ಕುಣಿಗಲ್ ಜ.29.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ಕುಣಿಗಲ್ ವತಿಯಿಂದ ದಿನಾಂಕ 27.01.2023ರ ಸಂಜೆ 4 ಗಂಟೆಗೆ ಗರ್ಲ್ಸ್ ಹೈ ಸ್ಕೂಲ್,ದೊಡ್ಡಪೇಟೆ, ಕುಣಿಗಲ್ ಇಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಮತ್ತು ಹೋಬಳಿವಾರು ಹಿರಿಯ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಗೀತಾಂಜಲಿ ಮೇಡಂರವರ ಅಧ್ಯಕ್ಷತೆಯಲ್ಲಿ ಮತ್ತು ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಬಹಳ ಅದ್ದೂರಿಯಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪಿ.ಎಸ್ ಅನುಸೂಯಾದೇವಿ ರವರು, ಕುಣಿಗಲ್ ತಾಲೂಕಿನ ಬಿ.ಇ.ಒ, ಬಿ. ಆರ್. ಸಿ, ಇ. ಸಿ.ಒ ರವರು, ಹಾಗೂ ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಕಾರ್ಯ ಚಟುವಟಿಕೆಗಳನ್ನು ಪ್ರಶಂಸಿಸಿ, ಮುಂದೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಹೋಬಳಿವಾರು ಹಿರಿಯ ಶಿಕ್ಷಕಿಯರ ಉತ್ತಮ ಸೇವೆಗಳನ್ನು ಗುರ್ತಿಸಿ, ಗೌರವ ಸಮರ್ಪಣೆ ಮಾಡಿ ಸನ್ಮಾನ ಮಾಡಲಾಯಿತು. ಕುಣಿಗಲ್ ತಾಲೂಕಿನ ಈ ಕಾರ್ಯಕ್ರಮವು ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಮಾದರಿಯಾಗಿದ್ದು ಕಾರ್ಯಕ್ರಮ ಅತ್ಯದ್ಭುತ ಯಶಸ್ವಿಯನ್ನು ಕಂಡಿತು.
