ಹೆಣ್ಣಿನ ಸ್ವಾತಂತ್ರ್ಯ ಕಸಿಯಲು ಯತ್ನ- ಡಾ.ಮುಳ್ಳೂರ ಖಂಡನೆ

ಧಾರವಾಡ ಜು.16 .ಹೆಣ್ಣಿನ ಶೋಷಣೆ,ಹೆಣ್ಣಿನ ಸ್ವಾತಂತ್ರ್ಯ ಕಸಿಯುವ ಯತ್ನಗಳು ನಡೆಯುತ್ತಲೆ ಇವೆ.ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಪ್ರಕರಣ ಶಿಕ್ಷಣ ವಯಲದಲ್ಲಿ ನಡೆದಿರುವುದು ವಿಷಾದನೀಯ.


ಎಲ್ಲಾ ಶಿಕ್ಷಕ ಶಿಕ್ಷಕಿಯರು ತಮಗಿಷ್ಟವಾದ ಉಡುಪನ್ನು ಧರಿಸಲು ಸ್ವತಂತ್ರವಿದೆ.ಆದರೆ ಸಭ್ಯ ಉಡುಪಾಗಿರಲಿ ಎಂದು 2017 ರಲ್ಲಿ ಘನ ಸರ್ಕಾರವು ಅಧಿಕೃತವಾಗಿ ಘೋಷಣೆ ಮಾಡಿತ್ತು.ಅದರಂತೆ ಶಿಕ್ಷಣ ಇಲಾಖೆಯ ನಿರ್ದೇಶಕರು ಕೂಡ ದಿನಾಂಕ 28:07:2017 ರಲ್ಲಿ ತಮ್ಮ ಆದೇಶ ಸಂಖ್ಯೆ ಎಡಿಎಂ೨(೧)ಸ ಉಡುಪು/2016-17 ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದೆ.ಅದರಂತೆ ಎಲ್ಲಾ ಬೋಧಕ ವಲಯದ ಶಿಕ್ಷಕಿಯರು ಸಬ್ಯ ಉಡುಪಗಳಾದ ಸೀರೆ ಅಥವಾ ಚೂಡಿದಾರ್ ತೊಡಲು ಅವಕಾಶ ಕಲ್ಪಿಸಲಾಗಿದೆ.ಇದನ್ನು ಸಹಿಸದ ಕೆಲವು ಪುರುಷ ಶಿಕ್ಷಕರು,ಶಿಕ್ಷಕಿಯರಿಗೆ ಸೀರೆಯನ್ನೇ ತೊಡಲು ಸೂಚಿಸುವಂತೆ ಚಿಕ್ಕಮಗಳೂರು ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿರುತ್ತಾರೆ,ಇದು ಅವರ ಅಸಹನೆಯನ್ನು ಬಿಂಬಿಸುತ್ತಿದೆ‌.ಹಾಗೂ ಮಹಿಳೆಯರ ಸ್ವಾತಂತ್ರ್ಯ ಕಸಿಯುವ ಯತ್ನವಾಗಿದೆ.ಇದನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಖಂಡಿಸಿದೆ.ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಕಟುವಾಗಿ ಮಾತನಾಡಿದ್ದಾರೆ.

ಅಂತವರ ಮನವಿಯನ್ನು ತಿರಸ್ಕರಿಸಿರುವ ಮಾನ್ಯ ಉಪನಿರ್ದೇಶಕರು ಸಬ್ಯ ಉಡುಪು ಧರಿಸಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ..ಇದರ ಬಗ್ಗೆ ಯಾರೂ ಕೂಡ ಆಕ್ಷೇಪ ಸಲ್ಲಿಸಬಾರದೆಂದು ಸೂಚಿಸಿರುತ್ತಾರೆ.ಅವರ ಈ ಅದೇಶವನ್ನು ನಮ್ಮ ಸಂಘವು ಸ್ವಾಗತಿಸುತ್ತದೆ, ಮನವಿಯನ್ನು ತಿರಸ್ಕರಿಸಿ ಶಿಕ್ಷಕಿಯರ ಸ್ವಾತಂತ್ರ್ಯಪರ ಸೂಕ್ತ ನಿರ್ಣಯ ತೆಗೆದುಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಮಾನ್ಯ ಉಪನಿರ್ದೇಶಕರವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿ ಹೆಚ್.ರವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment