ಶಿಕ್ಷಕರ ದಿನಾಚರಣೆ – ಎರಡು ಭಾವಚಿತ್ರಗಳಿಗೂ ಸಮಾನ ಗೌರವ ನೀಡಿ ಪುಷ್ಪಾರ್ಪಣೆ ಮಾಡಿದ ಮುಖ್ಯಮಂತ್ರಿಗಳು-ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಕಿಯರ ಸಂಘ

ಸನ್ಮಾನ್ಯ ಗೌರವಯುತ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶಿಕ್ಷಣ ಸಚಿವರು ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಯಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಮಾತೇ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರವನ್ನೂ ಇರಿಸಿ,ಎರಡೂ ಭಾವಚಿತ್ರಗಳಿಗೂ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ,ಇದು ಶಿಕ್ಷಕ ಶಿಕ್ಷಕಿಯರ ಮೇಲಿರುವ ಅವರ ಅಭಿಮಾನವನ್ನು ತೋರಿಸುತ್ತದೆ,ಸಮಸ್ತ ಕರ್ನಾಟಕದ ಮಹಿಳಾ ಶಿಕ್ಷಕಿಯರ ಪರವಾಗಿ ಘನ ಸರ್ಕಾರದ ಮಾನ್ಯಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಗೌರವಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತದೆ.

ರಾಜ್ಯಾದ್ಯಂತ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಇದೇ ರೀತಿಯಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ದೊಂದಿಗೆ ಮಾತೇ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರವನ್ನು ಸಹಾ ಇಟ್ಟು ಗೌರವ ಸಮರ್ಪಣೆ ಆಗಬೇಕು. ಪುರುಷ ಪ್ರಧಾನವಿದ್ದ ಅಂತಹ ಕಾಲದಲ್ಲಿ ,ಶಿಕ್ಷಣಕ್ರಾಂತಿಯನ್ನೇ ಮೊಳಗಿಸಿ ಭಾರತದ ಪ್ರಥಮ ಶಿಕ್ಷಕಿ ಬಿರುದು ಪಡೆದ ಅಕ್ಷರಮಾತೆ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ರವರಿಗೆ ಯಾವುದೇ ಹಂತದ ಶೈಕ್ಷಣಿಕ ಕಾರ್ಯಕ್ರಮಗಳಲ್ಲೂ ಸಹಿತ ಅವರ ಭಾವಚಿತ್ರವಿಟ್ಟು ಪೂಜಿಸಿ ಗೌರವಿಸುವಂತ ಶಿಷ್ಟಾಚಾರ ಎಲ್ಲಾ ಶೈಕ್ಷಣಿಕ ದಿನಾಚರಣೆಯಲ್ಲಿ ಬರಬೇಕು
ಪ್ರತಿ ಶಾಲೆಯಲ್ಲಿಯೂ ಸಹಾ ಅವರ ಭಾವಚಿತ್ರ ಇರಬೇಕು
ಶಿಕ್ಷಕರ ದಿನಾಚರಣೆಯಂದು,ಡಾ ರಾಧಾಕೃಷ್ಣನ್ ರವರಿಗೆ ಗೌರವ ಸಲ್ಲುವಂತೆಯೇ ಮಾತೆ ಸಾವಿತ್ರಿಬಾಯಿ ಫುಲೆ ರವರಿಗೂ ಸಲ್ಲಬೇಕು ಇದರಿಂದ ಎಲ್ಲರೂ ತಮ್ಮ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕತೆ ಪಡೆಯಬಹುದಾಗಿದೆ,ಇದು ನಮ್ಮೆಲ್ಲರ ಆಶಯವೂ ಆಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆ ತಿಳಿಸಿದೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment