
ಹಾವೇರಿ ಅ.22. ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ( ರಿ ) ಧಾರವಾಡ, ಜಿಲ್ಲಾ ಘಟಕ ಹಾವೇರಿ, ರಟ್ಟೀಹಳ್ಳಿ ತಾಲ್ಲೂಕು ಘಟಕದ ವತಿಯಿಂದ .ರಾಜ್ಯ ಘಟಕದ ತೀರ್ಮಾನದಂತೆ, 6 ಮತ್ತು 7 ನೇ ತರಗತಿ ಬೋದನೆಗೆ ಸಂಬಂಧಿಸಿದ ಶಿಕ್ಷಕರ ವೈಯಕ್ತಿಕ ದಾಖಲೆ ನಿರ್ವಹಣೆ ಸ್ಥಗಿತಗೊಳಿಸುವ ಮೂಲಕ PST ಶಿಕ್ಷಕರ ಚಳುವಳಿ ಪ್ರಾರಂಭಿಸಿದ್ದಾರೆ. ಹಿರೇಕೆರೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ತಾಲೂಕಿನ ಶಿಕ್ಷಣಾಧಿಕಾರಿಗಳು ಇಲಾಖಾ ಕಾರ್ಯದ ನಿಮಿತ್ತ ಹಾವೇರಿಗೆ ಹೋಗಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ತಾಲೂಕಿನ ದೈಹಿಕ ಪರಿವೀಕ್ಷಕರಾದ, ಶ್ರೀ M. B. Makandar. ಸರ್ ರವರಿಗೆ ಸಲ್ಲಿಸಿದೆ ಎಂದು ತಾಲ್ಲೂಕಿನ ಅದ್ಯಕ್ಷರು ತಿಳಿಸಿದ್ದಾರೆ.ಹಾಗೂ ನಮ್ಮ ಸಂಘದ ವತಿಯಿಂದ, ತಾಲೂಕಿನ ಜಿಲ್ಲಾ ಪದಾಧಿಕಾರಿಗಳು, ತಾಲೂಕಿನ ಅಧ್ಯಕ್ಷರು, ಗೌರವಅಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧ್ಯಕ್ಷರು, ಉಪಾಧ್ಯಕ್ಷರು, ಸಹಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು ಹಾಜರಿದ್ದು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


