ನಲಿಕಲಿ ಸೇತುಬಂಧ ವೆಬಿನಾರ್ ವಿಚಾರ ಕಾರ್ಯಕ್ರಮ- ಫುಲೆ ಸಂಘ ಯಶಸ್ವಿ

ಹರಿಹರ-ಜು.3- ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ದಾವಣಗೆರೆ ಹರಿಹರ ತಾಲ್ಲೂಕು ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹರಿಹರ ಸಹಯೋಗದಲ್ಲಿ

ದಿನಾಂಕ 3/7/2021 ರಂದು ನಲಿಕಲಿ ಸೇತುಬಂಧ (Bridge Course) ಕಾರ್ಯಕ್ರಮ ಸಂಜೆ 4 ಗಂಟೆಗೆ ವೇಬಿನಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು Microsoft Teams ನಲ್ಲಿ 300 ಕ್ಕಿಂತ ಹೆಚ್ಚು ಶಿಕ್ಷಕ ಶಿಕ್ಷಕಿಯರು ಜಾಯಿನ್ ಆಗಿ ಪ್ರಯೋಜನ ಪಡೆದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ಜ್ಯೋತಿ ಹೆಚ್ ರವರು ಎಲ್ಲರನ್ನೂ ಸ್ವಾಗತಿಸಿದರು…ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹರಿಹರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ಬಸವರಾಜಪ್ಪ. U. ಅವರು ನಲಿ ಕಲಿ 60ದಿನಗಳ ಸೇತುಬಂಧ ಬಗ್ಗೆ ಮಾಹಿತಿ ತುಂಬಾ ಅವಶ್ಯಕತೆ ಇತ್ತು.ಅಧಕ್ಕೆ ಪೂರಕವಾಗಿ ವೆಬಿನಾರ್ ಆಯೋಜಿಸಿದ್ದು ಉತ್ತಮ…ಇದನ್ನು ಶಿಕ್ಷಕರು ಉತ್ತಮವಾಗಿ ಶಾಲಾ ಹಂತದಲ್ಲಿ ಬಳಸಿಕೊಳ್ಳಿ .. ಯಶಸ್ವಿ ಆಗಲಿ ಎಂದು ಹಾರೈಸಿದರು..

ನಂತರ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಾನ್ಯ ಶ್ರೀ ವಿಶ್ವನಾಥ.K. R ಅವರು ಕಾರ್ಯಕ್ರಮ ಕುರಿತು ನಲಿ ಕಲಿ ವಿಭಿನ್ನ.. ವಿಶಿಷ್ಟ ಭೋದನಾ ಕಾರ್ಯಕ್ರಮ…ಅಭ್ಯಾಸ ಹಾಳೆ ಗಳ ಬಳಕೆ…ಮೌಲ್ಯಮಾಪನ ಕಾರ್ಯದ ಬಗ್ಗೆ ಹೆಚ್ಚಿನ ಮಾಹಿತಿ ಈ ವೆಬಿನಾರ್ ನಲ್ಲಿ ಸಿಗಲಿದೆ… ಎಲ್ಲರೂ ಉತ್ತಮ ವಾಗಿ ಬಳಸಿಕೊಳ್ಳಿ ಎಂದು ಉತ್ತಮ ಮಾರ್ಗ ದರ್ಶನ ನೀಡಿ ಎಲ್ಲರಿಗೂ ಶುಭ ಕೋರಿದರುನಂತರ ಡಾ. ಲತಾ. ಎಸ್. ಮುಳ್ಳೂರ ಸಂಘದ ಸ0ಸ್ಥಾಪಕ ಅಧ್ಯಕ್ಷರು. ನಮ್ಮ ಸಂಘ ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಶಿಕ್ಷಕಿಯರ ಬೇಕು ಬೇಡಿಕೆ ಸಮಸ್ಯೆಗಳಿಗೆ ಸ್ಪಂದಿಸುತ್ತ ಶಾಲೆಗಳ ಸಬಲೀಕರಣ. ಶೈಕ್ಷಣಿಕ ಕಾರ್ಯಕ್ರಮ ..ಕಾರ್ಯಾಗಾರ. ತರಬೇತಿ. ಶೈಕ್ಷಣಿಕ ವೆಬಿನಾರಗಳನ್ನು ಆಯೋಜಿಸುವ ಮೂಲಕ ಶೈಕ್ಷಣಿಕ ಚಟುವಟಿಕೆ ಗಳಲ್ಲಿ ತೊಡಗಿದೆ. ರಾಜ್ಯದ ಬಹುತೇಕ ಶಿಕ್ಷಕ ಶಿಕ್ಷಕಿಯರು ಬೆಂಬಲ. ಪ್ರೋತ್ಸಾಹ. ಪ್ರಯೋಜನ ಪಡೆಯುತ್ತಿದ್ದಾರೆ.ಎಂದು ತಿಳಿಸಿ ಶುಭ ಕೋರಿದರು ..

ನಲಿಕಲಿ ಸೇತುಬಂಧ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಫೌಜಿಯಾ ಸರವತ್ ಅವರು 3 ತಾಸುಗಳ ವರೆಗೆ ಸುದೀರ್ಘವಾಗಿ ಎಲ್ಲರ ಮನಮುಟ್ಟುವಂತೆ ಅಭ್ಯಾಸ ಹಾಳೆಗಳ ಮೂಲಕ ..ಕಲಿಕೋಪಕರಣಗಳ ಮೂಲಕ .ಮಕ್ಕಳಿಗೆ ಆನ್ಲೈನ್..ಆಫ್ಲೈನ್ .. ಮತ್ತು ಸಮಿಶ್ರವಾಗೀ ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಯಾವ ರೀತಿಯಾಗಿ ಕಲಿಸಬೇಕೆಂದು ವಿವರವಾಗಿ ತಿಳಿಸಿದರು ಅನೇಕ ಶಿಕ್ಷಕ ಶಿಕ್ಷಕಿಯರು ಮುಕ್ತವಾಗಿ ಚರ್ಚಿಸಿ. ಪ್ರಶ್ನಿಸಿ ಸಮಸ್ಯೆ ಬಗೆಹರಿಸಿಕೊಂಡರು..ನಲಿ ಕಲಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಲ್ಲರಿಗೂ ಹೊಸ ಭರವಸೆ ..ಹುಮ್ಮಸ್ಸು ತುಂಬಿದರು
ಹಾಗೆಯೇ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರೇಣುಕಾರಾಧ್ಯ ಸರ್ ರವರು ನಲಿ ಕಲಿ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಅರ್ಥ ಪೂರ್ಣವಾಗಿ ವಿಷಯ ಮನದಟ್ಟಾಗುವಂತೆ ಮಾಹಿತಿ ತಿಳಿಸಿದರು
ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ಜ್ಯೋತಿ ಹೆಚ್ ರವರು ತಾಳ್ಮೆ ಸಹನೆಯಿಂದ ನಿರಂತರ ವಾಗಿ ವೇಬಿನಾರ ನಲ್ಲಿ ಭಾಗವಹಿಸಿದ ಬಿಇಒ ಸರ್..BRC ಸರ್..ECO..BRP..CRP ಗಳಿಗೆ ಹಾಗೂ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ..ಜಿಲ್ಲಾ.. ತಾಲೂಕು ಪದಾಧಿಕಾರಿಗಳಿಗೆ .ಮತ್ತು ಸರ್ವ ಶಿಕ್ಷಕ ಶಿಕ್ಷಕಿಯರಿಗೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು .. ಕಾರ್ಯಕ್ರಮದ ಅಚ್ಚುಕಟ್ಟಾದ ನಿರೂಪಣೆಯನ್ನು ಕವಿತಾ.ಉಪಾಧ್ಯಕ್ಷರು. ಶಿಕಾರಿಪುರ ಇವರು ನಡೆಸಿಕೊಟ್ಟರು ಒಟ್ಟಿನಲ್ಲಿ ವೆಬಿನಾರ್ ಸಂವಾದ ಕಾರ್ಯಕ್ರಮ ಅತ್ಯುತ್ತಮ ವಾಗಿ ಸರ್ವರ ಸಹಕಾರದಿಂದ ಅತ್ಯುತ್ತಮ ವಾಗಿ ಮೂಡಿ ಬಂದಿತು.. ಭಾಗವಹಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.

🌹🌹🌹🌹🌹🌹🌹🌹🌹🌹🌹🌹🌹🌹

ಇಂದ:

ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ
ದಾವಣಗೆರೆ ಜಿಲ್ಲೆ .ಹರಿಹರ ತಾಲೂಕು ಘಟಕ🙏🙏🙏🙏🙏🙏🙏🙏🙏🤝🤝🤝🤝🤝🤝🤝🤝🌹🤝

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment