“ಪ್ರತಿಭಾನ್ವಿತ ಪ್ರತಿಭಾ ಅವರಿಗೊಲಿದ ಗೌರವ ಡಾಕ್ಟರೇಟ್”

ಪ್ರತಿಭಾ.ಆರ್. M.Sc., M.ed., M.Phil., KES, KSET, KAS ಇವರ ಶೈಕ್ಷಣಿಕ ಪದವಿಗಳನ್ನು ನೋಡಿದರೆ ಸಾಕು ಇವರೆಂತಾ ಸಾಧಕರಿರಬಹುದೆಂದು ತಿಳಿಯುತ್ತದೆ. ಇವರ ಸಾಧನೆಗೆ “ಏಶಿಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ” ದಿನಾಂಕ 25:02:2023 ರಂದು ಗೌರವ ಡಾಕ್ಟರೇಟ್ ನೀಡಿದೆ.

B.sc ಯಲ್ಲಿ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಟಿ.ಎನ್. ಚತುರ್ವೇದಿ ಅವರಿಂದ ಎರಡು ಬಂಗಾರದ ಪದಕ ಗಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
M.Sc. (ಪ್ರಾಣಿಶಾಸ್ತ್ರ) ಯಲ್ಲಿ ಪ್ರಥಮ RANK ಪಡೆದಿರುತ್ತಾರೆ.

ಇವರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ,
ಮೊದಲ ವೃತ್ತಿ ಬದುಕನ್ನು ಚಿತ್ರದುರ್ಗದಲ್ಲಿ ಆರಂಭಿಸುತ್ತಾರೆ. ಮುಂದೆ ಪ್ರೌಢ ಶಾಲಾ ಶಿಕ್ಷಕಿಯಾಗಿ ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ ಕಾಯಕ (ವಿಜ್ಞಾನ ಬೋಧಕರಾಗಿ). ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ಬೌದ್ದಿಕ ಮಟ್ಟ ಹೆಚ್ಚಿಸಿ, ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿಸಿ, ಪ್ರಾಯೋಗಿಕ ಅನ್ವಯಿಕ ವಿಜ್ಞಾನಕ್ಕೆ ಒತ್ತು ನೀಡಿ, ಓದಿನಲ್ಲಿ ಮಕ್ಕಳನ್ನ ತೊಡಗುವಂತೆ ಪ್ರೇರಣೆ ನೀಡಿ SSLC ಫಲಿತಾಂಶದಲ್ಲಿ ಗಣನೀಯ ಹೆಚ್ಚಳ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಮುಂದೆ KES ಆಗಿ ತುಮಕೂರಿನ ಶಿರಾ ತಾಲೂಕಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಆಯ್ಕೆ. ಅಲ್ಲಿಯೂ ವಿದ್ಯಾರ್ಥಿಗಳಿಗೆ ಮೆಚ್ಚಿನ ಉಪನ್ಯಾಸಕಿಯಾಗಿ ಭವಿಷ್ಯದ ಬಾವಿ ಶಿಕ್ಷಕರನ್ನು ರೂಪುಗೊಳಿಸಲು ಕಾರ್ಯ ನಿರ್ವಹಿಸಿದ್ದಾರೆ.

ಮುಂದೆ ತವರು ಜಿಲ್ಲೆಯಾದ ತುಮಕೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ,ವಿಜ್ಞಾನ ವಿಷಯ ಪರಿವೀಕ್ಷಕರಾಗಿ (subject Inspector) ನೇಮಕವಾಗಿ, ಜಿಲ್ಲೆಯಾದ್ಯಾಂತ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಬೋಧನಾ ಗುಣಮಟ್ಟ ಹೆಚ್ಚಿಸಿದ್ದಲ್ಲದೆ, ಅಲ್ಲಿನ ಕಲಿಕಾ ಕುಂದು ಕೊರತೆಗಳನ್ನ ನಿವಾರಿಸಿ, ಮಕ್ಕಳಲ್ಲಿ ಅಡಗಿದ್ದ ಜ್ಞಾನವನ್ನು ಹೊರ ತೆಗೆಯಲು ಶ್ರಮಿಸಿದ್ದಾರೆ. ಜಿಲ್ಲೆಯ SSLC ಫಲಿತಾಂಶ ಉತ್ತಮಪಡಿಸಲು ಶ್ರಮಿಸಿದ್ದಾರೆ‌. ತುಮಕೂರಿನಲ್ಲಿ ಇಸ್ರೋದ‌‌ ಬಾಹ್ಯಾಕಾಶ ಸಪ್ತಾಹವನ್ನು ಇವರು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ಇಸ್ರೋಗೂ ಕರೆದೊಯ್ದು ವಿದ್ಯಾರ್ಥಿಗಳ ಜ್ಞಾನ ಕ್ಷಿತಿಜ ವಿಸ್ತರಿಸಲು ಪರಿಶ್ರಮಿಸಿರುತ್ತಾರೆ. ಎಂದೂ ಶಿಕ್ಷಕರೊಂದಿಗೆ ಅಧಿಕಾರಿಯಾಗಿ ದರ್ಪ ತೋರದೆ, ಸ್ನೇಹಭಾವದಿಂದ ರಚನಾತ್ಮಕ, ಗುಣಾತ್ಮಕ ಸಲಹೆಗಳನ್ನು ನೀಡಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಶ್ರಮಿಸಿರುತ್ತಾರೆ.

ಇವರು ಬಹುಮುಖ ಪ್ರತಿಭೆಯಾಗಿದ್ದು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾ ಉತ್ತಮ ಆದರ್ಶಗಳನ್ನು ಹೊಂದಿರುತ್ತಾರೆ. ಉತ್ತಮ ವಾಗ್ಮಿಗಳಾಗಿರುವ ಇವರು ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಉಪನ್ಯಾಸಗಳನ್ನು ನೀಡಿರುತ್ತಾರೆ. ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ನೀಡಿರುತ್ತಾರೆ.

ಈಗ ಪ್ರಸ್ತುತ ಅವರು KAS ಆಗಿದ್ದು, ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ..

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿರುವ ಇವರು ಸಾರ್ವಜನಿಕ ಸೇವೆಯ ಕ್ಷೇತ್ರದಲ್ಲಿಯೂ ಗುಣಾತ್ಮಕ ಸೇವೆ ನೀಡಿ ಜನರ ಕಣ್ಣೀರು ಒರೆಸುವಂತಹ ದಕ್ಷ ಅಧಿಕಾರಿಯಾಗುವ ಕನಸನ್ನು ಹೊಂದಿರುತ್ತಾರೆ.

ಕುಟುಂಬದ ಹಿನ್ನಲೆ:
ರಾಮಚಂದ್ರಪ್ಪ ಸಾವಿತ್ರಮ್ಮ ದಂಪತಿಗಳ ಪುತ್ರಿ. ತಂದೆ ನಿವೃತ್ತ ಇಂಜಿನಿಯರ್ ತಾಯಿ ಗೃಹಿಣಿ. ಇವರ ಪತಿ ಶ್ರೀ ಪರಮೇಶ.ಜೆ.ಎಲ್. ಮೂಲತಃ ಹಾಸನ ಜಿಲ್ಲೆಯ ಜಾವಗಲ್ ನವರು, ಇವರು ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕರು, ಖ್ಯಾತ ಮಾನವತವಾದಿಗಳು ಸಮಾಜ ಮುಖಿ ಜೀವಿಗಳು, ಅವರ ಶ್ರೀಮತಿ ಉನ್ನತ ಹುದ್ದೇಗೇರಬೇಕೆಂಬುದು ಇವರ ಹಿರಿದಾದ ಆಸೆ, ಪತಿಯ ಆಸೆಯಂತೆ ಒಂದೊಂದೆ ಮೆಟ್ಟಿಲು ಹತ್ತುತ್ತಾ ಇವತ್ತು ತಹಶಿಲ್ದಾರ ಆಗಿದ್ದಾರೆ ಶ್ರೀಮತಿ ಪ್ರತಿಭಾ ಅವರು.
ಪ್ರತಿಭಾ ಅವರೇ ಹೇಳುವಂತೆ, ಪತಿಯ ಒತ್ತಾಸೆಯಿಂದಲೇ ಇಂದು ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಜೊತೆಗೆ ಇವರ ಮಡಲಿಗೊಂದು ಕರುಳಿನ ಕುಡಿ, ರೋಹಿತ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇವರ ತಂದೆಯವರು ವೃತ್ತಿ ಜೀವನದುದ್ದಕ್ಕೂ ಆದರ್ಶಗಳನ್ನು ಇಟ್ಟುಕೊಂಡು ಬದುಕಿದವರು‌ ಈಗಲೂ ಅದೇ ನಡೆ ನುಡಿ. ತಾಯಿ ಸಾವಿತ್ರಮ್ಮ ಕೂಡ ಸದ್ಗೃಹಿಣಿ, ಮಗಳ ಸಾಧನೆಗೆ ಸದಾ ಸಾತ್ ನೀಡಿದವರು. ಹೀಗೆ ಹತ್ತು ಹಲವಾರು ಪುರಸ್ಕಾರಗಳು ಇವರ ಅಮೋಘವಾದ ಸೇವೆಯನ್ನು ಮೆಚ್ಚಿ ಇವರನ್ನ ಹುಡುಕಿಕೊಂಡು ಬರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment