
ಧಾರವಾಡ ಶಹರದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಶ್ರೀ ಫೀರೋಜ ಗುಡೆನಕಟ್ಟಿ ಸರ ನೇತೃತ್ವದಲ್ಲಿ ಹಾಗೂ ಶ್ರೀ M.R. ಕಬ್ಬೇರ ಸರ್ ನೇತ್ರತ್ವದ ಸಮಾನ ಮನಸ್ಕರ ತಂಡ
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರ ಮನೆಗೆ ತೆರಳಿ ಚುನಾವಣೆಯಲ್ಲಿ ಬಹಿರಂಗವಾಗಿ ಬೆಂಬಲಿಸಿದ ಅವರಿಗೆ ಮತ್ತು ಅವರ ಸಂಘಟನೆಯ ಬಳಗಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಬಳಗದ ಪರವಾಗಿ ಅವರನ್ನು ಸನ್ಮಾನಿಸಲು ಮುಂದಾದಾಗ ಚುನಾವಣೆ ಯಲ್ಲಿ ಶಿಕ್ಷಕರಿಗೆ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದರೆ ಅದುವೆ ನನಗೆ ನಿಮ್ಮಿಂದ ಸಿಕ್ಕಬಹುದಾದ ಬಹುದೊಡ್ಡ ಗೌರವ ಸನ್ಮಾನವಾಗುತ್ತದೆ. ನಿಮ್ಮಗಳ ಸಮಾನ ಮನಸ್ಕರ ತಂಡವು ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ಖಂಡಿತ ಈಡೇರುತ್ತವೆ ಎಂಬ ಭರವಸೆ ನನಗೆ ಇದೆ ಎಂದು ಡಾ.ಲತಾ.ಎಸ್.ಮುಳ್ಳೂರ ರವರು ಸನ್ಮಾನವನ್ನ ನಿರಾಕರಿಸಿ ,ಸನ್ಮಾನ ಮಾಡಲು ಬಂದಿದ್ದ ತಂಡದ ಎಲ್ಲರ ಗೌರವ ವಿಶ್ವಾಸದ ಮನಸುಗಳಿಗೆ ತಮ್ಮ ಪ್ರೀತಿಯ ಸಲಹೆಗಳನ್ನು ನೀಡಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಧನ್ಯವಾದಗಳನ್ನು ಅವರು ಸಮರ್ಪಿಸಿದ್ದಾರೆ.ಈ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ .ಶ್ರೀ M. R. ಕಬ್ಬೆರ.ಶ್ರೀಮತಿ ಸ್ನೇಹಾ.ಅರಮನಿ. ಶ್ರೀ. ಹರಳಯ್ಯ.ದೊಡ್ಡಮನಿ. ಶ್ರೀ ನೀಲಪ್ಪ. ಕಟ್ಟಿಮನಿ ಮೊದಲಾದವರು ಹಾಜರಿದ್ದರು.
