ಈ ದಿನ‌ ವಿಶ್ವ ಹಸಿವಿನ ದಿನ- ಆಹಾರ ಕಿಟ್ ವಿತರಿಸಿದ ಫುಲೆ ಶಿಕ್ಷಕಿಯರ ಸಂಘ

ಆಹಾರ ಕಿಟ್ ವಿತರಣೆಗಾಗಿ ಸಿದ್ದತೆ ನಡೆಸುತ್ತಿರುವುದು

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ- ಧಾರವಾಡ

ಜಿಲ್ಲಾ ಘಟಕ- ಶಿವಮೊಗ್ಗ

ಶಿವಮೊಗ್ಗ ಮೇ 28.ಶಿವಮೊಗ್ಗ ಘಟಕವು  ಈ ದಿನ ಕೋವಿಡ್ ಪರಿಸ್ಥಿತಿಯಲ್ಲಿ ನಾಲ್ಕಾರು ಜನರ
ಹಸಿವನ್ನು ನೀಗಿಸುವ ಕಾರ್ಯ ಮಾಡೋಣ ಎಂದು ತೀರ್ಮಾನಿಸಿ ಆಸಕ್ತ ಶಿಕ್ಷಕಿಯರಿಂದ ಒಂದಿಷ್ಟು ಧನ ಸಹಾಯ ಹಣವನ್ನು ಸಂಗ್ರಹಿಸಿ ಹಸಿದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯವನ್ನು ತಾಲ್ಲೂಕಿನ ನವುಲೇ ಸಮೀಪದ ಟೆಂಟ್ ನಿವಾಸಿಗಳಿಗೆ ಮೊದಲ ಸುತ್ತಿನಲ್ಲಿ 12 ಕುಟುಂಬಗಳಿಗೆ ವಿತರಿಸಲಾಯಿತು,
ತಾಲ್ಲೂಕಿನ ಮಾನ್ಯ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜು ಪಿ.ರವರು ಈ ಕಾರ್ಯಕ್ರಮಕ್ಕೆ ಚಾಲನೆ ಮಾಡು ಶುಭ ಹಾರೈಸಿ ಇಂತಹ ಉತ್ತಮ ಕಾರ್ಯಕ್ರಮಗಳು ಸಂಘಟನೆ ವತಿಯಿಂದ ನಡೆಯುತ್ತಲೇ ಇರಲಿ ಎಂದು ಆಶಿಸಿದರು,.ಫುಲೆ
ಸಂಘದ  ಈ ಅಳಿಲು ಸೇವಾಕಾರ್ಯಕ್ಕೆ ಹಲವು ಶಿಕ್ಷಕಿ ಮಿತ್ರರು ಕೈಜೋಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಧನ ಸಹಾಯ ಮಾಡಿದವರಲ್ಲಿ
ರಾಧಾ.  ಜಿಲ್ಲಾಧ್ಯಕ್ಷ ರು,ಪುಷ್ಪ ನರೇಗೌಡರ್ ಪ್ರ.ಕಾರ್ಯದರ್ಶಿ,ಅನಿತಕೃಷ್ಣ ಜಿಲ್ಲಾಉಪಾಧ್ಯಕ್ಷರು,ಶಾಹಿನ್ ಬಾನು ತಾಲೂಕು ಅಧ್ಯಕ್ಷ ರು ಶಿವಮೊಗ್ಗ,ಲಕ್ಷ್ಮಿ ಖಜಾಂಚಿ,ಶಿವಮೊಗ್ಗ ತಾಲೂಕು,ಸುಮಂಗಲ.ಉಪಾಧ್ಯಕ್ಷ ರು.ಸಾಗರ,ಪಾರ್ವತವ್ವ. ಸಹಕಾರ್ಯದರ್ಶಿ,ಗೀತಾ.ಎಲ್.ಎಂ.ಸಹ ಕಾರ್ಯದರ್ಶಿ ತೀರ್ಥಹಳ್ಳಿ ಹಾಗೂ ಶಾಂತಿ ಆಗ್ನಿಸ್ ಸಹಕಾರ್ಯದರ್ಶಿ,ಶಿವಮೊಗ್ಗ ತಾಲೂಕು,ರಾಧಾ,ಅನಿತ,ಶಾಹಿನ್ ಇವರುಗಳು ಈ ಅತ್ಯುತ್ತಮ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು, ತಮ್ಮಗಳ ಧನ ಸಹಾಯದ ಜೊತೆಗೆ ಆಹಾರ ಕಿಟ್ ವಿತರಣೆಯಲ್ಲಿ ಸಕ್ರಿಯವಾಗಿ ಬಾಗಿಯಾಗಿದ್ದರು.
ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ ಶಿಕ್ಷಕಿ ಮಿತ್ರರಿಗೆ
ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ಎಲ್ಲಾ ಪದಾಧಿಕಾರಿಗಳ ವತಿಯಿಂದ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಹಾಗೂ  ಎರಡನೇ ಸುತ್ತಿನ ಆಹಾರ ಕಿಟ್ ವಿತರಣೆಗೆ ಧನ ಸಹಾಯ ಮಾಡುವ ಶಿಕ್ಷಕಿಯರು ಶಿವಮೊಗ್ಗ ಜಿಲ್ಲಾಧ್ಯಕ್ಷರು ಶ್ರೀಮತಿ ರಾಧಾ ರವರನ್ನು ಸಂಪರ್ಕಿಸಲು ತಿಳಿಸಿದ್ದಾರೆ..

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment