ಧಾರವಾಡ.ಜ.22 ಇಂದು ಧಾರವಾಡ ಶಹರದಲ್ಲಿನ ಡಾ.ಪಾಟೀಲ್ ಪುಟ್ಟಪ್ಪರವರ ಸಭಾಭವನದಲ್ಲಿ ನಡೆದ ಮಾತೇ ಸಾವಿತ್ರಿಬಾಯಿ ಫುಲೆರವರ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಸಮಾರಂಭವನ್ನು ಉದ್ಘಾಟನೆ ಮಾಡಿದ ವಿಧಾನಪರಿಷತ್ ಸಭಾಪತಿಗಳಾದ ಗೌರವಾನ್ವಿತ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ರವರು ಹಾಗೂ ಅವರ ಜೊತೆಯಾಗಿ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿರ್ಮಾಕರಾದ ಶ್ರೀ ಬಸವರಾಜ ಭೂತಾಳಿರವರು ಹಾಗೂ ವೇದಿಕೆಯ ಗಣ್ಯರೆಲ್ಲರೂ ಸಾಮೂಹಿಕವಾಗಿ ಸಂಘದ ಸಹಾಯವಾಣಿ ಮತ್ತು ವೆಬ್ಸೈಟ್ URLs ಬಿಡುಗಡೆ ಮಾಡಿದರು.

ಇದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಮತ್ತೊಂದು ಬೆಳವಣಿಗೆಯ ಹೆಜ್ಜೆಯಾಗಿದೆ.
ಇದರಿಂದ ರಾಷ್ಟ್ರದ ಮತ್ತು ರಾಜ್ಯದ ಪ್ರತೀ ಶಿಕ್ಷಕಿಯರಿಗೆ ಸಂಘದ ಚಟುವಟಿಕೆಗಳ ಮಾಹಿತಿ ವೆಬ್ಸೈಟ್ ನಲ್ಲಿ ಲಬ್ಯವಾಗಲಿದೆ.ಹಾಗೂ ಶಿಕ್ಷಕಿಯರ ಕುಂದುಕೊರತೆಗಳಿಗಾಗಿ ಸಹಾಯವಾಣಿಯನ್ನು ನಿಗದಿತ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ.


Helpline – 8904772928
Website URLs:- Phuleteachers. In
