾಲ್ಲೂಕಿನ ಅಧ್ಯಕ್ಷರು ಶ್ರೀಮತಿ ಲಕ್ಷ್ಮವ್ವ ಎಂ ಸುಣಗಾರರವರು ಮಾನ್ಯ ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾರಾಣಿ ಎಸ್ ವಿ. &ಎಲ್ಲಾ ಪದಾಧಿಕಾರಿಗಳು. ಹಾಜರಿದ್ದರು.
