ಮಹಿಳೆ ಮತ್ತು ಕಾನೂನು- ವೆಬಿನಾರ್ ಯಶಸ್ವಿ

ವಿಜಯನಗರ ದಿನಾಂಕ:01-06-2021
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ)ಘಟಕ ವಿಜಯನಗರ ಜಿಲ್ಲೆ ಮತ್ತು ಹೊಸಪೇಟೆ ತಾಲೂಕು.ವತಿಯಿಂದ
“ಇಂದು ಕಾನೂನು ಮತ್ತು ಮಹಿಳೆ” ಎನ್ನುವ ಬಗ್ಗೆ ವೆಬಿನಾರ ಕಾಯ೯ಕ್ರಮ ಆಯೋಜನೆ ಮಾಡಲಾಗಿತ್ತು. ಶ್ರೀ ಮತಿ ಅರುಂಧತಿ ಜಿಲ್ಲಾ ಪ್ರಧಾನಕಾಯ೯ದಶಿ೯ ಇವರ ನಿರೂಪಣೆಯ ಮುಖಾಂತರ ಪ್ರಾರಂಭವಾಯಿತು. ಶ್ರೀ ಮತಿ ರೇಶ್ಮಾ ಜಿಲ್ಲಾ ಉಪಾಧ್ಯಕ್ಷೆ ಇವರಿಂದ ಪ್ರಾಥ೯ನೆ. ನಂತರ ಶ್ರೀ ಮತಿ ಉಮಾದೇವಿ ಜಿಲ್ಲಾ ಅಧ್ಯಕ್ಷೆ ಇವರಿಂದ ಸ್ವಾಗತ. ನಂತರ ರಾಜ್ಯಾಧ್ಯಕ್ಷರಾದ ಶ್ರೀ ಮತಿ ಲತಾಮೂಳ್ಳೂರ ಮೇಡಂ ಇವರು ಪ್ರಸ್ಥಾವಿಕ ನುಡಿಗಳನ್ನು ಹೇಳಿದರು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಮ್ಮ ಸಾವಿತ್ರಿಬಾಯಿ ಪುಲೆ ಸಂಘ ನಡೆದು ಬಂದ ದಾರಿ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದರು. ಸಂಘದ ಉದ್ದೇಶಗಳ ಬಗ್ಗೆ ಸಹ ತಿಳಿಸಿದರು.
ಶ್ರೀ ಮತಿ ಡಾ. ಉಷರಾಣಿ ಇವರು ವಕೀಲರಾದ ಶ್ರೀ ಮತಿ ಅಖಿಲಾ ಮೇಡಂ ಇವರ ಪರಿಚಯವನ್ನೂ ಮಾಡಿದರು .ನಂತರ ಅಖಿಲಾ ಮೇಡಂ ಇವರು ಮೊದಲು ಸಂವಿಧಾನಾತ್ಮಕ ವಾಗಿ ದೊರೆತಿರುವ ನಮಗೆ ಸಾಮಾಜಿಕ ನ್ಯಾಯ , ಆಥಿ೯ಕ ನ್ಯಾಯ, ರಾಜಕೀಯ ನ್ಯಾಯ ,ಹೀಗೆ ವಿಷಯ ವಿವರಣೆ ಮಾಡಿದರು. ಕಲಂ 14 ,15 , 21, & 51 A , ಒಬ್ಬ ಮಹಿಳೆ ಗೃಹಿಣಿಯಾಗಿ , ಉದ್ಯೋಗಿಯಾಗಿ ಕಾನೂನಾತ್ಮಕವಾಗಿಪಡೆಯುವ ಸೌಲಭ್ಯಗಳನ್ನು ತುಂಬಾ ಚೆನ್ನಾಗಿ ವಿವರಿಸಿದರು . ಕೆಲವು ವಿಷಯಗಳು ಶಾಲೆ ,ವಿಧ್ಯಾರ್ಥಿ ಗಳ ಬಗ್ಗೆ ಮತ್ತು ಮಕ್ಕಳ ಹಕ್ಕುಗಳು ,ಹಕ್ಕುಗಳ ಉಲ್ಲಂಗನೆಯ ಪರಿಣಾಮ , ಬಾಲಿಕಾ ಶಿಕ್ಷಣದ ಮಹತ್ವ , ತಂದೆ ತಾಯಿ ಗಳ ಪಾತ್ರ , ಮಹಿಳಾ ದೌಜ೯ನ್ಯ ವಿರೋಧಿ ಕಾನೂನುಗಳು , ಪೋಸ್ಕೋ ಕಾಯ್ದೆಯ ವ್ಯಾಪ್ತಿ , ಶಿಕ್ಷೆ , ಮಹಿಳೆಯ ನಿರಂತರ ಸಮಾಜದ ತಾರತಮ್ಯ ಭಾವನೆಯ ವಿರುದ್ಧ ದ ಹೋರಾಟ ಜೀವನ, ಶಿಕ್ಷಕರಾಗಿ ಹೆಣ್ಣು ಮಕ್ಕಳಿಗೆ ನಾವು ನೀಡುವ ಸವಾ೯ಂಗಿಣ ಅಭಿವೃದ್ಧಿಯ ಮಾಗ೯ದಶ೯ನ ಮಾಡಿದರು . ಉತ್ತಮವಾದ ಸಂವಾದ ನಡೆಯಿತು. ವಿಷಯ ವಿವರಣೆ ತುಂಬಾ ಚೆನ್ನಾಗಿತ್ತು. ಕೊನೆಯಲ್ಲಿ ನಮ್ಮ ತಾಲೂಕಿನ ಪ್ರಧಾನಕಾಯ೯ದಶಿ೯ಯವರು ವಂದನಾಪ೯ಣೆ ಮಾಡುವುದರ ಮೂಲಕ ಇಂದಿನ ವೆಬಿನಾರ್ ಕಾಯ೯ಕ್ರಮ ಮುಕ್ತಾಯ ಮಾಡಲಾಯಿತು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ವಿಜಯನಗರ ಜಿಲ್ಲೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

One thought on “ಮಹಿಳೆ ಮತ್ತು ಕಾನೂನು- ವೆಬಿನಾರ್ ಯಶಸ್ವಿ

Leave a reply to Swetha Cancel reply