ಬಿ.ಇ.ಒ ಅಧಿಕಾರಿಗೆ ಮನವಿ ಸಲ್ಲಿಕೆ

ತೀರ್ಥಹಳ್ಳಿ ಜೂ.13. ಕೋವಿಡ್ 19 ಮಹಾ ರೋಗವು ಉಲ್ಬಣಗೊಂಡು ವಿಶ್ವವ್ಯಾಪಿ ಜನಜೀವನವನ್ನು ತಲ್ಲಣಗೊಳಿಸಿದೆ.
ಅದರಲ್ಲೂ ಎರಡನೇ ಅಲೆಯು ನಮ್ಮ ದೇಶದಲ್ಲಿ ಅತೀವ ಶೀಘ್ರವಾಗಿ ವ್ಯಾಪಿಸಿ ಲಕ್ಷಾಂತರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸಾವಿರಾರು ಜನರ ಜೀವಹಾನಿ ಮಾಡಿರುತ್ತದೆ
ಇದು ಶೈಕ್ಷಣಿಕ ರಂಗದ ಮೇಲೆ ಪ್ರಭಾವ ಬೀರಿರುತ್ತದೆ
ಇನ್ನು ತಜ್ಞರ ಅಭಿಪ್ರಾಯದಂತೆ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಎಂದು ವರದಿ ಮಾಡಿರುತ್ತಾರೆ.


ಈಗಾಗಲೇ ಶಿಕ್ಷಣ ಇಲಾಖೆಯು 2021 22ನೇ ಸಾಲಿನ ಶೈಕ್ಷಣಿಕ ಅವಧಿ ಶಾಲಾ ದಾಖಲಾತಿ ಪ್ರಾರಂಭಿಸಲು ಸೂಚಿಸಿದೆ. ಆದ್ದರಿಂದ ಕೋವಿಡ್ ಡ್ಯೂಟಿ ಮಾಡುವ ಶಿಕ್ಷಕರಿಗೆ ಮಾತ್ರವಲ್ಲದೆ ತಾಲೂಕಿನ ಪ್ರತಿ ಶಿಕ್ಷಕರಿಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ ಮೊದಲ ಸಾಲಿನ ಆದ್ಯತೆ ನೀಡಿ ಕೋವಿಡ್ ಲಸಿಕೆ ಹಾಕಿಸಬೇಕೆಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತೀರ್ಥಹಳ್ಳಿ
ತಾಲ್ಲೂಕು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಮನವಿ ಸಲ್ಲಿಸಿದೆ.ತಾಲ್ಲೂಕಿನ ಅಧ್ಯಕ್ಷರಾದ ಭಾರತಿ ಕೆ ಎಸ್ ,ಪ್ರಧಾನ ಕಾರ್ಯದರ್ಶಿಗಳಾದ ನರ್ಮದಾ ಎಂ ವಿ,ಕೋಶಾಧ್ಯಕ್ಷರು ನಂದಿನಿ ರವರುಗಳು
ಎಲ್ಲಾ ಪದಾಧಿಕಾರಿಗಳ ಪರವಾಗಿ ಹಾಜರಿದ್ದರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment