
ವಿಜಯನಗರ ಆ.04 -2021
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಘಟಕ ಧಾರವಾಡ ,ಜಿಲ್ಲಾ ಘಟಕ ವಿಜಯನಗರ ವತಿಯಿಂದ
ಇಂದು ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳ ಪರವಾಗಿ ಹಾಗೂ ಸಮಸ್ತ ಮಹಿಳಾ ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಇರುವಂತೆ 33% ಮಹಿಳಾ ಸಂವಿಧಾನಿಕ ಮೀಸಲಾತಿಯನ್ನು ಕರ್ನಾಟಕ ರಾಜ್ಯ ಸಕಾ೯ರಿ ನೌಕರರ ಸಂಘದಲ್ಲು ನೀಡುವಂತೆ ಸ್ನೇಹಪರರೂ, ಮಹಿಳಾ ಪರ ಕಾಳಜಿ ಇರುವ ರಾಜ್ಯ ಸಕಾ೯ರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಶ್ರೀಯುತ ಷಡಕ್ಷರಿ ಸರ್ ಅವರಿಗೆ

ಮನವಿಯನ್ನು ಸಲ್ಲಿಸಲು,ವಿಜಯನಗರ ಜಿಲ್ಲಾ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ ಸರ್ ಹಾಗೂ ಜಿಲ್ಲಾ ಪ್ರಧಾನಕ್ಯ೯ದಶಿ೯ಗಳಾದ ಶ್ರೀ ಕಡ್ಲಿ ವೀರಭದ್ರೇಶ ಸರ್ ಅವರಿಗೆ ನಮ್ಮ ಸಂಘದ ಬೆನ್ನೆಲುಬಾಗಿ ನಿಂತಿರುವ ಹಿರಿಯ ಶಿಕ್ಷಕರ ಸಮ್ಮುಖದಲ್ಲಿ, ವಿಜಯನಗರ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಘಟಕಗಳ ವತಿಯಿಂದ ಮನವಿ ಸಲ್ಲಿಸಲಾಯಿತು.
ನಮ್ಮ ಮನವಿಯನ್ನು ಸ್ವೀಕರಿಸಿ ಸದಾ ಮಹಿಳಾ ಪರ ಇರುವ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಕ್ಕೆ ನಮ್ಮ ಬೆಂಬಲ ಯಾವತ್ತು ಸದಾ ಇರುತ್ತದೆ ಎಂದು ಆತ್ಮಸ್ಥೈಯ೯ ತುಂಬಿದರು. ಮನವಿಯನ್ನು ಸ್ವೀಕರಿಸಿದ ರಾಜ್ಯ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ಜಿಲ್ಲಾಧ್ಯಕ್ಷರು ಸಲ್ಲಿಸಿದ್ದಾರೆ.

