ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ
ತಾಲ್ಲೂಕು ಘಟಕ- ಪಿರಿಯಾಪಟ್ಟಣ
ಕಳೆದ ಎರಡು ದಿನಗಳ ಹಿಂದೆ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮೆದುಳಿಗೆ ಪೆಟ್ಟು ಬಿದ್ದು ನಿಷ್ಕ್ರಿಯವಾದ ಕಾರಣದಿಂದ ಮೃತಪಟ್ಟ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಅವರ ಅಕ್ಕನ ಮಗನಾದ ಕುಮಾರ ಲೋಹಿತ (29) ರವರ ದೇಹದ ಅಂಗಾಂಗಗಳಾದ ಹೃದಯ,ಶ್ವಾಸಕೋಶ,ಲಿವರ್,ಕಿಡ್ನಿ, ಸ್ಪೈನಲ್ ಕಾರ್ಡ್ ದಾನ ಮಾಡಿಸುವ ಮೂಲಕ ನಾಡಿಗೇ ಮಾದರಿಯಾಗಿದ್ದಾರೆ.


ಪಿರಿಯಾ ಪಟ್ಟಣ ತಾಲ್ಲೂಕಿನ ಚಿಟ್ಟೇನಹಳ್ಳಿ ಗ್ರಾಮದ ವಾಸಿಯಾಗಿದ್ದ ಮೃತರು ತಾಲ್ಲೂಕಿನ ಅಧ್ಯಕ್ಷರಾದ ಗಾಯತ್ರಿರವರ ಅಕ್ಕನಾದ ಶ್ರೀಮತಿ ಸುಮತಿ ರವರ ಪುತ್ರರಾಗಿದ್ದು, ತನ್ನ ಅಂಗಾಂಗಳ ದಾನದಿಂದ ಅಂಗ ಪಡೆಯುವವರ ಜೀವನಕ್ಕೆ ಬೆಳಕಾಗಿದ್ದಾರೆ.ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಅಂಗಾಂಗಗಳನ್ನು ಪಡೆದು ಕೊಳ್ಳುವ ಕಾರ್ಯ ನಡೆಯುತ್ತಲಿದ್ದು,ನಾಳೆ ಮೃತರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ..ಮರೆಯಲಾಗದ ಮಾಣಿಕ್ಯ ಲೋಹಿತ್ ರವರ ಆತ್ಮಕೆ ಚಿರಶಾಂತಿ ಸಿಗಲಿ.ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ತಾಲ್ಲೂಕಿನ ಬಂಧುಗಳು, ಮೈಸೂರು ಹಾಗೂ ಇತರೆ ಜಿಲ್ಲೆಗಳ ಬಂದು ಮಿತ್ರರು ಪ್ರಾರ್ಥಿಸಿದ್ದಾರೆ.
