ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ ಶಿಕ್ಷಕಿಯರ ಸಂಘ

ಧಾರವಾಡ ಜೂನ್ -12
ಕೊವಿಡ್ ಎರಡನೇ ಅಲೆ ಇಡೀ ರಾಜ್ಯದ ಜನ ಸಮುದಾಯವನ್ನೇ ತಲ್ಲಣಗೊಳಿಸಿದ್ದಲ್ಲದೇ ಕೊರೊನಾ ಸೋಂಕಿಗೆ ಸಿಕ್ಕಿ ಹಲವಾರು ಶಿಕ್ಷಕರ ಪ್ರಾಣ ಬಲಿಯಾಗಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಅವಧಿ ಜುಲೈ-1 ರಿಂದ ಪ್ರಾರಂಭವಾಗುತ್ತಿದ್ದು,ಶಿಕ್ಷಕರು ಹದಿನೈದು ದಿನ‌ ಮೊದಲೇ ಜೂನ್ -15 ಕ್ಕೆ ಪೂರ್ವ‌ಸಿದ್ದತೆಗಾಗಿ ಶಾಲೆಗೆ ಹೋಗಬೇಕೆಂದು ಇಲಾಖೆಯು ಆದೇಶ ಹೊರಡಿಸಿದೆ.ಇದರಿಂದ ಎಲ್ಲ ಶಿಕ್ಷಕರಿಗೂ ಸಮಸ್ಯೆ ಎದುರಾಗಿದೆ.
ಕೊವಿಡ್ ಲಾಕ್ ಡೌನ್ 11 ಜಿಲ್ಲೆಗಳಲ್ಲಿ ಮುಂದುವರೆದಿದ್ದು,ಉಳಿದ 20 ಜಿಲ್ಲೆಗಳಲ್ಲಿ ಸೆಮಿ ಲಾಕ್ಡೌನ್ ಮಾಡಲಾಗಿದೆ ಸರಿಯಷ್ಟೆ.ಆದರೆ
ಕೆ.ಎಸ್.ಆರ್.ಟಿ.ಸಿ.
ಬಸ್ ಸಂಚಾರ ರಾಜ್ಯದಾದ್ಯಂತ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಇಂತ ಪರಿಸ್ಥಿತಿಯಲ್ಲಿ ಸರ್ಕಾರಿ ಬಸ್ ನ್ನೇ ಸಂಪೂರ್ಣ ಅವಲಂಬಿಸಿಕೊಂಡು ಶಾಲೆಗೆ ಹೋಗಬೇಕಾದ ಶಿಕ್ಷಕರುಗಳಿಗೆ ಜೂನ್-15 ಕ್ಕೆ ಶಾಲೆಗೆ ತೆರಳಲು ಕಷ್ಟಸಾದ್ಯವಾಗಿದೆ.ಅದರಲ್ಲು ಮಹಿಳಾ ಶಿಕ್ಷಕಿಯರಿಗೆ ಶಾಲೆಗೆ ಹೋಗಲು ಹೆಚ್ಚು ತೊಂದರೆಯಾಗಿರುತ್ತದೆ. ಆದ್ದರಿಂದ ಘನ ಸರ್ಕಾರವು ಈ ಎಲ್ಲಾ ಪರಿಸ್ಥಿತಿಯನ್ನು ಮರುಪರಿಶೀಲಿಸಿ, ಎಲ್ಲಾ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ ಶಾಲೆ ಪ್ರಾರಂಭವಾಗುವ ಎರಡು ದಿನಗಳ ಮೊದಲು ಜೂನ್ 29 ಕ್ಕೆ ಶಾಲೆಗೆ ಹಾಜರಾಗಲು ಸೂಚಿಸಿ ಆದೇಶ ಮಾಡಬೇಕೆಂದು ಹಾಗೂ ಗರ್ಭಿಣಿ ಶಿಕ್ಷಕಿಯರಿಗೆ, ಒಂದು ವರ್ಷ ಮಗು ಹಾರೈಕೆ ಮಾಡುತ್ತಿರುವ ಶಿಕ್ಷಕಿಯರಿಗೆ,ವಿಕಲಚೇತನ ಶಿಕ್ಷಕಿಯರಿಗೆ ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಶಿಕ್ಷಕಿಯರಿಗೆ ಕೊವಿಡ್ ಅಲೆ ಸುಧಾರಣೆ ಆಗುವವರೆಗೆ ವರ್ಕ್ ಫ್ರಂ ಹೋಂ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಿ ಅನುಕೂಲ ಮಾಡಿಕೊಡಬೇಕೆಂದು ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಸುರೇಶ ಕುಮಾರ್.ಎಸ್ ರವರನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ರವರುಗಳು ಸಮಸ್ತ ಶಿಕ್ಷಕ,ಶಿಕ್ಷಕಿಯರ ಪರವಾಗಿ ಮನವಿಯನ್ನು ಮಾಡಿದ್ದಾರೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

2 thoughts on “ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ ಶಿಕ್ಷಕಿಯರ ಸಂಘ

Leave a comment