ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ಶಿವಮೊಗ್ಗ ಜಿಲ್ಲಾ ಘಟಕ

ಶಿವಮೊಗ್ಗ-ಜು.03-ವೈದ್ಯೋ ನಾರಾಯಣ ಹರಿಃ ಎಂಬ ಮಾತಿದೆ, ವೈದ್ಯರ ಆರೈಕೆ, ಚಿಕಿತ್ಸೆಯ ಸರಿಯಾದ ಕ್ರಮದಿಂದ ಆರೋಗ್ಯ ಉತ್ತಮವಾಗಿಸುತ್ತಾರೆ.ಅವರೇ ದೇವರೆನಿಸುತ್ತಾರೆ. ಯಾವುದೇ ತಮ್ಮ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ ರೋಗಿಯ ಆರೈಕೆಗಾಗಿ ಹೆಚ್ಚು ಕಾಲ ವಿನಿಯೋಗಿಸುವ ವೈದ್ಯರುಗಳು ಸದಾ ದೇವತೆಗಳಿಗೆ ಸಮನಾಗಿರುತ್ತಾರೆ, ನಾವು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಆದರೆ ನಮ್ಮ ಆರೋಗ್ಯ ಉತ್ತಮಗೊಳಿಸಿ ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೈವಶಕ್ತಿ ಪಡೆದುಕೊಂಡು ರೋಗಿಯ ಕಣ್ಣೆದುರಿಗೆ ನಿಲ್ಲುವ ದೇವರಾಗುತ್ತಾರೆ.
ಅಂತಹ ವೈದ್ಯ ಸಮುದಾಯಕ್ಕೆ ಧನ್ಯವಾದ ಹೇಳುವ ಸುಸಂದರ್ಭದಲ್ಲಿ ಡಾಕ್ಟರ್ ಜೈ ಕುಮಾರ್ ಶೆಟ್ಟಿ,MBBS ,MD, ಮಕ್ಕಳ ತಜ್ಞರು ಸುಮಾರು 28 ವರ್ಷಗಳಿಂದ ರೋಗಿಗಳ ಆರೋಗ್ಯ ಉತ್ತಮವಾಗಿ ಸುವ ನಿಟ್ಟಿನಲ್ಲಿ ಇವರ ಪ್ರಿಯಾಂಕಾ ನರ್ಸಿಂಗ್ ಹೋಂ ಮತ್ತು ಸೃಷ್ಟಿ ಕ್ಲಿನಿಕ್ ನಲ್ಲಿ ಬಡವರಿಗೆಂದೇ ಉಚಿತ ತಪಾಸಣೆ ಮಾಡಿ ಬಡವರಿಗೆ ನೆರವಾಗುತ್ತಿರುವ ವೈದ್ಯರಿಗೆ ಒಂದು ವೈದ್ಯರ ದಿನಾಚರಣೆಯ ಸಲುವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಜಿಲ್ಲಾ ಘಟಕ ಅಧ್ಯಕ್ಷರು ರಾಧಾ ರವರು ಪ್ರಧಾನ ಕಾರ್ಯದರ್ಶಿಗಳು ಪುಷ್ಪ ನರೇ ಗೌಡರು ಹಾಗೂ ಕೋಶಾಧ್ಯಕ್ಷರು ಲಲಿತ ರವರು ಶಿವಮೊಗ್ಗ ತಾಲೂಕು ಘಟಕ ಅಧ್ಯಕ್ಷರು ಶಾಹಿದ್ ಬಾನು ಕೋಶಾಧ್ಯಕ್ಷರು ಲಕ್ಷ್ಮಿ ಎಸ್ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು


