ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ವತಿಯಿಂದ

ಆಯೋಜನೆಯಾದ ರಾಜ್ಯಮಟ್ಟದ ವರ್ಚುವಲ್ ವೇಬಿನಾರ ಕಾರ್ಯಕ್ರಮ,
ದಿನಾಂಕ 14 /08/ 2021 ಶನಿವಾರ ಸಂಜೆ. 4 ಗಂಟೆಗೆ ಹೆಸರಾಂತ ಮಹಿಳಾಪರ ಹೋರಾಟಗಾರರು, ಸ್ತ್ರೀವಾದಿ ಚಿಂತಕರು .ರಾಜ್ಯಕ್ಕೆ ಚುರಪರಿಚಿತರು ಹಾಗೂ ಹಿರಿಯ ಸಾಹಿತಿಗಳು ಆದಂತಹ ಡಾ. ಮಲ್ಲಿಕಾ ಘಂಟಿ ಮೇಡಂ .ವಿಶ್ರಾಂತ ಉಪಕುಲಪತಿಗಳು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವರಿಂದ ಮಹಿಳಾ ಸ್ವಾತಂತ್ರ್ಯ ಸಮಾನತೆ ಮತ್ತು ಮಹಿಳಾ ಮೀಸಲಾತಿ ಎಂಬ ವಿಷಯದ ಕುರಿತು ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮ ಅತ್ತ್ಯುತ್ತಮವಾಗಿ ಜರುಗಿತು.
ಈ ವೆಬಿನಾರ ಕಾರ್ಯಕ್ರಮವನ್ನು ಶ್ರೀಮತಿ ರಕ್ಷಾ ಮೇಡಮ್ ಅವರು ಗಣೇಶನ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.
ಡಾ. ಲತಾ .ಎಸ್. ಮುಳ್ಳೂರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಭೆಯಲ್ಲಿ ಹಾಜರಿದ್ದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಅತಿಥಿ ಮಹೋದಯರಿಗೆ ಸ್ವಾಗತ ಕೋರಿದರು.
ಶ್ರೀಮತಿ ಜ್ಯೋತಿ ಎಚ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ವೆನಿನಾರ್ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀಮತಿ ಸುಜಾತ ಮೇಡಂ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು ಕಾರ್ಯಕ್ರಮದ ಕೇಂದ್ರಬಿಂದುವಾದ ಡಾಕ್ಟರ್ ಮಲ್ಲಿಕಾಘಂಟಿ ಅವರ ಪರಿಚಯ ಮಾಡಿಕೊಟ್ಟರು. ಅವರು ಮಾಡಿದಂತಹ ಪರಿಚಯ ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು.
ಡಾ.ಮಲ್ಲಿಕಾ ಘಂಟಿ ಮೇಡಮ್ ಮಹಿಳಾ ಮೀಸಲಾತಿ ಬಗ್ಗೆ ಮಹಿಳಾ ಸಮಾನತೆಗಳ ಬಗ್ಗೆ ಅತ್ಯಂತ ಸುಧೀರ್ಘವಾಗಿ ತಮ್ಮ ಅನುಭವಗಳ ಆಧಾರದ ಮೇಲೆ ತಾವು ಎದುರಿಸಿದಂತಹ ಸಮಸ್ಯೆಗಳನ್ನು ಹಾಗೂ ಅದನ್ನು ಪರಿಹರಿಸಿದ ರೀತಿಗಳನ್ನು ವಿವರವಾಗಿ ಹೇಳಿದರು.
ಮಾತೇ ಸಾವಿತ್ರಿಬಾಯಿ ಪುಲೆಯವರ ಕಾಲದಿಂದ ಹಿಡಿದು ಈಗಿನವರೆಗೂ ಅವರು ಅನುಭವಿಸಿದಂತಹ ಸಮಸ್ಯೆಗಳನ್ನು ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲ ಮಹಿಳೆಯರು ಎದುರಿಸುತ್ತಿದ್ದಾರೆ ಎನ್ನುವುದನ್ನು ವ್ಯಕ್ತಪಡಿಸಿದರು. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ಸಂಸ್ಕೃತ ಶ್ಲೋಕ ಅದರ ಬದಲಾಗಿ ಇವತ್ತು ಎಲ್ಲಿ ಹೆಣ್ಣುಮಕ್ಕಳು ಇರುತ್ತಾರಲ್ಲ ಅಲ್ಲಿ ನೋವುಗಳು ಕಷ್ಟಗಳು ಇರುತ್ತವೆ ಎನ್ನುವ ಮಟ್ಟಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ಬಂದೊದಗಿದೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುವುದನ್ನು ಹೇಳಿದರು.

