ತುಮಕೂರು ಆ.22 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್ ಮುಳ್ಳೂರ ರವರ ಎರಡು ದಿನಗಳ ತುಮಕೂರು ಜಿಲ್ಲಾ ಪ್ರವಾಸ ಸಂಪೂರ್ಣ ಯಶಸ್ವಿಯಾಗಿದೆ.

ಹೌದು ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕಗಳು ಜಂಟಿಯಾಗಿ ಅಯೋಜನೆ ಮಾಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಭೆಗೆ ಧಾರವಾಡ ದಿಂದ ಶನಿವಾರ ಬೆಳಿಗ್ಗೆ ತುಮಕೂರಿಗೆ ಬಂದಿಳಿದಿದ್ದ ಡಾ.ಲತಾ.ಎಸ್.ಮುಳ್ಳೂರ ರವರು ನೇರವಾಗಿ ಶ್ರೀ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಬೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ನಂತರದಲ್ಲಿ ಶ್ರೀ ಮಠಕ್ಕೆ ಆಗಮಿಸಿದ್ದ ಕೃಷಿ ಹಾಗೂ ರೈತರ ಕಲ್ಯಾಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರನ್ನು ಬೇಟಿ ಮಾಡಿ ಗೌರವಿಸಿ ಸಂಘಟನೆಗೆ ಸಹಕಾರ,ಬೆಂಬಲ ಕುರಿತಂತೆ ಮನವಿ ಮಾಡಿಕೊಂಡರು.


ಇದೇ ಸಂದರ್ಭದಲ್ಲಿ ಶ್ರೀ ಮಠಕ್ಕೆ ಬಂದಿದ್ದ ತುಮಕೂರಿನ ಮಾಜಿ ಮಂತ್ರಿಗಳಾದ ಶ್ರೀ ಶಿವಣ್ಣರವರನ್ನೂ ಸಹಾ ಗೌರವಿಸಿದರು ಹಾಗೆಯೇ ಹೆಸರಾಂತ ಚಲನಚಿತ್ರ ನಟರು,ಕನ್ನಡಪರ ಹೋರಾಟಗಾರರಾದ ಮುಖ್ಯಮಂತ್ರಿ ಚಂದ್ರುರವರನ್ನು ಗೌರವಿಸಿ, ಸಂಘಟನೆ ಗುರಿ ಉದ್ದೇಶ ಕುರಿತಂತೆ ಚರ್ಚಿಸಿದರು. ತದ ನಂತರ ನೇರವಾಗಿ ತುಮಕೂರು ಪ್ರವಾಸಿ ಮಂದಿರಕ್ಕೆ ತೆರಳಿ ಮಾದ್ಯಮರೊಂದಿಗೆ ಪತ್ರಿಕಾ ಗೋಷ್ಟಿ ನಡೆಸಿದರು.


ಮದ್ಯಾಹ್ನ ಎರಡಕ್ಕೆ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಎರಡೂ ಜಿಲ್ಲೆಗಳ ಎಲ್ಲಾ ತಾಲ್ಲೂಕು ಪದಾಧಿಕಾರಿಗಳೊಂದಿಗೆ ಸಂಘಟನೆ ಕುರಿತಂತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಶಿಕ್ಷಕಿಯರು ಒಟ್ಟುಗೂಡಿ ಸಂಘಟನೆಯನ್ನು ಬಲಪಡಿಸಬೇಕು, ಎದುರಾಗುವ ಯಾವುದೇ ಸಮಸ್ಯೆಗಳನ್ನು ದೈರ್ಯದಿಂದ ಎದುರಿಸಬೇಕು ಎಂದು ಭಾಗವಹಿಸಿದ್ದ ಎಲ್ಲರಿಗೂ ದೈರ್ಯತುಂಬಿ ಆತ್ಮವಿಶ್ವಾಸ ಮೂಡಿಸಿದರು.


ಸಭೆಯು ಸಂಪೂರ್ಣವಾಗಿ ಯಶಸ್ವಿಯಾಯಿತು.
ಎರಡನೇ ದಿನ ಭಾನುವಾರ ಬೆಳಿಗ್ಗೆ ಯೇ ತಿಪಟೂರಿಗೆ ಪ್ರಯಾಣ ಬೆಳಸಿ ಮಾನ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ಬಿ.ಸಿ.ನಾಗೇಶ್ ರವರನ್ನು ಬೇಟಿ ಮಾಡಿ ಗೌರವಿಸಿ ಸನ್ಮಾನಿಸಿದರು. ತಿಪಟೂರು ತಾಲ್ಲೂಕು ಪದಾಧಿಕಾರಿಗಳೊಂದಿಗೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಬೇಟಿ ಮಾಡಿ,ಮಹಿಳಾ ಮೀಸಲಾತಿ ಬೇಡಿಕೆ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು. ಮದ್ಯಾಹ್ನ ತುಮಕೂರಿಗೆ ಮರಳಿ ಇತ್ತೀಚೆಗೆ ನಡೆದಿದ್ದ ಕರೀಕೆರೆ ಶಾಲೆಯ ದುರ್ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸಿ ಅಲ್ಲಿನ ಶಾಲೆಯ ಶಿಕ್ಷಕಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಎರಡು ದಿನಗಳ ತುಮಕೂರು ಪ್ರವಾಸದಲ್ಲಿ ತುಮಕೂರು ಜಿಲ್ಲಾಧ್ಯಕ್ಷರಾದ ಅನುಸೂಯದೇವಿ ಹಾಗೂ ಮಧುಗಿರಿ ಜಿಲ್ಲಾಧ್ಯಕ್ಷರಾದ ರಾಧಮ್ಮ ಹಾಗೂ ಇತರೆ ಪದಾಧಿಕಾರಿಗಳು ಪ್ರತೀ ಸಂದರ್ಭದಲ್ಲೂ ನನ್ನ ಜೊತೆಯಲ್ಲಿದ್ದು ಪ್ರವಾಸದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ ಎಂದು ಡಾ.ಮುಳ್ಳೂರ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎರಡೂ ಜಿಲ್ಲೆಗಳ ಎಲ್ಲಾ ತಾಲ್ಲೂಕು ಪದಾಧಿಕಾರಿಗಳಿಗೂ,ಆತ್ಮೀಯ ಶಿಕ್ಷಕ ಶಿಕ್ಷಕಿಯರಿಗೂ ಧನ್ಯವಾದಗಳನ್ನು ಅರ್ಪಿಸಿ ಭಾನುವಾರ ರಾತ್ರಿ ಧಾರವಾಡಕ್ಕೆ ಪ್ರಯಾಣ ಬೆಳಿಸಿದರು.

