ಧನ ಸಹಾಯ ಮಾಡಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ- ದಿನಾಂಕ 19:11:2021 ರಂದು ಸಾಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಮ್ರೀನ್ ಮತ್ತು ಆಫ್ರೀನ್ ಸಹೋದರಿಯರು ಗಾಯಗೊಂಡಿದ್ದು ಆಫ್ರೀನ್ ಕೋಮಾದಲ್ಲಿ ಇರುತ್ತಾರೆ ಇವರಿಗೆ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೇಳಲಾಗಿತ್ತು,

ಈ ಸುದ್ದಿ ತಿಳಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ,ತಾಲೂಕು ಘಟಕ- ಶಿವಮೊಗ್ಗ ವತಿಯಿಂದ ಸ್ವಯಂಪ್ರೇರಿತ ಧನ ಸಹಾಯ ಮಾಡಲು ಸಂಘದ ಶಿಕ್ಷಕಿಯರಿಗೆ ಪ್ರಕಟಣೆ ಮಾಡಿ ಸ್ವಯಂ ಪ್ರೇರಣೆಯಿಂದ ಸಂಗ್ರಹವಾದ ಹಣವನ್ನು ಕೋಮ ತಲುಪಿರುವ ಗಾಯಾಳುವಿನ ತಂದೆ ತಾಯಿಗೆ ವಿತರಿಸಿ,ಸಾಂತ್ವನ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಿವಮೊಗ್ಗ ತಾಲ್ಲೂಕಿನ ಅಧ್ಯಕ್ಷರು ಶ್ರೀಮತಿ ಶಾಹೀನ್ ಬಾನು ರವರು ಇದರ ಉಸ್ತುವಾರಿಯನ್ನು ವಹಿಸಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ, ಇಂತಹ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಮಾಡಲು ಈ ಒಂದು ಸಂಘವನ್ನು ರಾಜ್ಯದ ಪ್ರತೀ ಜಿಲ್ಲೆಯಲ್ಲೂ,ತಾಲ್ಲೂಕುಗಳಲ್ಲಿಯೂ ಸ್ಥಾಪಿಸಿ ನಮ್ಮೆಲ್ಲರಿಗೂ ಅವಕಾಶ ಕಲ್ಪಿಸಿರುವ ನಮ್ಮ ಹೆಮ್ಮೆಯ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಾ.ಲತಾ.ಎಸ್.ಮುಳ್ಳೂರ ರವರಿಗೆ ನಾವೆಲ್ಲರೂ ಅಭಾರಿಯಾಗಿದ್ದೀವಿ ಎಂದು
ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧರವರು ತಿಳಿಸಿದ್ದಾರೆ.ಕೋಶಾಧ್ಯಕ್ಷರಾದ ಶ್ರೀಮತಿ ಲಲಿತ ರವರು ಸಹ ಹಾಜರಿದ್ದು, ಇದಕ್ಕಾಗಿ ಧನ ಸಹಾಯಮಾಡಿ, ಸಹಕಾರ ನೀಡಿದ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಸದಸ್ಯರಿಗೂ ಹಾಗೂ ಶಿಕ್ಷಕ ವರ್ಗದವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಹಾ ತಾಲೂಕು ಘಟಕ ಹಾಗೂ ಜಿಲ್ಲಾಘಟಕ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment