ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ-ಧಾರವಾಡ ಜಿಲ್ಲಾಘಟಕ- ತುಮಕೂರು


ದಿನಾಂಕ 31.7. 2022 ರ ಭಾನುವಾರ ಬೆಳಗ್ಗೆ 8.30 ಗಂಟೆಗೆ ತುಮಕೂರು ನಗರದ ಎಂಜಿ ರಸ್ತೆಯಲ್ಲಿರುವ ಶ್ರೀಕೃಷ್ಣ ಚಿತ್ರಮಂದಿರದಲ್ಲಿ” ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ,ಮಾತೆ ಸಾವಿತ್ರಿಬಾಯಿ ಫುಲೆಯವರ ಜೀವನಾಧರಿತ “ಸಾವಿತ್ರಿಬಾಯಿ ಫುಲೆ” ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಶ್ರೀ ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್ ರವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿರುತ್ತದೆ.ಸ್ವತಂತ್ರಪೂರ್ವದಲ್ಲಿ ಬ್ರಿಟಿಷ್ ಕಾಲದಲ್ಲಿದ್ದ ಮಹಿಳೆಯರ ಶೋಷಣೆಯ ಸ್ಥಿತಿಗತಿಗಳನ್ನ ಬಿಂಬಿಸುವಂತ,ಶೋಷಿತ,ಹಿಂದುಳಿದ ಸಮಾಜದ ದನಿಯಾಗಿದ್ದ ಮಾತೇ ಸಾವಿತ್ರಿಬಾಯಿ ಫುಲೆಯವರ ಸಮಗ್ರ ಜೀವನ ಚರಿತ್ರೆಯನ್ನು ಎಳೆಎಳೆಯಾಗಿ ಚಿತ್ರಿಸಿರುವ ಈ ಚಲನಚಿತ್ರ ಇದಾಗಿದ್ದು ಪ್ರತಿ ಮಹಿಳೆಯರು ನೋಡಲೇಬೇಕಾದ ಚಲನಚಿತ್ರ ವಾಗಿದೆ.ಮಾತೆಯ ಪಾತ್ರದಲ್ಲಿ ಪ್ರಸಿದ್ಧ ನಟಿ,ರಾಷ್ಟ್ರಪ್ರಶಸ್ತಿ ಪುರಸ್ಕೃತ ರಾದ ತಾರಾ ಅನುರಾಧರವರು , ಹಾಗೂ ಜ್ಯೋತಿಬಾ ಫುಲೆಯವರ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ರವರ ನಟಿಸಿದ್ದಾರೆ. ಪ್ರಸಿದ್ಧ ಪತ್ರಕರ್ತರು, ಸಾಹಿತಿಗಳಾದ,ಡಾ.ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು,ವಿಶಾಲ್ ರಾಜ್ ರವರ ಅಮೋಘ ನಿರ್ದೇಶನದಲ್ಲಿ ಬಸವರಾಜ ಬೂತಾಳಿ ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.,ಸಾಮಾಜಿಕ, ಶೈಕ್ಷಣಿಕಸಾಹಿತ್ಯಿಕ, ಐತಿಹಾಸಿಕ,ವಿಚಾರವಂತರು ಎಲ್ಲರೂ ಈ ಚಲನಚಿತ್ರವನ್ನು ತಪ್ಪದೇ ವೀಕ್ಷಿಸಲು ಈ ಮೂಲಕ ಕೋರಲಾಗಿದೆ.


ಇಂದ:
ಶ್ರೀಮತಿ ಪಿ.ಎಸ್ ಅನುಸೂಯಾದೇವಿ,ಅಧ್ಯಕ್ಷರು. ಹಾಗೂ ರಾಜ್ಯ ಉಪಾಧ್ಯಕ್ಷರು
ಶ್ರೀಮತಿ ಪ್ರವೀಣಕುಮಾರಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು
(ಸಂಘದ ಎಲ್ಲಾ ಜಿಲ್ಲಾ ಪದಾಧಿಕಾರಿಗಳ ಪರವಾಗಿ)
