ಅಧ್ಯಕ್ಷರೇ.ಮಹಿಳಾ ನೌಕರರಿಗೆ ಸಾಂವಿಧಾನಿಕ ಮೀಸಲಾತಿ ಕೊಡಿ – ಡಾ.ಲತಾ.ಎಸ್.ಮುಳ್ಳೂರ

ಗೆ,
ಶ್ರೀ ಸಿ.ಎಸ್. ಷಡಾಕ್ಷರಿ
ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ.(ರಿ) ಬೆಂಗಳೂರು
ಕಬ್ಬನ್ ಉದ್ಯಾನವನ ಬೆಂಗಳೂರು-560001

*ವಿಷಯ:* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಸಾಂವಿಧಾನಿಕ ಸಮಾನತೆಗಾಗಿ ಮಹಿಳಾ ನೌಕರರಿಗೆ ಮೀಸಲಾತಿ ಕಲ್ಪಿಸುವ ಕುರಿತು

ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಹುಟ್ಟು ಹಾಕಿದ ದಿಟ್ಟ ಮಹಿಳೆ ಹಾಗೂ ಎಲ್ಲಾ ನೌಕರರ ವಿಶ್ವಾಸಕ್ಕೆ ದ್ವನಿಯಾಗಿದ್ದ ದಿ.ಶ್ರೀಮತಿ ಮೇರಿ ದೇವಾಸಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.. ಹಾಗಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಲ್ಲಿ ಬಹುತೇಕ ಮಹಿಳಾ ನೌಕರರೇ ಬಹಳಷ್ಟು ಇದ್ದಾರೆ, ಎಲ್ಲಾ ಸರ್ಕಾರಿ ಮಹಿಳಾ ನೌಕರರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅಂದಿನಿಂದಲೂ ಎಲ್ಲರೂ ನೌಕರರ ಸಂಘಕ್ಕೆ ವಾರ್ಷಿಕ ವಂತಿಕೆ ಹಣವನ್ನು ಪ್ರಾಮಾಣಿಕ ವಾಗಿ ಸಲ್ಲಿಸುತ್ತಾ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ 33% ಮಹಿಳಾ ಶಿಕ್ಷಕಿಯರಿಗೆ ಮೀಸಲಾತಿ ಕಲ್ಪಿಸಿರುವಂತೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕ್ರಿಯಾಶೀಲ, ಮಹಿಳಾಪರ ಅಪಾರ ಕಾಳಜಿ ಹೊಂದಿರುವ ಅಧ್ಯಕ್ಷರಾದ ತಾವುಗಳು ಸಹಾ ಮಹಿಳಾ ನೌಕರರಿಗೆ, ನೌಕರರ ಸಂಘದಲ್ಲಿ ಸಾಂವಿಧಾನಿಕವಾಗಿ ಸಿಗಬೇಕಾದ ಮಹಿಳಾ ಮೀಸಲಾತಿ ಕಲ್ಪಿಸಬೇಕು. ರಾಜ್ಯದ ಸಮಸ್ತ ಮಹಿಳಾ ನೌಕರರಿಗೆ ಸಮಾನತೆಯ ಹಾದಿಯಲ್ಲಿ ನ್ಯಾಯ ಒದಗಿಸಿ ಕೊಡಲೇ ಬೇಕಾಗಿ ಒತ್ತಾಯಿಸಿ ಮನವಿ ಸಲ್ಲಿಸುತ್ತಿದ್ದೇವೆ.

ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಜಿಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ಸಮಸ್ತ ಮಹಿಳಾ ನೌಕರರ ಪರವಾಗಿ.ಡಾ.ಲತಾ ಎಸ್ ಮುಳ್ಳೂರ ರವರು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ರವರಿಗೆ ಬೇಡಿಕೆ ಇಟ್ಟಿದ್ದಾರೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment