ವೈದ್ಯರಿಗೆ ಸನ್ಮಾನಿಸಿ ವೈದ್ಯರ ದಿನಾಚರಣೆ ಮಾಡಿದ ಶಿಕ್ಷಕಿಯರ ಸಂಘ

ವೈದ್ಯ ನಾರಾಯಣೋ ಹರಿ,ವೈದ್ಯರ ದಿನಾಚರಣೆಯ ಪ್ರಯುಕ್ತ ದಿ‌ನಾಂಕ 02-07-22 ಶನಿವಾರದಂದು ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಾಸಿಕ ಸಭೆಯನ್ನು ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾಘಟಕ ರಾಮನಗರ ವತಿಯಿಂದ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ/ಜಮೀಲರವರು “ಆರೋಗ್ಯ” ದ ಬಗ್ಗೆ ಅತ್ಯುತ್ತಮ ವಾದ 4 ಟಿಪ್ಸ್ ತಿಳಿಸಿದರು.ಹಾಗೂ ದಿನಚರಿಯ ಆಹಾರ ಕ್ರಮಹೇಗಿರಬೇಕೆಂಬ ಬಗ್ಗೆಅತ್ಯಂತ ಸವಿಸ್ತಾರವಾಗಿ ತಿಳಿಸಿದರು.ವೈದ್ಯ ದಂಪತಿಗಳಾದ ಡಾ| ಮುಜಾಹಿದುಲ್ಲಾ ಶರೀಫ್ ಹಾಗೂ ಡಾ /ಸಯ್ಯಿದಾ ಬಾನು “ಆರೋಗ್ಯವೇ ಭಾಗ್ಯ” ಇಂದಿನ ಒತ್ತಡಸಹಿತ ಜೀವನದಲ್ಲಿ ನಾವು ಹೇಗೆ ಒತ್ತಡ ಮುಕ್ತರಾಗಿ ಆರೋಗ್ಯ ಕಾಪಾಡಿಕೊಳ್ಳಬಹುದೆಂಬುದರ ಬಗ್ಗೆ ಬಹಳ ಸರಳವಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಡಾ.ರತ್ನಮ್ಮರೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು , ಇದೇ ಸಂದರ್ಭದಲ್ಲಿ ಜುಲೈ31 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ದವಾಗಿರುವ ಮಾತೆ ಸಾವಿತ್ರಿ ಫುಲೆಯ ಚಿತ್ರದ ಟಿಕೆಟ್ ಗಳನ್ನು ಅಧ್ಯಕ್ಷರು, ಕಾರ್ಯದರ್ಶಿ ಗಳಿಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಪ್ರತಿಯೂಬ್ಬ ಪದಾದಿಕಾರಿಗಳಿಗೆ ಹಾಗೂ ವೈದ್ಯರಿಗೆ ಹೃದಯ ಸ್ಪರ್ಶಿ ಅಭಿನಂದನೆಗಳನ್ನು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ. ನಮ್ಮ ಸಂಘ ನಮ್ಮ ಹೆಮ್ಮೆ

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment