ಜಿಲ್ಲಾ ಮಟ್ಟದ ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರ(ಕಾನೂನು ಅರಿವು ಮತ್ತು ನೆರವು)

ಶಿರಾ.ಜ.23. ಮಧುಗಿರಿ ಶೈ ಜಿಲ್ಲೆಯ ಜಿಲ್ಲಾ ಮಟ್ಟದ ಮಾತೇ ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರವು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ-ಧಾರವಾಡ, ಜಿಲ್ಲಾಘಟಕ ಮಧುಗಿರಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ, ತುಮಕೂರು ಜಿಲ್ಲೆ ಸಹಯೋಗದಲ್ಲಿ ಇಂದು ದಿನಾಂಕ 23-01-2024 ಮಂಗಳವಾರ ಬೆ.10am ಕ್ಕೆ ಶಿರಾ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ

ಈ ಕಾರ್ಯಕ್ರಮವು ಡಾ. ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಮತಿ ನೂರುನ್ನೀಸ ರವರು ಉದ್ಘಾಟನೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ DDPI ರವರಾದ ಸನ್ಮಾನ್ಯ ಶ್ರೀ ಮಂಜುನಾಥ ಸರ್ ರವರು ಭಾಗವಹಿಸಲಿದ್ದಾರೆ
ಹಿರಿಯ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಮತಿ ನೂರುನ್ನೀಸ ಮೇಡಂ ರವರು ಕಾರ್ಯಾಗಾರದಲ್ಲಿ ಕಾನೂನು ಅರಿವು ಮೂಡಿಸಲಿದ್ದಾರೆ
ಗೌರವ ಅತಿಥಿಗಳಾಗಿ ಮಧುಗಿರಿ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ K.N ಹನುಮಂತರಾಯಪ್ಪ ಸರ್, ಶಿರಾ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ ಕೃಷ್ಣಪ್ಪ ಸರ್, ಕೊರಟಗೆರೆ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ ನಟರಾಜು ಸರ್, ಪಾವಗಡ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀಮತಿ ಇಂದ್ರಾಣಮ್ಮನವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ
ಅಂತೆಯೇ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕುಗಳ ನೌಕರರ ಮತ್ತು ಶಿಕ್ಷಕರ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಬಾಗಿಯಾಗಲಿದ್ದಾರೆ. ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲು, ಮಾತೇ ಸಾವಿತ್ರಿ ಬಾಯಿ ಫುಲೆರವರನ್ನು ಸ್ಮರಿಸಲು ಹಾಗೂ ಶೈಕ್ಷಣಿಕ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಲು ಕಾರ್ಯಕ್ರಮಕ್ಕೆ ಭಾಗವಹಿಸುವ ಶಿಕ್ಷಕಿಯರಿಗೆ ಸನ್ಮಾನ್ಯ ಜಿಲ್ಲಾ ಉಪನಿರ್ದೇಶಕರು OOD ಸೌಲಭ್ಯವನ್ನು ಒದಗಿಸಿದ್ದಾರೆ. ತಪ್ಪದೇ ಎಲ್ಲರು ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದೆ

ಸ್ಥಳ: ಅಂಬೇಡ್ಕರ್ ಭವನ, ಸಪ್ತಗಿರಿ ಟಾಕೀಸ್ ಮುಂಭಾಗ, ಅಂಬೇಡ್ಕರ್ ಭವನ,ಶಿರಾ
ದಿನಾಂಕ:23:01:2024ಮಂಗಳವಾರ ಸಮಯ:10:00am

ಇಂದ:

ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ ಜಿಲ್ಲಾಘಟಕ ಮಧುಗಿರಿ

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment