ಫುಲೆ ಸಂಘದ ಶಿಕ್ಷಕಿಯರಿಂದ ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳ ಕೊಡುಗೆ.

ತುಮಕೂರು ಜೂ.21.ಇಂದು
ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿ ಮತ್ತು ಕರ್ನಾಟಕ ಸಾವಿತ್ರಿಬಾಯಿ‌ಫುಲೆ ಶಿಕ್ಷಕಿಯರ ಸಂಘ(ರಿ). ರಾಜ್ಯ ಘಟಕ ಧಾರವಾಡ,ತಾಲೂಕು ಘಟಕ ಗುಬ್ಬಿ ವತಿಯಿಂದ ತಾಲ್ಲೂಕಿನ ಶಿಕ್ಷಕರ ಜ್ಞಾನ ಬಲವರ್ಧನೆಗೆ ಪ್ರೋತ್ಸಾಹಿಸುವ ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೇಪಾಕ್ಷಪ್ಪ ಸರ್ , ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಶ್ರೀಯುತ ಮಧುಸೂಧನ್ ಸರ್ ಹಾಗೂ ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀಯುತ ಜಗದೀಶ್ ಸರ್ ಹಾಗೂ ಬಿ ಆರ್ ಪಿ .ಸಿ ಆರ್ ಪಿ ಗಳು ಹಾಜರಿದ್ದರು

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೇಪಾಕ್ಷಪ್ಪ ರವರು ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಸೂಕ್ತವಾದಂತಹ ಪುಸ್ತಕಗಳನ್ನ ಆಯ್ಕೆ ಮಾಡಿ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಕ್ಕಾಗಿ ಸಂಘಟನೆಯನ್ನು ಅಭಿನಂದಿಸಿದರು, ಈ ಒಂದು ಶಿಕ್ಷಕ ಸ್ನೇಹಿ ಗ್ರಂಥಾಲಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.  ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದಂತಹ ಶ್ರೀಯುತ ಮಧುಸೂದನ್ ಸರ್ ಅವರು ಸಾವಿತ್ರಿಬಾಯಿ ಪುಲೆ ಸಂಘದ ವತಿಯಿಂದ ಇದೇ ರೀತಿಯಲ್ಲಿ ಇನ್ನೂ ಹೆಚ್ಚಿನ ಸಂಘಟನಾತ್ಮಕ ಕೆಲಸಗಳು ನಡೆಯುತ್ತಿರಲಿ ಎಂದು ಆಶಿಸಿದರು ಹಾಗೂ ತಾಲೂಕಿನ ಅಕ್ಷರ ದಾಸೋಹ ನಿರ್ದೇಶಕರಾದಂತಹ ಶ್ರೀಯುತ ಜಗದೀಶ್ ಸರ್ ಅವರು ಮಾತನಾಡಿ ಸಂಘ ಅತ್ಯಂತ ಉತ್ಸುಕತೆಯಿಂದ ಎಲ್ಲಾ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತಿದೆ ಇದೇ ರೀತಿಯಾಗಿ ಮುಂದುವರೆಯಲಿ ಎಂದು ಹಾರೈಸಿದರು ಈ ಸುಸಂದರ್ಭದಲ್ಲಿ ಬಿ ಆರ್ ಪಿ ಸನ್ಮಿತ್ರರಾದಂತಹ ಶ್ರೀಮತಿ ರಾಜಲಕ್ಷ್ಮೀ ಮೇಡಂ ಹಾಗೂ ರೇಣುಕಾ ಪ್ರಸಾದ್ ಸರ್ ಮತ್ತು ತಾಲೂಕಿನ ಸಾವಿತ್ರಿಪಾಯಿ ಪುಲೆ ಸಂಘದ ಅಧ್ಯಕ್ಷರಾದಂತಹ ಶ್ರೀಮತಿ ಲಕ್ಷ್ಮಿ ಮೇಡಂ ಹಾಗೂ ಖಜಾಂಚಿಗಳಾದ ಶ್ರೀಮತಿ ಮಂಜುಳಾ ಮೇಡಂ ಹಾಗೂ ಪದಾಧಿಕಾರಿಗಳಾದಂತಹ ತಿಮ್ಮಮ್ಮ,ಪೂರ್ಣಿಮಾ, ರಾಜಮ್ಮ, ಪದ್ಮ ,ಜಯಮ್ಮ, ಚಂದ್ರಕಲಾ, ಸಿಂಧು ಹಾಜರಿದ್ದರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment