
ಹೊಸಪೇಟೆ ಮೇ31.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಜಿಲ್ಲಾಘಟಕ ವಿಜಯನಗರ ಹೊಸಪೇಟೆ ತಾಲೂಕಿನಲ್ಲಿ ಫ್ರಂಟ್ ವಾರಿಯರ್ಸ್ ಆಗಿ ,ಮನೆ ಮನೆ ಸವೆ೯ ಮಾಡುತ್ತಿರುವವರಿಗೆ ಸಂಘವು ಮೆಡಿಸನ್ ಕಿಟ್ ವಿತರಿಸುವ ಮೂಲಕ ಸೇವೆಯನ್ನು ಮಾಡುತ್ತಿದೆ.
ಈ ಕೋರೋನ್ ಎನ್ನುವಂತ ಮಹಾಮಾರಿಯ ಸಂದಭ೯ದಲ್ಲಿ ತಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಈ ಒಂದು ಕಾಯ೯ವನ್ನು ಮಾಡುತ್ತಿರುವವರಿಗೆ ಕೋವೀಡ್ ಕಿಟ್ ಮತ್ತು ಸ್ಯಾನಿಟೈಜರ್ ವಿತರಿಸಲು ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುನಂದಮ್ಮ ನವರು ಚಾಲನೆ ನೀಡಿ ಉತ್ತಮ ಕಾರ್ಯಕ್ರಮವನ್ನು ಫುಲೆ ಶಿಕ್ಷಕಿಯರು ಮಾಡುತ್ತಿದ್ದೆ ಎಂದು ಶುಭ ಹಾರೈಸಿದರು ಈ ಒಂದು ಕಾಯ೯ಕ್ಕೆ ಸಂಘದ ಪದಾಧಿಕಾರಿಗಳು ಎಲ್ಲರೂ ಕೈಜೋಡಿಸಿದ್ದಾರೆ. ಈ ಕಾಯ೯ಕ್ರಮದಲ್ಲಿ ಸಿ.ಆರ್.ಪಿ. ಮತ್ತು ಹಿರಿಯ ಗುರುಗಳು ಚಂದ್ರಶೇಖರ್ ಸಾರ್ ಹೇಮರೆಡ್ಡಿ ಸಾರ್ ,ವಿಶ್ವನಾಥ್ ಸಾರ್ ವೆಂಕಟೇಶ ರೆಡ್ಡಿ ಇ.ಸಿ.ಒ.ಸರ್ .ಗುರುಗಳು ,ಗುರುಮಾತೆಯರು ಎಲ್ಲರೂ ಭಾಗವಹಿಸಿದ್ದರು.
ಧನ ಸಹಾಯ ಮಾಡಿದಂತ ಪದಾಧಿಕಾರಿಗಳು
ಉಮಾದೇವಿ, ಅರುಂಧತಿ,ಮಾಧವಿ,ಶಶಿಕಲಾ, ರೇಷ್ಮಾ, ರೂಪ ಟೀಕಾರಿ, ಅನ್ನಪೂರ್ಣ ಸುಣಗಾರ, ವಿನುತಾ, ಮನೋಹರಿ,ರೂಪದೇವಿ .ಡಿ.ಎಸ್.ಹನುಮವ್ವ ಉಷಾರಾಣಿ ಸುಧಮ್ಮ, ಶೋಭಾ ಜಮಾದರ್,ಶ್ರೀ ಲತಾ ಇನ್ನೂ ಹಲವರು ಸಂಘಕ್ಕೆ ಧನ ಸಹಾಯ ಮಾಡಿದ್ದಾರೆ.
ಇಂಥ ಜನಸೇವಾ ಸಮಾಜಮುಖಿ ಕಾರ್ಯಕ್ರಮ ಮಾಡಲು ಸಾವಿತ್ರಿಬಾಯಿ ಫುಲೆ ಸಂಘದ ವೇದಿಕೆ ಕಲ್ಪಿಸಿ ಕೊಟ್ಟ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ,ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ರವರುಗಳಿಗೆ ಈ ಸುಸಂದರ್ಬದಲ್ಲಿ ವಿಜಯನಗರ ಜಿಲ್ಲಾಧ್ಯಕ್ಷರಾದ
ಉಮಾದೇವಿ. ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ
ಅರುಂಧತಿ ರವರು ಅಭಿನಂದಿಸಿದ್ದಾರೆ.

ಸಹಕಾರ ನೀಡಿದ ಎಲ್ಲಾ ಪದಾಧಿಕಾರಿಗಳಿಗೆ
ಹನುಮವ್ವ ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಹಾಗೂ
ಉಷಾರಾಣಿ.ತಾಲ್ಲೂಕು ಪ್ರಧಾನಕಾಯ೯ದಶಿ೯ಯವರು
ಅನಂತ ಧನ್ಯವಾದಗಳನ್ನು ಅರ್ಪಿಸಿದ್ದಾರೆ.