ಬೌದ್ಧ ಜೈನ ಧರ್ಮದ ಕಾಲದಿಂದಲೂ ಮಹಿಳೆಯರಿಗೆ ಸಂಘ ಪ್ರವೇಶ ಮಾಡುವ ಒಂದು ಸ್ವಾತಂತ್ರ್ಯ ಇರಲಿಲ್ಲ ಮಹಿಳೆಯರು ಸಂಘ ಪ್ರವೇಶ ಮಾಡಿದರೆ ಸಂಘದ ಆಯಸ್ಸು ಕಡಿಮೆಯಾಗುತ್ತದೆ ಎನ್ನುವ ಒಂದು ಭಾವನೆಯನ್ನು ಪುರುಷರು ಹೊಂದಿದ್ದರು. ಹೀಗಾಗಿ ಕೌಟುಂಬಿಕವಾಗಿ ಸಾಮಾಜಿಕವಾಗಿ ಸಮಾನತೆಯನ್ನು ಕಾಣಲಿಕ್ಕೆ ಆಗುತ್ತಾ ಇರಲಿಲ್ಲ .ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತನ್ನು ಏಕೆ ಹೇಳಿದರು ಜಗತ್ತನ್ನು ತೆರೆದಂತೆ ಮಾತು ಬರಬಹುದಾಗಿತ್ತಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಹಿಳೆಯರಿಗೆ ದೌರ್ಜನ್ಯ ಅವರಿಗೆ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅವಕಾಶ ಕುಟುಂಬದಿಂದಲೇ ಶುರುವಾಗುತ್ತೆ .ಲಿಂಗ ತಾರತಮ್ಯ ಎನ್ನುವುದು ಕೂಡ ನಮ್ಮ ಮನೆಯ ಕುಟುಂಬದ ಪರಿಸರದಿಂದಲೇ ಆರಂಭವಾಗುತ್ತೆ ಈ ಒಂದು ಭಾವನೆಯನ್ನು ಎಲ್ಲರೂ ಕಿತ್ತೊಗೆದಾಗ ಸ್ತ್ರೀ ಸಮಾನತೆಯನ್ನು ತಕ್ಕಮಟ್ಟಿಗೆ ಸಾಧಿಸಬಹುದು. ಹಾಗೆಯೇ ಜ್ಞಾನವು ಸಮಾನತೆಯನ್ನು ಕೊಡುತ್ತದೆ ಮತ್ತು ಅಕ್ಷರವು ಸ್ವಾತಂತ್ರ್ಯವನ್ನು ಒದಗಿಸುತ್ತದೆ .ಹೀಗಾಗಿ ಸಮಾನತೆ ಮತ್ತು ಸ್ವಾತಂತ್ರ್ಯ ಅವುಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಇವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಮೀಸಲಾತಿಯನ್ನುವುದು ಒಂದು ಹಂತದಲ್ಲಿ ಸಾಮಾಜಿಕವಾಗಿ ಸಾರ್ವಜನಿಕವಾಗಿ ಮುಂದುವರಿಯಲು ಒಂದು ಊರುಗೋಲಾಗಿದೆ. ಎನ್ನುವ ಮಾತನ್ನು ಸೂಕ್ಷ್ಮವಾಗಿ ಹೇಳಿದರು. ಇದನ್ನೆಲ್ಲಾ ನೋಡಿದಾಗ ಮಹಿಳೆಯರಿಗೆ ಸ್ವಾತಂತ್ರ್ಯ ಬಂದಿದೆ ಎಂದರೆ ಅದು ಒಂದು ಆದರ್ಶ ಮಾತ್ರ ಆದರೆ ಅದು ವಾಸ್ತವದಲ್ಲಿ ಸ್ವಾತಂತ್ರ್ಯ ಅಲ್ಲ ಎನ್ನುವುದನ್ನು ವ್ಯಕ್ತಪಡಿಸಿದರು.
ಮೆಡಮ ಅವರ ಸುಧೀರ್ಘ 3 ತಾಸು ವೆಬಿನಾರ ನಂತರ ಸಂವಾದ ಕಾರ್ಯಕ್ರಮ ನಡೆಯಿತು ಶಿಕ್ಷಕಿಯರು ಕೇಳಿದಂತಹ ಪ್ರಶ್ನೆಗಳಿಗೆ ಸಹನೆಯಿಂದ ತಾಳ್ಮೆಯಿಂದ ಸಮರ್ಪಕವಾದ ಉತ್ತರ ಕೊಟ್ಟರು. ತಮ್ಮ ವೃತ್ತಿ ಜೀವನದಲ್ಲಿ ತಾವು ಅನುಭವಿಸಿದಂತಹ ವಿಚಾರಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ಇಲ್ಲಿ ಸಣ್ಣ ದೊಡ್ಡದು ಯಾವುದು ಇಲ್ಲ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅದರ ಮೂಲಕ ನಮ್ಮ ಸಾಮರ್ಥ್ಯಗಳನ್ನು ತೋರ್ಪಡಿಸಬೇಕು ಎಂಬುದನ್ನು ವ್ಯಕ್ತಪಡಿಸಿದರು. ಸಂವಾದ ಕಾರ್ಯಕ್ರಮದ ನಂತರ ನಂದಿನಿ ಮೇಡಂ ಅವರಿಂದ ಅದ್ಭುತವಾದಂತಹ ದೇಶಭಕ್ತಿ ಗೀತೆಯನ್ನು ಕೇಳಿ ಎಲ್ಲರೂ ಆನಂದಿಸಿದರು. ಇದಾದನಂತರ ಡಾ.ಲತಾ ಎಸ್ ಮುಳ್ಳೂರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ವೆಬಿನಾರ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಮ್ಮ ಸಂಘಕ್ಕೆ ನಿಮ್ಮ ಒಂದು ಸಂದೇಶ ನೀಡಿ ಎಂದರು. ಡಾ ಮಲ್ಲಿಕಾಘಂಟಿ ಮೇಡಂ ಅವರಿಗೆ ಕೇಳಿದಾಗ ಮಲ್ಲಿಕಾ ಘಂಟಿ ಮೇಡಂ ಅವರು

ಶಿಕ್ಷಕಿಯರು ಬರುತ್ತಿದ್ದಾರೆ ದಾರಿ ಬಿಡಿ ಗೌರವ ಕೊಡಿ.
ಎನ್ನುವ ಸಂದೇಶ ನೀಡಿದರು. .ಈ ಒಂದು ಸಂದೇಶ ಸಭೆಯಲ್ಲಿ ಹಾಜರಿದ್ದ ಎಲ್ಲರಿಗೆ ಎಲ್ಲ ಶಿಕ್ಷಕಿಯರಿಗೆ ಒಂದು ಪ್ರೇರಕ ಹೇಳಿಕೆಯಾಯಿತು. ಅಂತಿಮವಾಗಿ ಮಲ್ಲಿಕಾ ಘಂಟಿ ಮೇಡಮ್ ಅವರು
ಬಹು ಅಭಿಪ್ರಾಯಗಳ ಮಧ್ಯೆಯೂ ಏಕರೂಪತೆ ಇರಬೇಕು ಬೇರೊಂದು ಹೆಣ್ಣಿಗೆ ಆದ ನೋವು ಅದು ನಮ್ಮ ನೋವು ಅನ್ನುವ ಎಲ್ಲಾ ಮಹಿಳೆಯರು ಹೊಂದಿದಾಗ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಹೇಳಿಕೆ ಮಿಥ್ಯವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ .ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೊನೆಗೆ ಅಕ್ಕಮಹಾದೇವಿ ಮೆಡಮ ರಾಜ್ಯ ಸಂಘಟನಾ ಕಾರ್ಯದರ್ಶಿ ಇವರಿಂದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.ಈ ಒಂದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲು ಶ್ರೀಮತಿ ಭುವನೇಶ್ವರಿ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು ಅವರು ಅತ್ಯಂತ ಸುಂದರವಾಗಿ ಅಚ್ಚುಕಟ್ಟಾಗಿ ನಿರೂಪಣೆಯನ್ನು ನೆರವೇರಿಸಿದರು. ಅದ್ಭುತವಾದ ಇಂತಹ ಅದ್ಭುತವಾದ ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಿದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಡಾ. ಲತಾ. ಎಸ್ ಮುಳ್ಳೂರ್ ಹಾಗೂ ಜ್ಯೋತಿ ಎಚ್ ಮೇಡಂ ಅವರಿಗೆ ಹಾಗೂ ಉಪನ್ಯಾಸ ನೀಡಿದ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಮೆಡಂ ರವರಿಗೂ ಹೃತ್ಪೂರ್ವಕ ವಂದನೆಗಳು.
ವರದಿ–ಶ್ರೀಮತಿ ಪರವೀನ ಎಚ್. ನದಾಫ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು
