
ಸುಜಾತ ಎಸ್ ಹೇಮಂತ್ , ಉಪಾಧ್ಯಕ್ಷ ರು, ಸಾವಿತ್ರಿಬಾಯಿ ಫುಲೆ ಸಂಘ, ಶಿವಮೊಗ್ಗ.ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವಾನಿಯ ಪ್ರೌಢಶಾಲಾ ವಿಭಾಗದಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ “ಅನುಭಾವ” ಎಂಬ ಶೀರ್ಷಿಕೆಯ ಕವನಸಂಕಲನವನ್ನು ದಿನಾಂಕ26/06/22 ರ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಮಾನ್ಯ ಶ್ರೀಯುತ ಆರಗ ಜ್ಞಾನೇಂದ್ರ ರವರು ಗೃಹ ಸಚಿವರು ಕರ್ನಾಟಕ ಸರ್ಕಾರ ಇವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು. ಹಾಗೂ ಅನುಭಾವ ಕೃತಿಗೆ ಶುಭ ಹಾರೈಸಿ ಮಾತನಾಡಿದರು. ಶ್ರೀಯುತ ಹರೀಶ್ ಕೆ ಎಸ್ ಹಿರಿಯ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವಾನಿ ಇವರು ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ ಪ್ರೌಢಶಾಲಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು, ಎಸ್ ಡಿ ಎಂ ಸಿ ಯು ಸರ್ವ ಸದಸ್ಯರು, ಗ್ರಾಮಪಂಚಾಯತಿಯ ಸರ್ವ ಸದಸ್ಯರು, ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು ಪೋಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


