
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ತುರುವೇಕೆರೆ ವತಿಯಿಂದ ದಿನಾಂಕ 28.01.2023ರ ಮದ್ಯಾಹ್ನ 12.30 ಕ್ಕೆ ಕನ್ನಡ ಭವನ, ತುರುವೇಕೆರೆ ಇಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ, ಅಕ್ಷರದವ್ವ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಅಧ್ಯಕ್ಷರಾಗಿ ಶ್ರೀಮತಿ ಎಂ. ಟಿ ಭವ್ಯ ಮೇಡಂರವರ ಅಧ್ಯಕ್ಷತೆಯಲ್ಲಿ ಮತ್ತು ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಬಹಳ ಅದ್ದೂರಿಯಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರಸ್ತುತ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪಿ.ಎಸ್ ಅನುಸೂಯಾದೇವಿ ರವರು, ತುರುವೇಕೆರೆ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಮತಿ ಜೆ.ಎಚ್ ವೀಣಾ ಮೇಡಂ, ಜಿ.ಹೆಚ್. ಎಸ್ ದೊಡ್ಡಗೊರಘಟ್ಟದ ಮುಖ್ಯ ಶಿಕ್ಷಕರಾದ ಶ್ರೀಮತಿ ಸವಿತ ಮೇಡಂ,ಜಿ. ಹೆಚ್. ಎಸ್. ಹುಲಿ ಕೆರೆಯಮುಖ್ಯ ಶಿಕ್ಷಕರಾದ ಇಂದ್ರಾಣಿ ಮೇಡಂ, ಕಾರ್ಯಕ್ರಮದ ಉಪನ್ಯಾಸಕರಾಗಿ ಸ್ವಾಮಿ ವಿವೇಕಾನಂದ ಕಾಲೇಜಿನ ಶ್ರೀಮತಿ ರೂಪಶ್ರೀ ಮೇಡಂ, ತುಮಕೂರು ಜಿಲ್ಲಾ ಕಾರ್ಯದರ್ಶಿಗಳಾದ ಟಿ. ಎನ್ ಪ್ರವೀಣ ಕುಮಾರಿ ಮೇಡಂ, ಕುಣಿಗಲ್ ತಾಲೂಕಿನ pst ಮುಖ್ಯಸ್ತರಾದ ಶ್ರೀಮತಿ ಡಿ.ಜಿ ಗಂಗಮ್ಮ ಮೇಡಂ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಎಸ್ ವಾಣಿ ಮೇಡಂ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ,ಮುಂದೆಯು ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಮೊದಲಿಗೆ ಹೋಬಳಿವಾರು ಆಯ್ದ ಶಿಕ್ಷಕಿಯರುಗಳಿಗೆ “ಅಕ್ಷರದವ್ವ ” ಪ್ರಶಸ್ತಿ ಪ್ರಧಾನ ಮಾಡಲಾಯ್ತು.

ತದನಂತರದಲ್ಲಿ ಉಪನ್ಯಾಸಕರು ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಮತ್ತು ಮಹಿಳಾ ಸಬಲೀಕರಣಕ್ಕೆ ಒಂದಷ್ಟು ನಿದರ್ಶನಗಳನ್ನು ನೀಡಿ ಉಪನ್ಯಾಸ ನೀಡಿದರು. ತದ ನಂತರದಲ್ಲಿ ನಿವೃತ್ತ ಶಿಕ್ಷಕಿಯರುಗಳಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಮರ್ಪಣೆ ಕಾರ್ಯಕ್ರಮವು ನೆರವೇರಿತು.ಒಟ್ಟಾರೆ ತುರುವೇಕೆರೆ ತಾಲೂಕಿನ ಈವಿಶೇಷ ಕಾರ್ಯಕ್ರಮವು ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಮಾದರಿಯಾಗಿದ್ದು ಕಾರ್ಯಕ್ರಮವು ಎಲ್ಲರ ಮನಸೊರೆ ಗೊಂಡು KPS ದಂಡಿನಶಿವರದ ಮುಖ್ಯ ಶಿಕ್ಷಕಿಯರಾದ ಶ್ರೀಮತಿ M.Kಸುಶೀಲ ಮೇಡಂ ರವರು ಜಿಲ್ಲಾ ಅಧ್ಯಕ್ಷರ ಮಾತುಗಳಿಗೆ ಪ್ರಭಾವಿತರಾಗಿ ಸಾವಿತ್ರಿಬಾಯಿ ಫುಲೆ ಸಂಘ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಆರ್ಥಿಕ ಕೊರತೆಯನ್ನು ಗಮನಿಸಿ 10,000₹ ಗಳ ಕಿರುಕಾಣಿಕೆಯನ್ನು ಸೋಮವಾರ ಕೊಡುವುದಾಗಿ ತಿಳಿಸಿದರ ಮೂಲಕ ಅತ್ಯದ್ಭುತ ಯಶಸ್ವಿಯನ್ನು ಕಂಡಿತು. ಇಂತಹ ಅತ್ಯದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದ ತುರುವೇಕೆರೆ ತಾಲೂಕಿನ ಅಧ್ಯಕ್ಷರು &ಎಲ್ಲ ಪದಾಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು.
