ಮಧುಗಿರಿ ಜು.24 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ರಾಜ್ಯ ಘಟಕ- ಧಾರವಾಡ ಜಿಲ್ಲಾ ಘಟಕ- ಮಧುಗಿರಿ ತಾಲ್ಲೂಕು ಘಟಕ- ಪಾವಗಡ
ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಆಗಿದ್ದು ಸಂಘದ ವತಿಯಿಂದ ಮೊದಲನೇ ಸಭೆಯನ್ನು ದಿನಾಂಕ 24 -7 -20 21ರಂದು ಗೂಗಲ್ ಮೀಟ್ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಮೇಡಂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ಮೇಡಂ ರವರು,ರಾಜ್ಯ ಉಪಾಧ್ಯಕ್ಷರು ಮತ್ತು ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಅನಸೂಯ ಮೇಡಂ ಜಿಲ್ಲಾ ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ಮೇಡಂ ರವರು ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಂಘದ ಧ್ಯೇಯೋದ್ದೇಶಗಳನ್ನು ಕುರಿತು ಮಾತನಾಡಿದರು ಹಾಗೂ ಸಂಘದ ಕಾರ್ಯಗಳ ಕುರಿತು ಹೇಳುತ್ತಾ ಸಂಘವು ರಾಜ್ಯದ ಎಲ್ಲಾ ಶಿಕ್ಷಕಿಯರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ, ಶಿಕ್ಷಕಿಯರ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತದೆ ಎಂದು ಹೇಳಿದರು.ಹಾಗೂ ಶಿಕ್ಷಕಿಯರಿಗೆ ಇರುವ ಸೌಲಭ್ಯಗಳ ಕುರಿತು ತಿಳಿಸಿದರು. ಇದರಲ್ಲಿ ಶಿಶುಪಾಲನಾ ರಜೆಯ ಬಗ್ಗೆ ಸವಿವರವಾಗಿ ತಿಳಿಸಿದರು ಮತ್ತು ಸಂಘದ ಬಲವರ್ಧನೆಗಾಗಿ ಪದಾಧಿಕಾರಿಗಳ ಕಾರ್ಯದ ಬಗ್ಗೆ ತಿಳಿಸಿದರು

ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ಮೇಡಂ ರವರು ಮಾತನಾಡುತ್ತಾ ತಮ್ಮ ಭಾವನೆಗಳನ್ನು ಕ್ರಿಯಾಶೀಲತೆಯನ್ನು ಪ್ರತಿಬಿಂಬಿಸಲು ಶಿಕ್ಷಕಿಯರಿಗಾಗಿ ಇರುವ ಕುಟುಂಬ ಆಪ್, ಇದನ್ನು ಶಿಕ್ಷಕಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಘದಲ್ಲಿ ಪ್ರತಿದಿನ ಪ್ರತಿ ವಿಚಾರಗಳನ್ನು ಅಪ್ಡೇಟ್ ಮಾಡುವ ವಿಚಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರು.ಈ ಗೂಗಲ್ ಮೀಟ್ ನಲ್ಲಿ ಸೇರಿದ್ದ ಪಾವಗಡ ತಾಲೂಕು ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು, ಗೌರವಾಧ್ಯಕ್ಷರು , ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಮ್ಮ ಸಾವಿತ್ರಿಬಾಯಿಪುಲೆ ಸಂಘಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದು ಸಂಘದ ಪರವಾಗಿ ರಾಮಾಂಜನೇಯ ರವರು ಮೀಟ್ ನಲ್ಲಿ ಭಾಗವಹಿಸಿ ಸಂಪೂರ್ಣ ಸಹಕಾರ ನೀಡಿದರು. ಒಟ್ಟಾರೆಯಾಗಿ ಸಂಘದ ಮೊದಲ ಸಭೆ ಯಶಸ್ವಿಯಾಗಿ ಪೂರ್ಣಗೊಂಡಿತು ಸಭೆಯಲ್ಲಿ ಯಶೋಧ ಮೇಡಂ ರವರು ಪ್ರಾರ್ಥನೆ ಮಾಡಿದರೆ ರಾಧಾ ಮೇಡಂ ರವರು ಸರ್ವರನ್ನು ಸ್ವಾಗತಿಸಿದರು. ದುರ್ಗಾ ಮೇಡಂ ರವರು ವಂದನಾರ್ಪಣೆ ಸಲ್ಲಿಸಿದರು.
