ಮಧುಗಿರಿ/ಕೊರಟಗೆರೆ :
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಜಿಲ್ಲಾ ಘಟಕ ಮಧುಗಿರಿ ಮತ್ತು ತಾಲೂಕು ಘಟಕ ಕೊರಟಗೆರೆಯ ಸಂಯುಕ್ತ ಆಶ್ರಯದಲ್ಲಿ 05.12.2025 ರಂದು ಬೆಂಗಳೂರಿನ ಟ್ರಸ್ಟ್ ವೆಲ್ ಹಾಸ್ಪಿಟಲ್ ನಲ್ಲಿ ಶಿಕ್ಷಕರು ಮತ್ತು ಅವರ ಕುಟುಂಬದವರಿಗಾಗಿ ಹೃದಯದ ಸಂಪೂರ್ಣ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.


ಶಿಬಿರದಲ್ಲಿ ಕೆಳಗಿನ ಪರೀಕ್ಷೆಗಳು ನಡೆಸಲಾಯಿತು:
CBC
Serum Creatinine (ಮೂತ್ರಪಿಂಡ ಕಾರ್ಯ ಪರೀಕ್ಷೆ)
Lipid Profile
RBS
ECG
BP
2D ECO Screening
Cardiac Consultancy
ಅನೇಕ ಶಿಕ್ಷಕರು ಹಾಗೂ ಅವರ ಕುಟುಂಬದವರು ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ.



ಶಿಬಿರಕ್ಕೆ ಬಂದ ಭಾಗವಹಿಸುವವರಿಗಾಗಿ ಸಂಘದ ವತಿಯಿಂದ ತಿಂಡಿ, ಊಟ ಮತ್ತು ಬಸ್ಸು ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಸುಜಾತ ಮ್ಯಾಡಂ, ಕಾರ್ಯದರ್ಶಿ ಆಶಾ, ಮತ್ತು ಸಂಘದ ಪದಾಧಿಕಾರಿಗಳಾದ ರೂಪ, ಮಂಜುಳಾ, ನೇತ್ರಾವತಿ, ಪುಟ್ಟಮ್ಮ, ಶೈಲಜಾ, ಗೌರವ ಸಲಹೆಗಾರರಾದ ಸಾಯಿರಾಬಾನು, ಶ್ರೀಮತಿ ಸುಜಾತ, ಲಲಿತ ಅವರು ಹಾಜರಿದ್ದರು.
ವಿಭಿನ್ನ ಕಾರಣಗಳಿಂದ ಕಾರ್ಯಕ್ರಮಕ್ಕಾಗಮಿಸಲು ಸಾಧ್ಯವಾಗದಿದ್ದರೂ ಸದಾ ಸಂಘದ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ಮಾರ್ಗದರ್ಶನ ನೀಡುತ್ತಿರುವ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರಾಧ್ಯಕ್ಷರು ಡಾ. ಲತಾ ಎಸ್. ಮುಳ್ಳೂರ ಅವರಿಗೆ ಸಂಘದ ವತಿಯಿಂದ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ
ಈ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದಂತಹ ಶ್ರೀಯುತ ಟ್ರಸ್ಟ್ ವೆಲ್ ಹಾಸ್ಪಿಟಲ್ ನ ನವೀನ್ ಕುಮಾರ್ ರವರಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಹಾಗೂ
ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಪದಾಧಿಕಾರಿಗಳು, ಶಿಕ್ಷಕರು, ಬಂಧು–ಮಿತ್ರರಿಗೆ ಸಂಘವು ಧನ್ಯವಾದಗಳನ್ನು ತಿಳಿಸಿದೆ.


